ಬೆಂಗಳೂರು: ವಿಧಾನ ಸೌಧ ಆವರಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ತನಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು. ಮಂತ್ರಿ ಸ್ಥಾನ (ministerial berth) ಸಿಗಲಿಲ್ಲವೆಂಬ ಬೇಸರ ಒಂದು ವಾರದ ಮಟ್ಟಿಗೆ ಇದ್ದಿದ್ದು ನಿಜ, ಅದರೆ ಈಗ ಅದು ದೂರವಾಗಿದೆ ಎಂದು ಹೇಳಿದ ಗೌಡರು ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ತನಗೆ ಮಂತ್ರಿ ಸ್ಥಾನ ನೋಡುವ ಘೋಷಣೆ ಮಾಡಿದ್ದಾರೆ, ಅವರಾಗಿ ನೀಡುವವರೆಗೆ ಕಾಯುವುದಾಗಿ ಹೇಳಿದರು. ಆಧಿವೇಶನ ಮುಗಿದ ಬಳಿಕ ಒಂದು ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ನಿಜ, ಶಾಸಕಕರು ಮತ್ತು ಸಚಿವರ ನಡುವೆ ಸಾಮರಸ್ಯ ಮೂಡಬೇಕಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕಾಂಗ ಪಕ್ಷದ ನಡೆಸಬೇಕು ಅನ್ನೋದು ತಮ್ಮ ಸ್ವಂತ ಅಭಿಪ್ರಾಯ ಎಂದು ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ