ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ…
ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ
ಬೀದರ್ನ ಔರಾದ್ನಲ್ಲಿ ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯವು ದಶಕಗಳಿಂದ ಸೂರುರಹಿತರಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿದೆ. 50 ವರ್ಷಗಳಿಂದ ಮನೆ, ವಿದ್ಯುತ್, ನೀರು, ಶೌಚಾಲಯವಿಲ್ಲದೆ ಬವಣೆ ಪಡುತ್ತಿದ್ದು, ಮಕ್ಕಳ ಆರೋಗ್ಯ, ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಸತಿ ಹಕ್ಕಿಗಾಗಿ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಸರ್ಕಾರ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.
- Suresh Naik
- Updated on: Jan 20, 2026
- 1:57 pm
ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ: ಸಿಎಂ, ಡಿಸಿಎಂ ಭಾಗಿ
ಶತಾಯುಷಿ ಭೀಮಣ್ಣ ಖಂಡ್ರೆ ನಿಧನರಾಗಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದ ಪ್ರಮುಖ ನಾಯಕ ಹಾಗೂ ಸಚಿವ ಈಶ್ವರ್ ಖಂಡ್ರೆ ಅವರ ತಂದೆಯಾಗಿದ್ದ ಇವರು, ವೀರಶೈವ ಲಿಂಗಾಯುತ ಸಮುದಾಯದ ಹಿರಿಯ ಮುಖಂಡರಾಗಿದ್ದರು. ಸರಳ, ಸ್ವಾಭಿಮಾನಿ ರಾಜಕಾರಣದ ಜೊತೆಗೆ ಶಿಕ್ಷಣ ಮತ್ತು ಸಹಕಾರ ಕ್ಷೇತ್ರಗಳಿಗೂ ಕೊಡುಗೆ ನೀಡಿದ್ದರು.
- Suresh Naik
- Updated on: Jan 17, 2026
- 10:32 pm
Bheemanna Khandre passes away: ಬೀದರ್: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ನಿಧನ
ಭೀಮಣ್ಣ ಖಂಡ್ರೆ ನಿಧನ: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ವಯೋಸಹಜ ಅನಾರೋಗ್ಯದಿಂದ ಬೀದರ್ನಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾಗಿದ್ದ ಇವರು, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಪುತ್ರ, ಸಚಿವ ಈಶ್ವರ್ ಖಂಡ್ರೆ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದೇ ಭಾಲ್ಕಿಯಲ್ಲಿ ನಡೆಯಲಿದೆ.
- Suresh Naik
- Updated on: Jan 17, 2026
- 6:35 am
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್ ATM ದರೋಡೆ ಕೇಸ್ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ
ಬೀದರ್ನಲ್ಲಿ ನಡೆದಿದ್ದ 83 ಲಕ್ಷ ರೂ ದರೋಡೆ ಪ್ರಕರಣಕ್ಕೆ ಇದೀಗ ಒಂದು ವರ್ಷ. ಮೂರು ರಾಜ್ಯಗಳ ಪೊಲೀಸರಿಗೆ ದರೋಡೆಕೋರರು ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇತ್ತ ಗಾಯಾಳು ಕುಟುಂಬಕ್ಕೆ ಜಿಲ್ಲಾಡಳಿತ ಭರವಸೆ ನೀಡಿದ ಆರ್ಥಿಕ ನೆರವು ಮತ್ತು ಉದ್ಯೋಗ ಇನ್ನೂ ಸಿಕ್ಕಿಲ್ಲ, ಇದು ಆಕ್ರೋಶಕ್ಕೆ ಕಾರಣವಾಗಿದೆ.
- Suresh Naik
- Updated on: Jan 16, 2026
- 4:42 pm
ಹಬ್ಬದ ಮನೆಯಲ್ಲೀಗ ಸೂತಕ: ಮಗಳು ಮನೆಗೆ ಬರುವ ಖುಷಿಯಲ್ಲಿದ್ದವನ ಜೀವ ತೆಗೆದ ಮಾಂಜಾ ದಾರ!
ಬೀದರ್ನಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಹಾಸ್ಟೆಲ್ನಿಂದ ಮಗಳನ್ನು ಕರೆತರಲು ವ್ಯಕ್ತಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಪ್ರದೀಪ್ ಗುಂಟಿ, ಮಾಂಜಾದಾರ ಮಾರಾಟ ಹಾಗೂ ಬಳಕೆ ಎರಡು ಕೂಡಾ ಅಪರಾಧವಾಗಿದೆ. ಹೀಗಾಗಿ ಇಂತಹ ಸನ್ನಿವೇಶಗಳು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳುವದಾಗಿ ಎಚ್ಚರಿಸಿದ್ದಾರೆ.
- Suresh Naik
- Updated on: Jan 14, 2026
- 5:19 pm
ಅಶ್ಲೀಲವಾಗಿ ಮೆಸೇಜ್, ವರದಕ್ಷಿಣೆ ಕಿರುಕುಳ: ಪೊಲೀಸ್ ಪತಿ ಕಾಟಕ್ಕೆ ಪತ್ನಿ ಕಂಗಾಲು
ಅಶ್ಲೀಲ ಮೆಸೇಜ್ ಮಾಡೋದಲ್ಲದೆ ವರದಕ್ಷಿಣೆ ಮತ್ತು ಮಾನಸಿಕ ಕಿರುಕುಳ ಕೊಡ್ತಾನೆ ಎಂದು ಯುವತಿಯೋರ್ವರು ಪೊಲೀಸ್ ಕಾನ್ಸ್ಟೇಬಲ್ ಪತಿ ವಿರುದ್ಧವೇ ಬೀದರ್ನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಮಕ್ಕಳಾಗಿಲ್ಲವೆಂದು ವರದಕ್ಷಿಣೆಗೂ ಗಂಡ ಬೇಡಿಕೆ ಇಟ್ಟಿದ್ದಾನೆ. ಜೀವ ಬೆದರಿಕೆಯೂ ಇರುವ ಕಾರಣ ತನಗೆ ರಕ್ಷಣೆ ನೀಡುವ ಜೊತೆಗೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದಾರೆ.
- Suresh Naik
- Updated on: Jan 12, 2026
- 4:03 pm
ಬೀದರ್ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ
ಬೀದರ್ ಜಿಲ್ಲೆಯ ಕಾಶೆಂಪುರ ರೈತ ರಾಮ್ ರೆಡ್ಡಿ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ನಿಂಬೆ ಕೃಷಿಯಲ್ಲಿ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಕಾಗಜಿ 12 ತಳಿಯ ನಿಂಬೆ ಬೆಳೆದು ವಾರ್ಷಿಕ ಐದಾರು ಲಕ್ಷ ಲಾಭ ಗಳಿಸುತ್ತಿದ್ದಾರೆ. ಉತ್ತಮ ಬೆಲೆ ಪಡೆಯಲು ಶೇಖರಣಾ ಘಟಕ ನಿರ್ಮಿಸಿ, ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದ್ದಾರೆ. ಇದು ಇತರ ರೈತರಿಗೆ ಮಾದರಿಯಾಗಿದೆ.
- Suresh Naik
- Updated on: Jan 2, 2026
- 8:27 pm
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಬೀದರ್ ತಾಲ್ಲೂಕಿನ ರಂಜೋಳಖೇಣಿ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ವರ್ಷದ ಅಂಗವಾಗಿ ಶಿಕ್ಷಕರು ವಿಶೇಷ ಬಜ್ಜಿ ಕಟಕ್ ರೊಟ್ಟಿ ಊಟದ ವ್ಯವಸ್ಥೆ ಮಾಡಿದರು. ಬೀದರ್ನ ಈ ಸಾಂಪ್ರದಾಯಿಕ ಊಟವನ್ನು ಸವಿದು ಮಕ್ಕಳು ಅತೀವ ಸಂತಸಗೊಂಡರು. ವಿವಿಧ ಬಗೆಯ ತರಕಾರಿಗಳಿಂದ ತಯಾರಿಸಿದ ಬಜ್ಜಿ ಮತ್ತು ಕಟಕ್ ರೊಟ್ಟಿ ಮಕ್ಕಳ ಪಾಲಿಗೆ ಹೊಸ ವರ್ಷದ ಸಿಹಿ ಉಡುಗೊರೆಯಾಯಿತು.
- Suresh Naik
- Updated on: Jan 2, 2026
- 5:01 pm
ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್ನ ಜನ
ಬೀದರ್ನ ಭಾಲ್ಕಿ ತಾಲ್ಲೂಕಿನ ದಟ್ಟ ಕಾಡಿನಲ್ಲಿ 1000 ವರ್ಷಗಳ ಪುರಾತನ ವಿಷ್ಣು ದೇವಾಲಯ ಪತ್ತೆಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಶಿವಾಜಿರಾವ್ ಅವರು ದೇವಾಲಯದ ಪವಾಡದ ಹೊಂಡದ ನೀರು ಕುಡಿದು ಹೊಸ ಜೀವನ ಕಂಡರು. ಇದೀಗ ಜೀರ್ಣೋದ್ಧಾರಗೊಂಡ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಹೊಂಡದ ನೀರಿಗೆ ಔಷಧೀಯ ಗುಣಗಳ ನಂಬಿಕೆಯೂ ಇದೆ.
- Suresh Naik
- Updated on: Dec 31, 2025
- 4:34 pm
ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ಉದ್ಯಮಿ ಸಂಜೀವ್ ಕುಮಾರ್ ಸುಗುರೆ ದೂರು ನೀಡಿದ್ದು, ಚುನಾವಣೆಯ ಸಮಯದಲ್ಲಿ ಶಾಸಕರು ತಮ್ಮಿಂದ 99 ಲಕ್ಷ ರೂಪಾಯಿ ಪಡೆದು ಖಾಲಿ ಚೆಕ್ ನೀಡಿದ್ದರು. ಹಣ ಹಿಂತಿರುಗಿಸದ ಕಾರಣ ಚೆಕ್ ಬೌನ್ಸ್ ಆಗಿದೆ. ಬೀದರ್ನ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Suresh Naik
- Updated on: Dec 29, 2025
- 10:16 am
ಕಬ್ಬಿನ ಹಣ ನೀಡಿದೇ ಕಾರ್ಖಾನೆ ಮಾಲೀಕರ ಕಳ್ಳಾಟ: ರೈತರ ಬೆನ್ನಿಗೆ ನಿಂತ ಡಿಸಿ
ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿ ವಿಳಂಬದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟಪಟ್ಟು ಬೆಳೆದ ಕಬ್ಬು ನೀಡಿದರೂ, ನಿಗದಿತ ಎರಡು ವಾರದೊಳಗೆ ಹಣ ಕೈ ಸೇರುತ್ತಿಲ್ಲ. ಸಾಲದ ಸುಳಿಗೆ ಸಿಲುಕಿರುವ ರೈತರು, ಜಿಲ್ಲಾಧಿಕಾರಿಗಳ ಎಚ್ಚರಿಕೆಯ ನಂತರವೂ ಬಾಕಿ ಹಣಕ್ಕಾಗಿ ಅಲೆದಾಡುತ್ತಿದ್ದಾರೆ.
- Suresh Naik
- Updated on: Dec 23, 2025
- 3:55 pm
ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯವರ ಬೆದರಿಕೆ: ಎಸ್ಪಿ ಕಚೇರಿಗೆ ಓಡೋಡಿ ಬಂದ ನವ ವಿವಾಹಿತರು
ಪ್ರೀತಿಸಿ ಮದುವೆಯಾದ ನವ ವಿವಾಹಿತರು ಯುವತಿ ಮನೆಯವರಿಂದ ಜೀವ ಬೆದರಿಕೆ ಹಿನ್ನೆಲೆ ಎಸ್ಪಿ ಕಚೇರಿಗೆ ಓಡೋಡಿ ಬಂದ ಘಟನೆ ಬೀದರ್ನಲ್ಲಿ ನಡೆದಿದೆ. ಜಾತಿ ಬೇರೆ ಎಂಬ ಕಾರಣಕ್ಕೆ ಯುವಕನನ್ನು ಯುವತಿ ಮನೆಯವರು ಒಪ್ಪಿಲ್ಲ. ಇನ್ನು ನಾಲ್ಕು ತಿಂಗಳ ಹಿಂದೆ ಯುವತಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಆಗಿತ್ತು. ಆ ಬಳಿಕ ಪ್ರೀತಿಸಿದವನ ಜೊತೆ ಓಡಿಹೋಗಿ ಈಕೆ ಮದುವೆ ಆಗಿದ್ದಳು ಎನ್ನಲಾಗಿದೆ.
- Suresh Naik
- Updated on: Dec 16, 2025
- 6:34 pm