ಮೈಸೂರು: ಪಕ್ಷದ ಅಭ್ಯರ್ಥಿ ಗಳ ಪರ ರಾಜ್ಯಾದಂತ ಪ್ರಚಾರ ನಡೆಸಿದ ಸಿದ್ದರಾಮಯ್ಯ ಇವತ್ತು ತಮ್ಮ ಸ್ವಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು. ಸಿದ್ದರಾಮಯ್ಯ (Siddaramaiah) ಜೊತೆ ಸಿನಿಮಾ ತಾರೆಯರಾದ ಶಿವರಾಜಕುಮಾರ್ (Shivarajkumar), ದುನಿಯ ವಿಜಯ್ (Duniya Vijay), ರಮ್ಯಾ (Ramya) ಮತ್ತು ಅವರ ಬೆಂಬಲಿಗರ ದಂಡೇ ಇತ್ತು. ಅವರ ಪ್ರಚಾರದಲ್ಲಿ ಎದ್ದು ಕಂಡ ಅಂಶವೆಂದರೆ, ಕಾರ್ಯಕರ್ತರು ಮತ್ತು ಬೆಂಬಲಿಗರ ಕೈಯಲ್ಲಿದ್ದ ಹಳದಿ ಬಣ್ಣದ ಧ್ವಜಗಳು. ಅ ಧ್ವಜಗಳ ನಡುವೆ ಸಿದ್ದರಾಮಯ್ಯನವರ ಫೋಟೋ ಇದೆ. ಕ್ಷೇತ್ರದಲ್ಲಿ ಮೊನ್ನೆಯಷ್ಟೇ ಕೇಂದ್ರ ಗೃಹ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪ್ರಚಾರ ನಡೆಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ