ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ ಹೆಚ್ಚುಕಡಿಮೆ ಒಬ್ಬರೇ ಪ್ರತಿಭಟನೆ ನಡೆಸಿದರು!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2022 | 6:57 PM

ಅವರ ಸುತ್ತಮುತ್ತ ಮಹಿಳಾ ಪೊಲೀಸರೇ ಇದ್ದಾರೆ. ಅವರು ಧಿಕ್ಕಾರ ಧಿಕ್ಕಾರ ಅಂತ ಕೂಗಿದಾಗ ಯಾರೋ ಒಂದಿಬ್ಬರು ಕ್ಷೀಣವಾಗಿ ಬಿಜೆಪಿಗೆ ಧಿಕ್ಕಾರ ಅಂತ ಪ್ರತಿಕ್ರಿಯಿಸುವುದು ಕೇಳಿಸುತ್ತದೆ. ತಮ್ಮೊಂದಿಗೆ ಬನ್ನಿ ಅಂತ ಮಹಿಳಾ ಪೊಲೀಸರು ಹೇಳಿದಾಗ ನಡೆಯಿರಿ ಅನ್ನುತ್ತಾರೆ ಆದರೆ ದಬಕ್ಕನೆ ನೆಲಕ್ಕೆ ಕೂತು ಬಿಡುತ್ತಾರೆ

Mysuru:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಈಡಿ (ED) ವಿಚಾರಣೆ ನಡೆಸುತ್ತಿರುವುದನ್ನು ಪ್ರತಿಭಟಿಸಿ ಮೈಸೂರಿನಲ್ಲಿ ಇವತ್ತು (ಶುಕ್ರವಾರ) ಕೂಡ ಕಾಂಗ್ರೆಸ್ ಕಾರ್ಯಕರ್ತರು (Congress Workers) ಪ್ರತಿಭಟನೆ (Pushpa Amarnath) ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತೆ ಪುಷ್ಪಾ ಅಮರನಾಥ ಅವರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ಹಾಗೆ ನೋಡಿದರೆ ಅವರ ಜೊತೆ ಸಂಗಡಿಗರು ಕಾಣುತ್ತಿಲ್ಲ. ಅವರ ಸುತ್ತಮುತ್ತ ಮಹಿಳಾ ಪೊಲೀಸರೇ ಇದ್ದಾರೆ. ಅವರು ಧಿಕ್ಕಾರ ಧಿಕ್ಕಾರ ಅಂತ ಕೂಗಿದಾಗ ಯಾರೋ ಒಂದಿಬ್ಬರು ಕ್ಷೀಣವಾಗಿ ಬಿಜೆಪಿಗೆ ಧಿಕ್ಕಾರ ಅಂತ ಪ್ರತಿಕ್ರಿಯಿಸುವುದು ಕೇಳಿಸುತ್ತದೆ. ತಮ್ಮೊಂದಿಗೆ ಬನ್ನಿ ಅಂತ ಮಹಿಳ ಪೊಲೀಸರು ಹೇಳಿದಾಗ ನಡೆಯಿರಿ ಅನ್ನುತ್ತಾರೆ ಆದರೆ ದಬಕ್ಕನೆ ನೆಲಕ್ಕೆ ಕೂತು ಬಿಡುತ್ತಾರೆ. ಭಾರತದಲ್ಲಿ ನಡೆಯುವ ಮುಷ್ಕರಗಳಲ್ಲೂ ವೈವಿಧ್ಯತೆ!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ                      ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.   

Follow Us
Web contact

TV9 Kannada

Read More