ಬೊಗಳಿದ್ದಕ್ಕೆ ನಾಯಿಯನ್ನೇ ಹೊಡೆದು ಸಾಯಿಸಿದ ಡೆಲಿವರಿ ಬಾಯ್

ಬೆಂಗಳೂರು: ಬೊಗಳಿದ್ದಕ್ಕೆ ನಾಯಿಯನ್ನು ಡಿಲೆವರಿ ಬಾಯ್ ಹೊಡೆದು ಸಾಯಿಸಿರುವ ಘಟನೆ ಹೆಚ್​ಎಸ್​ಆರ್​ ಲೇಔಟ್​ನ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್ ಬಳಿ ನಡೆದಿದೆ. ಕಳೆದ ಬುಧವಾರ ಫುಡ್ ಡಿಲೆವರಿ ಮಾಡಲು ತೇಜ ಎಂಬುವನ ಬಂದಿದ್ದ. ಈ ವೇಳೆ ಡಿಲೆವರಿ ಬಾಯ್ ತೇಜನನ್ನು ನೋಡಿ ನಾಯಿಗಳು ಬೊಗಳಿವೆ. ಈ ವೇಳೆ ಕಟ್ಟಿಗೆ ಹಿಡಿದು ನಾಯಿಗಳನ್ನ ಅಟ್ಟಾಡಿಸಿದ್ದಾನೆ. ಆಗ ತೇಜನ ಕೈಗೆ ನಾಯಿ ಮರಿಯೊಂದು ಸಿಕ್ಕಿಹಾಕಿಕೊಂಡಿದೆ. ನಾಯಿಯನ್ನು ಮನ ಬಂದಂತೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಡೆಪಾಳ್ಯ ಪೊಲೀಸ್ […]

ಬೊಗಳಿದ್ದಕ್ಕೆ ನಾಯಿಯನ್ನೇ ಹೊಡೆದು ಸಾಯಿಸಿದ ಡೆಲಿವರಿ ಬಾಯ್
ಸಾಧು ಶ್ರೀನಾಥ್​

Updated on: Dec 02, 2019 | 8:04 AM

ಬೆಂಗಳೂರು: ಬೊಗಳಿದ್ದಕ್ಕೆ ನಾಯಿಯನ್ನು ಡಿಲೆವರಿ ಬಾಯ್ ಹೊಡೆದು ಸಾಯಿಸಿರುವ ಘಟನೆ ಹೆಚ್​ಎಸ್​ಆರ್​ ಲೇಔಟ್​ನ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್ ಬಳಿ ನಡೆದಿದೆ.

ಕಳೆದ ಬುಧವಾರ ಫುಡ್ ಡಿಲೆವರಿ ಮಾಡಲು ತೇಜ ಎಂಬುವನ ಬಂದಿದ್ದ. ಈ ವೇಳೆ ಡಿಲೆವರಿ ಬಾಯ್ ತೇಜನನ್ನು ನೋಡಿ ನಾಯಿಗಳು ಬೊಗಳಿವೆ. ಈ ವೇಳೆ ಕಟ್ಟಿಗೆ ಹಿಡಿದು ನಾಯಿಗಳನ್ನ ಅಟ್ಟಾಡಿಸಿದ್ದಾನೆ. ಆಗ ತೇಜನ ಕೈಗೆ ನಾಯಿ ಮರಿಯೊಂದು ಸಿಕ್ಕಿಹಾಕಿಕೊಂಡಿದೆ. ನಾಯಿಯನ್ನು ಮನ ಬಂದಂತೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಹರೀಶ್ ಎಂಬುವರು ದೂರು ನೀಡಿದ್ದಾರೆ. ಡಿಲೆವರಿ ಬಾಯ್ ತೇಜ ವಿರುದ್ಧ ಐಪಿಸಿ ಸೆಕ್ಷನ್ 428ರಡಿಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us