ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ. ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ […]

ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!
ಆಯೇಷಾ ಬಾನು

Updated on: Jun 03, 2020 | 3:12 PM

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ.

ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ 10ದಿನಗಳ ಕಷ್ಟಡಿಗೆ ಪಡೆದಿದ್ದಾರೆ. ಪೂಜಾರಿಯ ಬಲಗೈ ಬಂಟನಾಗಿರುವ ಗುಲಾಮ್​ನನ್ನು ಸದ್ಯ ಬೆಂಗಳೂರಿಗೆ ಕರೆತಂದು ವಿಚಾರಣೆ‌ ನಡೆಸಲಾಗುತ್ತೆ. ಈ ವೇಳೆ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.

Published On - 11:15 am, Wed, 3 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us