‘ಯಶ್ ಸಹಾಯ ಮಾಡಿದ್ದಾರೆ, ಮತ್ತೆ ಕೇಳೋದು ತಪ್ಪಾಗುತ್ತೆ’; ಹರೀಶ್ ರಾಯ್

Updated on: Aug 29, 2025 | 10:39 AM

ಹರೀಶ್ ರೈ ಅವರು ಸದ್ಯ ಕ್ಯಾನ್ಸರ್​ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕ್ಯಾನ್ಸರ್ ಈಗ ದೇಹಕ್ಕೆ ಪಸಿರುಸುತ್ತಿದೆ. ಅವರು ಇದರಿಂದ ಹೊರಗೆ ಬರೋದು ಹೇಗೆ ಎಂಬುದು ತಿಳಿಯದೇ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಯಶ್ ಸಹಾಯದ ಬಗ್ಗೆ ಹರೀಶ್ ರೈ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಕೆಜಿಎಫ್’ ಸಿನಿಮಾದಲ್ಲಿ ಚಾಚಾ ಹೆಸರಿನ ಪಾತ್ರ ಮಾಡಿದ್ದ ಹರೀಶ್ ರಾಯ್ (Harish Rai)​ ಈಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅವರು ಎಲ್ಲರ ಸಹಾಯ ಕೇಳುತ್ತಿದ್ದಾರೆ. ಹರೀಶ್ ಅವರಿಗೆ ಯಶ್ ಸಹಾಯ ಮಾಡಿಲ್ಲ ಎಂದೆಲ್ಲ ಕೆಲವರು ಹೇಳಿದ್ದರು. ಈ ವಿಚಾರವಾಗಿ ಅವರು ಮಾತನಾಡಿದ್ದಾರೆ. ಯಶ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ‘ಯಶ್ ಈಗಾಗಲೇ ಸಹಾಯ ಮಾಡಿದ್ದಾರೆ. ಅವರ ಬಳಿ ಮತ್ತೆ ಸಹಾಯ ಕೇಳೋದು ತಪ್ಪಾಗುತ್ತದೆ’ ಎಂದಿದ್ದಾರೆ ಅವರು. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 29, 2025 10:17 AM