ಒಂಬತ್ತು ವರ್ಷಗಳ ಹಿಂದೆ ಮತದಾರ ನರೇಂದ್ರ ಮೋದಿಯವರಿಗೆ ನೀಡಿದ ಒಂದು ವೋಟು ಭಾರತದ ಚಿತ್ರಣವನ್ನು ಬದಲಾಯಿಸಿತು: ತೇಜಸ್ವೀ ಸೂರ್ಯ

|

Updated on: Aug 25, 2023 | 2:05 PM

ಮತದಾರನ ಒಂದು ವೋಟು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅದರ ಹುಟ್ಟಡಗಿಸಲು ಸಾಧ್ಯವಾಯಿತು, ಗಡಿಭಾಗದಲ್ಲಿ ಚೀನಾ ಅತಿಕ್ರಮಣ ನಡೆಸದಂತೆ ಹದ್ದುಬಸ್ತಿನಲ್ಲಿಡುವಂತಾಯಿತು, ಚಂದ್ರನ ಮೇಲೆ ಭಾರತ ಕೀರ್ತಿ ಪತಾಕೆ ಹಾರಿಸುವಂತಾಯಿತು, ನಮ್ಮ ಅಥ್ಲೀಟ್ ಗಳು ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು ಸಾಧ್ಯವಾಯಿತು, ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್ ಗಳು ಲಭ್ಯವಾದವು ಎಂದು ತೇಜಸ್ವೀ ಸೂರ್ಯ ಹೇಳಿದರು.

ಬೆಂಗಳೂರು: ರಾಜ್ಯ ಬಿಜೆಪಿ ಘಟಕ ಮತದಾರ ಚೇತನ ಮಹಾ ಚೇತನ ಅಭಿಯಾನವನ್ನು ಆರಂಭಿಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje), ಸಂಸದ ತೇಜಸ್ವೀ ಸೂರ್ಯ (Tejasvi Surya) ಮತ್ತು ಪಕ್ಷದ ಕೆಲ ನಾಯಕರು ಭಾಗವಹಿಸದ್ದರು. ಕಾರ್ಯಕ್ರಮದಲ್ಲಿ ಮಾತಾಡಿದ ತೇಜಸ್ವೀ ಸೂರ್ಯ ಮತದಾನದ ಮಹತ್ವವನ್ನು ವಿವರಿಸಿದರು. ಒಂಬತ್ತು ವರ್ಷಗಳ ಹಿಂದೆ ದೇಶದ ಮತದಾರ ನರೇಂದ್ರ ಮೋದಿ (Narendra Modi) ಅವರಿಗೆ ನೀಡಿದ ಒಂದು ವೋಟು ದೇಶದ ಚಿತ್ರಣವನ್ನು ಬದಲಿಸಿದೆ ಎಂದು ಅವರು ಹೇಳಿದರು. ಮತದಾರ ಪ್ರಜ್ಞಾವಂತಿಕೆಯಿಂದ ನೀಡಿದ ಮತ ಭಾರತದ ಸುಮಾರು 14 ಕೋಟಿ ಬಡವರನ್ನು ಬಡತನದ ರೇಖೆಯಿಂದ ಮೇಲೆತ್ತಲು ಸಾಧ್ಯವಾಯಿತು, ಕೋಟ್ಯಾಂತರ ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡು ಮಹಿಳೆಯರ ಗೌರವ ಉಳಿಯುವಂತಾಯಿತು, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅದರ ಹುಟ್ಟಡಗಿಸಲು ಸಾಧ್ಯವಾಯಿತು, ಗಡಿಭಾಗದಲ್ಲಿ ಚೀನಾ ಅತಿಕ್ರಮಣ ನಡೆಸದಂತೆ ಹದ್ದುಬಸ್ತಿನಲ್ಲಿಡುವಂತಾಯಿತು, ಚಂದ್ರನ ಮೇಲೆ ಭಾರತ ಕೀರ್ತಿ ಪತಾಕೆ ಹಾರಿಸುವಂತಾಯಿತು, ನಮ್ಮ ಅಥ್ಲೀಟ್ ಗಳು ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು ಸಾಧ್ಯವಾಯಿತು, ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್ ಗಳು ಲಭ್ಯವಾದವು ಎಂದು ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on