Gold Price Today: ಚಿನ್ನದ ದರ ಏರಿಕೆಗೆ ಬ್ರೇಕ್, ಬದಲಾಗಿಲ್ಲ ಬೆಳ್ಳಿ ಬೆಲೆ; ವಿವರ ಇಲ್ಲಿದೆ ನೋಡಿ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಏರಿಕೆಗೆ ಬ್ರೇಕ್, ಬದಲಾಗಿಲ್ಲ ಬೆಳ್ಳಿ ಬೆಲೆ; ವಿವರ ಇಲ್ಲಿದೆ ನೋಡಿ
ಚಿನ್ನದ ದರ (ಸಾಂದರ್ಭಿಕ ಚಿತ್ರ)

Updated on: Jan 28, 2023 | 5:00 AM

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಏರಿಕೆಯ ಓಟಕ್ಕೆ ಇಂದು ಬ್ರೇಕ್ ಬಿದ್ದಿದೆ. ಕಳೆದ ಕೆಲವು ದಿನಗಳ ವಹಿವಾಟಿನಲ್ಲಿ ಎರಡೂ ಲೋಹಗಳ ದರ ಏರಿಕೆ ಕಂಡಿದ್ದವು. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 600 ರೂ. ಇಳಿಕೆಯಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 660 ರೂ. ಕುಸಿದಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 600 ರೂ. ಇಳಿಕೆಯಾಗಿ 52,500 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 660 ರೂ. ಕುಸಿದು 57,270 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ ಬದಲಾಗದೆ 72,600 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,450 ರೂ.
  • ಮುಂಬೈ- 52,500 ರೂ.
  • ದೆಹಲಿ- 52,650 ರೂ.
  • ಕೊಲ್ಕತ್ತಾ- 52,500 ರೂ.
  • ಬೆಂಗಳೂರು- 52,550 ರೂ.
  • ಹೈದರಾಬಾದ್- 52,500 ರೂ.
  • ಕೇರಳ- 52,500 ರೂ.
  • ಪುಣೆ- 52,500 ರೂ.
  • ಮಂಗಳೂರು- 52,500 ರೂ.
  • ಮೈಸೂರು- 52,500 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,310 ರೂ.
  • ಮುಂಬೈ- 57,220 ರೂ.
  • ದೆಹಲಿ- 57,420 ರೂ.
  • ಕೊಲ್ಕತ್ತಾ- 57,220 ರೂ.
  • ಬೆಂಗಳೂರು- 57,370 ರೂ.
  • ಹೈದರಾಬಾದ್- 57,270 ರೂ.
  • ಕೇರಳ- 57,270 ರೂ.
  • ಪುಣೆ- 57,270 ರೂ.
  • ಮಂಗಳೂರು- 57,320 ರೂ.
  • ಮೈಸೂರು- 57,320 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,600 ರೂ.
  • ಮೈಸೂರು- 74,600 ರೂ.
  • ಮಂಗಳೂರು- 74,600 ರೂ.
  • ಮುಂಬೈ- 72,600 ರೂ.
  • ಚೆನ್ನೈ- 74,600 ರೂ.
  • ದೆಹಲಿ- 72,600 ರೂ.
  • ಹೈದರಾಬಾದ್- 74,600 ರೂ.
  • ಕೊಲ್ಕತ್ತಾ- 72,600 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us