ಚಾಮರಾಜಪೇಟೆಯ ಕಿಷ್ಕಿಂಧೆಯಿಂದ ಬೆಂಗಳೂರು CCB ಕಚೇರಿ ಸ್ಥಳಾಂತರ?

ಬೆಂಗಳೂರು: ತನಿಖೆ ನಡೆಸಲು ಸೂಕ್ತ ಜಾಗವಿಲ್ಲದ ಕಾರಣ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,  ಡೋಂಟ್ ವರಿ ಸಿಸಿಬಿ ಕಚೇರಿ ಇಲ್ಲಿ ಇರಲ್ಲ ಎಂದು ಹೇಳಿದ್ದಾರೆ. ಸಿಸಿಬಿ ಕಚೇರಿಯನ್ನು ಶಿಫ್ಟ್​ ಮಾಡಲು ಆಯುಕ್ತ ಭಾಸ್ಕರ್ ರಾವ್ ಹಾಗೂ ಸಿಸಿಬಿ ಜಂಟಿ‌ ಆಯುಕ್ತ ಸಂದೀಪ್ ಪಾಟೀಲ್​ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕಚೇರಿ ಶಿಫ್ಟ್ ಜೊತೆಗೆ ಗುಜರಿ‌ ವಾಹನಗಳ ಕ್ರಷಿಂಗ್ ವ್ಯವಸ್ಥೆಗೂ ಸಿದ್ಧತೆ […]

ಚಾಮರಾಜಪೇಟೆಯ ಕಿಷ್ಕಿಂಧೆಯಿಂದ ಬೆಂಗಳೂರು CCB ಕಚೇರಿ ಸ್ಥಳಾಂತರ?
ಸಾಧು ಶ್ರೀನಾಥ್​

Updated on: Nov 30, 2019 | 1:46 PM

ಬೆಂಗಳೂರು: ತನಿಖೆ ನಡೆಸಲು ಸೂಕ್ತ ಜಾಗವಿಲ್ಲದ ಕಾರಣ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,  ಡೋಂಟ್ ವರಿ ಸಿಸಿಬಿ ಕಚೇರಿ ಇಲ್ಲಿ ಇರಲ್ಲ ಎಂದು ಹೇಳಿದ್ದಾರೆ.

ಸಿಸಿಬಿ ಕಚೇರಿಯನ್ನು ಶಿಫ್ಟ್​ ಮಾಡಲು ಆಯುಕ್ತ ಭಾಸ್ಕರ್ ರಾವ್ ಹಾಗೂ ಸಿಸಿಬಿ ಜಂಟಿ‌ ಆಯುಕ್ತ ಸಂದೀಪ್ ಪಾಟೀಲ್​ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕಚೇರಿ ಶಿಫ್ಟ್ ಜೊತೆಗೆ ಗುಜರಿ‌ ವಾಹನಗಳ ಕ್ರಷಿಂಗ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗುತ್ತಿದೆ.

ಜೆ.ಪಿ. ಭವನ ಬಳಿಯ ಜಕ್ಕರಾಯನಕೆರೆಯ 3 ಎಕರೆ ಮೈದಾನದಲ್ಲಿ
ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಜೆ.ಪಿ. ಭವನ ಬಳಿಯ ಜಕ್ಕರಾಯನಕೆರೆಯ 3 ಎಕರೆ ಮೈದಾನದಲ್ಲಿ ಸಿಸಿಬಿ ಕಚೇರಿ ಶಿಫ್ಟ್ ಮಾಡುವ ಪ್ಲಾನ್ ಇದೆ. ಅಲ್ಲದೆ, ನಗರದ ಎಲ್ಲಾ ಠಾಣೆಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಪೊಲೀಸರು ಇದೇ ಮೈದಾನದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಹಾಗಾಗಿ ಇದೇ ಮೈದಾನದಲ್ಲಿ ಪರೇಡ್ ಗ್ರೌಂಡ್ ಹಾಗೂ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲು ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

Published On - 1:37 pm, Sat, 30 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us