ಸದ್ದುಗುಂಟೆಪಾಳ್ಯದಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ಕಿರಿಕ್‌, ಚಿಮ್ಮಿದ ರಕ್ತ..!

ಬೆಂಗಳೂರು: ಆಟೋ ಸಂತೋಷ, ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಇರುವ ಸದ್ದುಗುಂಟೆಪಾಳ್ಯ ನಿವಾಸಿ. ಸಂತೋಷನ ರಕ್ತ ಹರಿಸಿರುವುದು ಆನಂದ ಎಂಬಾತ. ಕೊಲೆಯಾದ ಆಟೋ ಸಂತೋಷ್, ತನ್ನ ಹೆಂಡತಿ ಜೊತೆ ಜಗಳ ಮಾಡಿಕೊಂಡು ಒಂಟಿಯಾಗಿ ವಾಸವಿದ್ದ. ಈ ನಡುವೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಸಂತೋಷ್ ಮತ್ತು ಆನಂದ್ ನಡುವೆ ಜಗಳವಾಗಿತ್ತು. ಆದ್ರೆ ನಿನ್ನೆ ಪಕ್ಕಾ ಸ್ಕೆಚ್ ಹಾಕ್ಕೊಂಡು ಸಂತೋಷ್ ಮನೆಗೆ ಬಂದ ಆನಂದ್ ಸಂತೋಷನ ಎದೆ, ಕುತ್ತಿಗೆ, ಮುಖಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆ ಹಂತಕನನ್ನು […]

ಸದ್ದುಗುಂಟೆಪಾಳ್ಯದಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ಕಿರಿಕ್‌, ಚಿಮ್ಮಿದ ರಕ್ತ..!
ಸಾಧು ಶ್ರೀನಾಥ್​

Updated on: Dec 22, 2019 | 7:21 AM

ಬೆಂಗಳೂರು: ಆಟೋ ಸಂತೋಷ, ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಇರುವ ಸದ್ದುಗುಂಟೆಪಾಳ್ಯ ನಿವಾಸಿ. ಸಂತೋಷನ ರಕ್ತ ಹರಿಸಿರುವುದು ಆನಂದ ಎಂಬಾತ. ಕೊಲೆಯಾದ ಆಟೋ ಸಂತೋಷ್, ತನ್ನ ಹೆಂಡತಿ ಜೊತೆ ಜಗಳ ಮಾಡಿಕೊಂಡು ಒಂಟಿಯಾಗಿ ವಾಸವಿದ್ದ. ಈ ನಡುವೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಸಂತೋಷ್ ಮತ್ತು ಆನಂದ್ ನಡುವೆ ಜಗಳವಾಗಿತ್ತು. ಆದ್ರೆ ನಿನ್ನೆ ಪಕ್ಕಾ ಸ್ಕೆಚ್ ಹಾಕ್ಕೊಂಡು ಸಂತೋಷ್ ಮನೆಗೆ ಬಂದ ಆನಂದ್ ಸಂತೋಷನ ಎದೆ, ಕುತ್ತಿಗೆ, ಮುಖಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆ ಹಂತಕನನ್ನು ಬೆನ್ನಟ್ಟಿ ಹಿಡಿದ ಖಾಕಿ..!
ಕೊಲೆ ಮಾಡಿದ್ದ ಆನಂದ್, ಸಂತೋಷ್‌ ಮನೆ ಕಡೆಯಿಂದ ಬರುತ್ತಿದ್ದ ವೇಳೆ ಅಲ್ಲೇ ರೌಂಡ್ಸ್ ನಲ್ಲಿದ್ದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೆಡ್ ಕಾನ್‌ಸ್ಟೇಬಲ್ ವಿಜಯ್, ಆನಂದನನ್ನು ಗಮನಿಸಿದ್ದಾರೆ. ಅವನ ರಕ್ತಸಿಕ್ತ ಬಟ್ಟೆಗಳನ್ನ ನೋಡಿ, ಅನುಆನ ಹೆಚ್ಚಾಗಿ, ಚೇಸ್ ಮಾಡಿ ಹಿಡಿದಿದ್ದಾರೆ. ನಂತ್ರ ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮದ್ ರಫಿ ಆನಂದ್ ಜೊತೆ ಮತ್ತೊಬ್ಬ ಆರೋಪಿ ಮೆಹಬೂಬ್‌ನನ್ನು ಬಂಧಿಸಿದ್ದಾರೆ.

Published On - 7:18 am, Sun, 22 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us