ಭಾರತದ ಇವಿ ಕ್ಷೇತ್ರಕ್ಕೆ ಮಹತ್ವದ ದಿನ; ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ತಯಾರಿಕೆ; ಇ-ವಿಟಾರಾದ ಜಾಗತಿಕ ರಫ್ತಿಗೆ ಚಾಲನೆ

PM Modi to flag off eVitara and Hybrid Battery Electrode: ಸುಜುಕಿ ಕಾರ್ಪೊರೇಶನ್ ಸಂಸ್ಥೆಯ ಅಹ್ಮದಾಬಾದ್​ನ ಹಂಸಲಪುರ್ ಘಟಕದಲ್ಲಿ ತಯಾರಾಗುತ್ತಿರುವ ಇ-ವಿಟಾರಾ ಎಲೆಕ್ಟ್ರಿಕ್ ಕಾರುಗಳು 100ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಇಂದು ಇ-ವಿಟಾರಾಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಮೋಟಾರ್ ಪ್ಲಾಟ್​ನಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್ ಬ್ಯಾಟರಿ ತಯಾರಿಕೆಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಅಹ್ಮದಾಬಾದ್, ಆಗಸ್ಟ್ 26: ಮಾರುತಿ ಸುಜುಕಿಯ ಹೊಸ ಹಿಟ್ ಬ್ರ್ಯಾಂಡ್ ಆದ ಗ್ರ್ಯಾಂಡ್ ವಿಟಾರಾದ ಇವಿ ಆವೃತ್ತಿಯಾದ ಇ-ವಿಟಾರಾ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ-ವಿಟಾರಾ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ. ಇದೂ ಸೇರಿದಂತೆ ಪ್ರಧಾನಿಗಳು ಇಂದು ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಸೇರಿ ಮೂರು ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿರುವ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಫ್ಯಾಕ್ಟರಿಗೂ ಪ್ರಧಾನಿಗಳು ಚಾಲನೆ ನೀಡಲಿದ್ದಾರೆ.

ಇ-ವಿಟಾರಾ ಇವಿಗಳ ರಫ್ತು…

ಅಹ್ಮದಾಬಾದ್​ನ ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ನಡೆದಿದೆ. ಈ ಬ್ಯಾಟರಿ ವಾಹನಗಳು ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಜಪಾನ್, ಯೂರೋಪ್​ನಂತಹ ಉನ್ನತ ಮಾರುಕಟ್ಟೆಗಳಿಗೆ ಈ ವಾಹನಗಳು ಸರಬರಾಜಾಗಲಿರುವುದು ಗಮನಾರ್ಹ. ಜಪಾನ್ ಮೂಲದ ಸುಜುಕಿ ಸಂಸ್ಥೆಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಯೋಜನೆ ಇದು. ಇದರೊಂದಿಗೆ ಹಂಸಲಪುರವು ಸುಜುಕಿಯ ಎಲೆಕ್ಟ್ರಿಕ್ ವಾಹನಗಳಿಗೆ ಜಾಗತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಇವತ್ತಿಂದ ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಲ್ಲಿಸಿದ ಭಾರತ; ಐರೋಪ್ಯ ದೇಶಗಳಿಂದಲೂ ಇದೇ ಕ್ರಮ

ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳ ತಯಾರಿಕೆ

ಸುಜುಕಿ, ಟೋಶಿಬಾ ಮತ್ತು ಡೆನ್ಸೋ ಕಂಪನಿಗಳು ಜಂಟಿಯಾಗಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳನ್ನು ತಯಾರಿಸಲಿವೆ. ಟಿಡಿಎಸ್ ಲಿಥಿಯಂ ಅಯಾನ್ ಬ್ಯಾಟರಿ ಘಟಕದಲ್ಲಿ ಈ ಎಲೆಕ್ಟ್ರೋಡ್​ಗಳು ತಯಾರಾಗಲಿವೆ. ಈ ಎಲೆಕ್ಟ್ರೋಡ್​ಗಳು ಇವಿ ಬ್ಯಾಟರಿಗಳ ಕ್ಷಮತೆಯನ್ನು ಹೆಚ್ಚಿಸಬಲ್ಲುವು. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತಿರುವುದು ಇದೇ ಮೊದಲು.

ಪ್ರಧಾನಿಗಳ ಎಕ್ಸ್ ಪೋಸ್ಟ್

ಈ ಎರಡು ಯೋಜನೆಗಳು ಎಲೆಕ್ಟ್ರಿಕ್ ವಾಹನ ಹಾಗೂ ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ವಿಚಾರ ಎನಿಸಿದೆ.

ಇದನ್ನೂ ಓದಿ: ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಗುಜರಾತ್ ಭೇಟಿಯಲ್ಲಿ ಈ ಎರಡು ಯೋಜನೆಗಳು ಸೇರಿದಂತೆ ಇನ್ನೂ ಕೆಲವಾರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 5,400 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ನೀಡಲಿದ್ದಾರೆ.

ಇದರಲ್ಲಿ ವಿವಿಧ ರೈಲ್ವೆ ಯೋಜನೆಗಳು, ವಿದ್ಯುತ್ ವಿತರಣೆ ಯೋಜನೆಗಳು ಮತ್ತು ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳು ಒಳಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Tue, 26 August 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us