ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ CCB.. ಮತ್ತೆ 3 ನಟರು, 2 ನಟಿಯರಿಗೆ ನೋಟಿಸ್?

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಬಳಿ ಹಲವು ನಟ-ನಟಿಯರ ಪಟ್ಟಿ ಇದ್ದು, ಮತ್ತೆ ಮೂವರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದ್ದು ಕೇವಲ ಟ್ರೈಲರ್ ಎನ್ನಲಾಗುತ್ತಿದೆ. ಸಿಸಿಬಿ ಬಳಿ ಹಲವು ಸೆಲಬ್ರಟಿಗಳ ಲಿಸ್ಟ್ ಇದ್ದು, ಸಿಸಿಬಿ ಮೂಲಗಳು ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿವೆ. ಐವರ ಚಲನವಲನಗಳೂ ಸಿಸಿಬಿ ರಾಡಾನ್​ನಲ್ಲಿದೆ CCBಯ ಈ […]

ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ CCB.. ಮತ್ತೆ 3 ನಟರು, 2 ನಟಿಯರಿಗೆ ನೋಟಿಸ್?
ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)

Updated on: Sep 19, 2020 | 10:18 AM

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಬಳಿ ಹಲವು ನಟ-ನಟಿಯರ ಪಟ್ಟಿ ಇದ್ದು, ಮತ್ತೆ ಮೂವರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದ್ದು ಕೇವಲ ಟ್ರೈಲರ್ ಎನ್ನಲಾಗುತ್ತಿದೆ. ಸಿಸಿಬಿ ಬಳಿ ಹಲವು ಸೆಲಬ್ರಟಿಗಳ ಲಿಸ್ಟ್ ಇದ್ದು, ಸಿಸಿಬಿ ಮೂಲಗಳು ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿವೆ.

ಐವರ ಚಲನವಲನಗಳೂ ಸಿಸಿಬಿ ರಾಡಾನ್​ನಲ್ಲಿದೆ
CCBಯ ಈ ಲಿಸ್ಟ್​ನಲ್ಲಿ ಹೊಸ ನಟಿಯರು, ಉದ್ಯಮಿಗಳೇ ಇದ್ದಾರೆ. ಸದ್ಯ ಇಬ್ಬರು ನಟಿಯರು & ಐದು ಪೆಡ್ಲರ್​ಗಳು ಜೈಲುಪಾಲಾಗಿದ್ದಾರೆ. ಕೇಸ್ ಸಂಬಂಧ ಈಗಾಗಲೇ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ವಿಚಾರಣೆ ಮುಕ್ತಾಯವಾಗಿದೆ.

ಇಂದು ವಿಚಾರಣೆಗೆ ಬರುವಂತೆ ಸಿಸಿಬಿ ನೋಟಿಸ್​ ನೀಡಿದ ಹಿನ್ನೆಲೆಯಿಂದ ಸಿಸಿಬಿ ಕಚೇರಿಗೆ ಆರ್ ವಿ ಯುವರಾಜ್,ನಟ ಸಂತೋಷ್ ಕುಮಾರ್ ಆಗಮಿಸಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಕೂಡ ಹಾಜರಾಗಿದ್ದಾರೆ. ಈ ಮೂವರ ಬಳಿಕ ಮತ್ತೆ ಮೂರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಸದ್ಯ ಈ ಐವರ ಚಲನವಲನಗಳನ್ನು ಸಿಸಿಬಿ ಅಧಿಕಾರಿಗಳು ಮಾನಿಟರ್ ಮಾಡುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us