ಬೌನ್ಸ್​ ಬೈಕಲ್ಲಿ ಬರ್ತಾರೆ, ದೊಣ್ಣೆಯಿಂದ ಹೊಡೆದು ಸರ ಕದೀತಾರೆ ಹುಷಾರ್!

ಬೆಂಗಳೂರು: ‌‌ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದ ಖದೀಮರು ‌‌ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ‌‌ಡಿಸೆಂಬರ್​ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ‌‌ಒಂದೇ ಗ್ಯಾಂಗ್​ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ‌. ‌ಮೊದಲು ಕೆ.ಆರ್.ಪುರದಲ್ಲಿ […]

ಬೌನ್ಸ್​ ಬೈಕಲ್ಲಿ ಬರ್ತಾರೆ, ದೊಣ್ಣೆಯಿಂದ ಹೊಡೆದು ಸರ ಕದೀತಾರೆ ಹುಷಾರ್!
ಸಾಧು ಶ್ರೀನಾಥ್​

Updated on: Dec 13, 2019 | 1:22 PM

ಬೆಂಗಳೂರು: ‌‌ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದ ಖದೀಮರು ‌‌ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ‌‌ಡಿಸೆಂಬರ್​ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‌‌ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ‌‌ಒಂದೇ ಗ್ಯಾಂಗ್​ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ‌. ‌ಮೊದಲು ಕೆ.ಆರ್.ಪುರದಲ್ಲಿ ಕೃತ್ಯವೆಸಗಿ ಬಳಿಕ ಆವಲಹಳ್ಳಿಯ ಬಳಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. 2 ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ‌ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Published On - 1:21 pm, Fri, 13 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us