CCB ಎಸಿಪಿ ಪ್ರಭುಶಂಕರ್​ಗೆ ನಾನೇ 62 ಲಕ್ಷ ಹಣ ನೀಡಿದ್ದೇನೆ -ACB ಮುಂದೆ ಸಾಕ್ಷ್ಯ ದಾಖಲು!

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಸಿಗರೇಟ್ ಡೀಲರ್​ಗಳಿಂದ ಸಿಸಿಬಿ ಪೊಲೀಸರು ಲಂಚ ಪಡೆದ ಪ್ರಕರಣ ಸಂಬಂಧ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಎಸಿಬಿ ದಾಖಲಿಸಿಕೊಂಡಿದೆ. ಎರಡು ದಿನಗಳ ಕಾಲ 8 ಜನ ಸಿಗರೇಟ್ ವಿತರಕರು ಸೇರಿ 10 ಜನರ ವಿಚಾರಣೆಯನ್ನು ಎಸಿಬಿ ಪೊಲೀಸರು ನಡೆಸಿದ್ದಾರೆ. ಪ್ರಮುಖ ಸಾಕ್ಷಿ ಆದಿಲ್ ಅಜೀಜ್​ ಹೇಳಿಕೆಯನ್ನು ಎಸಿಬಿ ದಾಖಲಿಸಿದೆ. ಅಮಾನತಾದ ಸಿಸಿಬಿ ಎಸಿಪಿ ಪ್ರಭುಶಂಕರ್​ ಅವರಿಗೆ ನನ್ನ ಕೈಯಿಂದಲೇ 62.5 ಲಕ್ಷ ಹಣವನ್ನು ನೀಡಿದ್ದೇನೆ. ಏಪ್ರಿಲ್ 30 ರಂದು 32.5 ಲಕ್ಷ, […]

CCB ಎಸಿಪಿ ಪ್ರಭುಶಂಕರ್​ಗೆ ನಾನೇ 62 ಲಕ್ಷ ಹಣ ನೀಡಿದ್ದೇನೆ -ACB ಮುಂದೆ ಸಾಕ್ಷ್ಯ ದಾಖಲು!
CCB ಕಚೇರಿ
ಸಾಧು ಶ್ರೀನಾಥ್​

Updated on: May 29, 2020 | 3:16 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಸಿಗರೇಟ್ ಡೀಲರ್​ಗಳಿಂದ ಸಿಸಿಬಿ ಪೊಲೀಸರು ಲಂಚ ಪಡೆದ ಪ್ರಕರಣ ಸಂಬಂಧ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಎಸಿಬಿ ದಾಖಲಿಸಿಕೊಂಡಿದೆ. ಎರಡು ದಿನಗಳ ಕಾಲ 8 ಜನ ಸಿಗರೇಟ್ ವಿತರಕರು ಸೇರಿ 10 ಜನರ ವಿಚಾರಣೆಯನ್ನು ಎಸಿಬಿ ಪೊಲೀಸರು ನಡೆಸಿದ್ದಾರೆ. ಪ್ರಮುಖ ಸಾಕ್ಷಿ ಆದಿಲ್ ಅಜೀಜ್​ ಹೇಳಿಕೆಯನ್ನು ಎಸಿಬಿ ದಾಖಲಿಸಿದೆ.

ಅಮಾನತಾದ ಸಿಸಿಬಿ ಎಸಿಪಿ ಪ್ರಭುಶಂಕರ್​ ಅವರಿಗೆ ನನ್ನ ಕೈಯಿಂದಲೇ 62.5 ಲಕ್ಷ ಹಣವನ್ನು ನೀಡಿದ್ದೇನೆ. ಏಪ್ರಿಲ್ 30 ರಂದು 32.5 ಲಕ್ಷ, ಮೇ ಮೊದಲ ವಾರದಲ್ಲಿ 30 ಲಕ್ಷ ರೂ. ಕೊಟ್ಟಿದ್ದೇನೆ. ಒಟ್ಟಾರೆಯಾಗಿ 62.5 ಲಕ್ಷ ರೂಪಾಯಿ ನೀಡಿದ್ದೇನೆ. ಸಿಸಿಬಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಹಣ ನೀಡಿರುವುದಾಗಿ ಆದಿಲ್ ಅಜೀಜ್ ಹೇಳಿಕೆ ಕೊಟ್ಟಿದ್ದಾನೆ.

ಯಲಹಂಕ ನಿವಾಸಿ ಬಾಬು ರಾಜೇಂದ್ರ ಪ್ರಸಾದ್ ಮತ್ತು ಭೂಷಣ್ ಮೂಲಕ ಮೂವರು ಸಿಸಿಬಿ ಅಧಿಕಾರಿಗಳ ಸಂಪರ್ಕ ಮಾಡಿದ್ದರು. ಪ್ರತಿಯೊಬ್ಬ ಸಿಗರೇಟ್ ವಿತರಕರಿಂದ 14 ಲಕ್ಷಕ್ಕೆ ಸಿಸಿಬಿ ಅಧಿಕಾರಿಗಳು ಬೇಡಿಕೆಯಿಟ್ಟಿದ್ದರು ಎಂದು ಬಾಯ್ಬಿಟ್ಟಿದ್ದಾನೆ ಎಂದು ಎಸಿಬಿ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us