ಶಾಸಕ ರಿಜ್ವಾನ್​ಗೆ ಶುಭ ಕೋರಿ ವಾಪಸಾಗುತ್ತಿದ್ದ ಬೆಂಬಲಿಗನ​ ಮೇಲೆ ಅಟ್ಯಾಕ್

ಬೆಂಗಳೂರು: ನಗರದಲ್ಲಿ ಸೈಯದ್ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆದಿದೆ. ಸೋಮೇಶ್ವರನಗರದಲ್ಲಿರುವ ರಿಯಾಜ್​​ ಮನೆ ಬಳಿಯೇ 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಿಯಾಜ್​ನ ತಲೆ, ಬೆನ್ನು, ಕುತ್ತಿಗೆ, ಕಾಲುಗಳ ಮೇಲೆ ಹಲ್ಲೆ ಆಗಿದ್ದು, ಗಾಯಾಳು ರಿಯಾಜ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜ್ ಕಳೆದ 10 ವರ್ಷಗಳಿಂದ ಎಸ್​ಡಿಪಿಐನಲ್ಲಿದ್ದರು. 2 ವರ್ಷದ ಹಿಂದೆ ಕಾಂಗ್ರೆಸ್​ಗೆ ಸೇರಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ. ಬೆಳಗ್ಗೆ ಶಿವಾಜಿನಗರಕ್ಕೆ ತೆರಳಿದ್ದ […]

ಶಾಸಕ ರಿಜ್ವಾನ್​ಗೆ ಶುಭ ಕೋರಿ ವಾಪಸಾಗುತ್ತಿದ್ದ ಬೆಂಬಲಿಗನ​ ಮೇಲೆ ಅಟ್ಯಾಕ್
ಸಾಧು ಶ್ರೀನಾಥ್​ Edited By:

Updated on: Mar 07, 2023 | 12:20 PM

ಬೆಂಗಳೂರು: ನಗರದಲ್ಲಿ ಸೈಯದ್ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆದಿದೆ. ಸೋಮೇಶ್ವರನಗರದಲ್ಲಿರುವ ರಿಯಾಜ್​​ ಮನೆ ಬಳಿಯೇ 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಿಯಾಜ್​ನ ತಲೆ, ಬೆನ್ನು, ಕುತ್ತಿಗೆ, ಕಾಲುಗಳ ಮೇಲೆ ಹಲ್ಲೆ ಆಗಿದ್ದು, ಗಾಯಾಳು ರಿಯಾಜ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜ್ ಕಳೆದ 10 ವರ್ಷಗಳಿಂದ ಎಸ್​ಡಿಪಿಐನಲ್ಲಿದ್ದರು. 2 ವರ್ಷದ ಹಿಂದೆ ಕಾಂಗ್ರೆಸ್​ಗೆ ಸೇರಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.

ಬೆಳಗ್ಗೆ ಶಿವಾಜಿನಗರಕ್ಕೆ ತೆರಳಿದ್ದ ಸೈಯದ್ ರಿಯಾಜ್​ ಉಪಚುನಾವಣೆಯಲ್ಲಿ ಗೆದ್ದ ಶಾಸಕ ರಿಜ್ವಾನ್​ ಅರ್ಷದ್​ಗೆ ಶುಭಾಶಯ ಕೋರಿ ಮನೆಗೆ ಹಿಂದಿರುಗಿದ ವೇಳೆ ರಿಯಾಜ್​ ಮೇಲೆ ದುಷ್ಕರ್ಮಿಗಳ ದಾಳಿ ಆಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:08 am, Tue, 10 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us