ದುಬೈನಲ್ಲಿ ಉದ್ಯೋಗ ಆಮಿಷ, ಆನ್​ಲೈನ್​ನಲ್ಲಿ ಮೋಸ ಹೋದ ಉಪನ್ಯಾಸಕ

ಬೆಂಗಳೂರು: ದುಬೈನಲ್ಲಿ ಕೆಲಸ‌ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ‌ ಮಾಡುತ್ತಿದ್ದ ಶ್ರೀನಿವಾಸ್​ ವಂಚನೆಗೊಳಗಾದವರು. ಶ್ರೀನಿವಾಸ್​ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್​ ಅನ್ನು ವೆಬ್ ಸೈಟ್​ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್​ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ‌ ಎಂದು ಹೇಳಲಾಗಿತ್ತು. ಕೆಲಸ‌ ಸಿಕ್ಕ ಮೇಲೆ ಹಣ ಮತ್ತೆ ವಾಪಸ್‌ ನೀಡುವುದಾಗಿ ವೆಬ್​ಸೈಟ್​ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್​ಪ್ರೈಸಸ್​ ಎಂಬ […]

ದುಬೈನಲ್ಲಿ ಉದ್ಯೋಗ ಆಮಿಷ, ಆನ್​ಲೈನ್​ನಲ್ಲಿ ಮೋಸ ಹೋದ ಉಪನ್ಯಾಸಕ
ಸಾಧು ಶ್ರೀನಾಥ್​

Updated on: Nov 23, 2019 | 3:26 PM

ಬೆಂಗಳೂರು: ದುಬೈನಲ್ಲಿ ಕೆಲಸ‌ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ‌ ಮಾಡುತ್ತಿದ್ದ ಶ್ರೀನಿವಾಸ್​ ವಂಚನೆಗೊಳಗಾದವರು.

ಶ್ರೀನಿವಾಸ್​ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್​ ಅನ್ನು ವೆಬ್ ಸೈಟ್​ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್​ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ‌ ಎಂದು ಹೇಳಲಾಗಿತ್ತು. ಕೆಲಸ‌ ಸಿಕ್ಕ ಮೇಲೆ ಹಣ ಮತ್ತೆ ವಾಪಸ್‌ ನೀಡುವುದಾಗಿ ವೆಬ್​ಸೈಟ್​ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್​ಪ್ರೈಸಸ್​ ಎಂಬ ಅಕೌಂಟ್‌ಗೆ 1.90 ಲಕ್ಷ ಹಣ ವರ್ಗಾವಣೆ ಮಾಡಿದ್ದರು.

ನಂತರ ಹೆಲ್ತ್ ಇನ್ಸುರೆನ್ಸ್‌ಗೆ ಮತ್ತೆ 5000 ಯುಎಸ್‌ ಡಾಲರ್ ಹಣಕ್ಕಾಗಿ ವೆಬ್​ಸೈಟ್​ನಲ್ಲಿ ಬೇಡಿಕೆ ಬಂದಿತ್ತು. ಇದು ವಂಚನೆ ಎಂದು ಅರಿತ ಶ್ರೀನಿವಾಸ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Published On - 3:23 pm, Sat, 23 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us