Ramanagara: ಕಾಡಿಂದ ಊರಿಗೆ ಬಂದು ಕೆರೆ ನೀರಿಗಿಳಿದ ಕಾಡಾನೆಗಳು ಅಲ್ಲಿಂದ ಕಾಲು ಕಿತ್ತಲೊಲ್ಲವು!

ಅರುಣ್​ ಕುಮಾರ್​ ಬೆಳ್ಳಿ

Updated on: Jan 24, 2023 | 11:09 AM

ಕಳೆದ ಮೂರುದಿನಗಳಿಂದ ಆನೆಗಳು ಕಾಡಲ್ಲಿ ಬೀಡು ಬಿಟ್ಟಿದ್ದರೂ ಅರಣ್ಯಾಧಿಕಾರಿಗಳು ಅವುಗಳನ್ನು ಕಾಡಿಗಟ್ಟುವ ಪ್ರಯಾಸ ಮಾಡದಿರುವುದು ಅವರಲ್ಲಿ ಬೇಸರ ಮತ್ತು ಅಸಹನೆ ಮೂಡಿಸಿದೆ.

ರಾಮನಗರ: ‘ಕಾಡು ನಮ್ಮದು, ಊರು ನಮ್ಮದು, ಊರ ಮುಂದಿನ ಕೆರೆಯೂ ನಮ್ಮದು!’ ಅನ್ನುವಂತಿದೆ ಇಲ್ಲಿ ಕಾಣುತ್ತಿರುವ ನಾಲ್ಕು ಕಾಡಾನೆಗಳ (wild elephants) ವರಸೆ. ಅಂದಹಾಗೆ, ದೃಶ್ಯ ಕಂಡುಬಂದಿದ್ದು ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ಕೆರೆಯಲ್ಲಿ (Lake). ಆನೆಗಳೇನೋ ಕೆರೆನೀರಲ್ಲಿ ಸ್ವಚ್ಛಂದವಾಗಿ ಮೀಯುತ್ತಿವೆ ಆದರೆ ಊರ ಜನರಲ್ಲಿ ಆತಂಕ, ಭಯ ಹೆಚ್ಚಾಗಿದೆ. ಕೆರೆ ನೀರಿಗಿಳಿದಿರುವ ಕಾಡಾನೆಗಳು ಗ್ರಾಮದಲ್ಲಿ ಬೆಳೆದು ನಿಂತ ಪೈರುಗಳ ಜಮೀನುಗಳಿಗೆ ನುಗ್ಗದಿರುತ್ತವೆಯೇ ಎಂಬ ಭೀತಿ ಅವರನ್ನು ಕಾಡುತ್ತಿದೆ. ಕಳೆದ ಮೂರುದಿನಗಳಿಂದ ಆನೆಗಳು ಕಾಡಲ್ಲಿ ಬೀಡು ಬಿಟ್ಟಿದ್ದರೂ ಅರಣ್ಯಾಧಿಕಾರಿಗಳು ಅವುಗಳನ್ನು ಕಾಡಿಗಟ್ಟುವ ಪ್ರಯಾಸ ಮಾಡದಿರುವುದು ಅವರಲ್ಲಿ ಬೇಸರ ಮತ್ತು ಅಸಹನೆ ಮೂಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.