Daily Devotional: ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ!
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಮರಗಳು ನಮಗೆ ಉಸಿರಾಡಲು, ಆಯುಷ್ಯ ವೃದ್ಧಿಸಲು ಸಹಕರಿಸುತ್ತವೆ. ಆದರೆ, ಕೆಲವು ನಿರ್ದಿಷ್ಟ ವೃಕ್ಷಗಳು ಮನೆಯ ಗೋಡೆ, ಕಾಂಪೌಂಡ್ ಅಥವಾ ಚಾವಣಿಯ ಮೇಲೆ ಬೆಳೆದಾಗ ಅದು ಶುಭವೋ ಅಶುಭವೋ ಎಂಬ ಪ್ರಶ್ನೆ ಮೂಡುತ್ತದೆ. ಧರ್ಮಶಾಸ್ತ್ರ ಮತ್ತು ವಾಸ್ತು ಪ್ರಕಾರ, ಈ ರೀತಿಯಾಗಿ ಬೆಳೆಯುವ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಅಷ್ಟು ಶುಭಸೂಚಕವಲ್ಲ.
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಮರಗಳು ನಮಗೆ ಉಸಿರಾಡಲು, ಆಯುಷ್ಯ ವೃದ್ಧಿಸಲು ಸಹಕರಿಸುತ್ತವೆ. ಆದರೆ, ಕೆಲವು ನಿರ್ದಿಷ್ಟ ವೃಕ್ಷಗಳು ಮನೆಯ ಗೋಡೆ, ಕಾಂಪೌಂಡ್ ಅಥವಾ ಚಾವಣಿಯ ಮೇಲೆ ಬೆಳೆದಾಗ ಅದು ಶುಭವೋ ಅಶುಭವೋ ಎಂಬ ಪ್ರಶ್ನೆ ಮೂಡುತ್ತದೆ. ಧರ್ಮಶಾಸ್ತ್ರ ಮತ್ತು ವಾಸ್ತು ಪ್ರಕಾರ, ಈ ರೀತಿಯಾಗಿ ಬೆಳೆಯುವ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಅಷ್ಟು ಶುಭಸೂಚಕವಲ್ಲ.
ವಿಶೇಷವಾಗಿ ಅಶ್ವತ್ಥ ವೃಕ್ಷವು ಮನೆಯ ಗೋಡೆ ಅಥವಾ ಚಾವಣಿಯ ಮೇಲೆ ತಾನಾಗಿಯೇ ಬೆಳೆದರೆ, ಇದನ್ನು ಶುಭಕರವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ, ಇಂತಹ ವೃಕ್ಷಗಳಿಗೆ ದೇವರ ಲಹರಿಗಳು ಆವಾಹನೆ ಆಗುವ ಸಾಧ್ಯತೆ ಇರುತ್ತದೆ. ಸಂಸಾರಿಗಳಾದ ನಾವು ಆ ಶಕ್ತಿಯನ್ನು ತಡೆದುಕೊಳ್ಳಲು ಸದಾ ಪೂಜೆ, ಶುದ್ಧತೆ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಇದರಿಂದ ಮನೆಯಲ್ಲಿ ಹಣದ ಒಳಹರಿವಿಗೆ ಅಡ್ಡಿ, ಕೆಲಸಕಾರ್ಯಗಳಲ್ಲಿ ಸ್ಥಗಿತ, ಆರೋಗ್ಯ ಸಮಸ್ಯೆಗಳು ಮತ್ತು ಮನಸ್ಸಿನ ಭಾವನೆಗಳಲ್ಲಿ ನೆಮ್ಮದಿ ಇರುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ.
