TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್

Generative AI: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ಎಲ್ಲಾ ಸಾಫ್ಟ್​ವೇರ್ ಎಂಜಿನಿಯರುಗಳಿಗೂ ಜನರೇಟಿವ್ ಎಐ ಟೆಕ್ನಾಲಜಿಯ ತರಬೇತಿ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಜನರೇಟಿವ್ ಎಐ ಬಳಕೆ ಹೆಚ್ಚಲಿದ್ದು, ಅದಕ್ಕಾಗಿ ಟಿಸಿಎಸ್ ಉದ್ಯೋಗಿಗಳನ್ನು ಅಣಿಗೊಳಿಸಲಾಗುತ್ತಿದೆ. ಈಗ ಇರುವ ಸರ್ವಿಸ್ ಪ್ರಾಜೆಕ್ಟ್​ಗಳನ್ನು ಬೇಗ ಮುಗಿಸಲು ಮತ್ತು ಕ್ಷಮತೆ ಸಾಧಿಸಲೂ ಈ ಟೆಕ್ನಾಲಜಿ ಸಹಾಯಕವಾಗಬಹುದು.

TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್

Updated on: Jan 16, 2024 | 6:39 PM

ನವದೆಹಲಿ, ಜನವರಿ 16: ಭಾರತದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆ ಎನಿಸಿದ ಟಿಸಿಎಸ್ ತನ್ನ ಎಲ್ಲಾ ಸಾಫ್ಟ್​ವೇರ್ ಎಂಜಿನಿಯರುಗಳಿಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ (generative AI) ತರಬೇತಿ ನೀಡುತ್ತಿದೆ. ಈಗಾಗಲೇ ಕೆಲವಾರು ತಿಂಗಳಿಂದ ಜನರೇಟಿವ್ ಎಐ ತರಬೇತಿ ನಡೆಯುತ್ತಿರುವುದು ಗಮನಾರ್ಹ. ಮುಂಬರುವ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಎಐ ಸರ್ವಿಸ್​ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಟಿಸಿಎಸ್​ನ ಉದ್ಯೋಗಿಗಳನ್ನು ಈ ಅವಕಾಶಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಟಿಸಿಎಸ್ ಸಂಸ್ಥೆ ಇತ್ತೀಚೆಗಷ್ಟೇ ಎಐ ಡಾಟ್ ಕ್ಲೌಡ್ ಎಂಬ ಘಟಕ ಆರಂಭಿಸಿದೆ. ಸುಮಾರು 250 ಜನರೇಟಿವ್ ಎಐ ಪವರ್ಡ್ ಪ್ರಾಜೆಕ್ಟ್​​ಗಳಲ್ಲಿ ಕಂಪನಿ ನಿರತವಾಗಿದೆ. ಹಾಗೆಯೇ, ಗ್ರಾಹಕರಿಗೆ ನೀಡಲಾಗುತ್ತಿರುವ ಐಟಿ ಸರ್ವಿಸ್​ನ ಕೆಲಸದಲ್ಲಿ ಇನ್ನಷ್ಟು ಕ್ಷಮತೆ ಸಾಧಿಸಲು ಮತ್ತು ಸಮಯ ಉಳಿಸಲು ಜನರೇಟಿವ್ ಎಐ ಟೆಕ್ನಾಲಜಿಯನ್ನು ಟಿಸಿಎಸ್ ಎಂಜಿನಿಯರುಗಳು ಸಮರ್ಪಕವಾಗಿ ಬಳಕೆ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್​ಬಿಐನ ಹೊಸ ನಿಯಮ?

‘ಈಗ ಜನರೇಟಿವ್ ಎಐ ಅನ್ವಯ ಆಗುವ ಪ್ರಕರಣಗಳು ಕಡಿಮೆ ಇರಬಹುದು. ಈ ಟೆಕ್ನಾಲಜಿಯಲ್ಲಿ ಭಾರೀ ದೊಡ್ಡ ಪರಿವರ್ತನೆ ಯಾವಾಗ ಬೇಕಾದರೂ ಆಗಬಹುದು’ ಎಂದು ಎಐ ಡಾಟ್ ಕ್ಲೌಡ್ ಯೂನಿಟ್​ನ ಮುಖ್ಯಸ್ಥ ಶಿವ ಗಣೇಸನ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದ ಅತಿ ದೊಡ್ಡ ಐಟಿ ಸರ್ವಿಸ್ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್​ನಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ಹೆಚ್ಚಿನವರು ಸಾಫ್ಟ್​ವೇರ್ ಎಂಜಿನಿಯರುಗಳಾಗಿದ್ದಾರೆ. ಇವರ ಪೈಕಿ ಕಳೆದ 9 ತಿಂಗಳಲ್ಲಿ ಸುಮಾರು ಒಂದೂವರೆ ಲಕ್ಷ ಉದ್ಯೋಗಿಗಳಿಗೆ ಜನರೇಟಿವ್ ಎಐ ಟೆಕ್ನಾಲಜಿಯ ತರಬೇತಿ ನೀಡಲಾಗಿದೆಯಂತೆ. ಮುಂಬರುವ ಒಂದೆರಡು ವರ್ಷದೊಳಗೆ ತರಬೇತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್

‘ಉದ್ಯೋಗಿಗಳು ತಯಾರಾಗುತ್ತಿದ್ದಾರೆ. ಇಡೀ ಸಂಸ್ಥೆಯೇ ಎಐಗೆ ಸಜ್ಜಾಗಲು ಹೆಚ್ಚೇನೂ ಸಮಯ ಬೇಕಾಗುವುದಿಲ್ಲ. ಎಐ ಸಿದ್ಧ ಇರುವ ಅತಿದೊಡ್ಡ ವರ್ಕ್​ಫೋರ್ಸ್ ಅನ್ನು ನಿರ್ಮಿಸುವ ವಿಶ್ವಾಸ ನಮಗಿದೆ’ ಎಂದು ಟಿಸಿಎಸ್​ನ ಸಿಟಿಒ ಹ್ಯಾರಿಕ್ ವಿನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us