ಎಲ್ಲೆ ಮೀರಿದ ನೈಜೀರಿಯ ಪ್ರಜೆಗಳ ಹಾವಳಿ, ATMಗೂ ಕೈಹಾಕಿದ್ದಾರೆ!

ಬೆಂಗಳೂರು: ನಗರದಲ್ಲಿ ನೈಜೀರಿಯ ಪ್ರಜೆಗಳ ಹಾವಳಿ ಮಿತಿಮೀರಿದೆ. ದೇಶ ಬಿಟ್ಟು ದೇಶಕ್ಕೆ ಬಂದಿರುವ ವಿದೇಶಿಗರಿಗೆ ಇಲ್ಲಿ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಡ್ರಗ್ಸ್​ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ. ಇದೂ ಸಾಲದು ಅಂತಾ ಖರ್ಚಿಗಾಗಿ ATMಗೂ ಕೈಹಾಕಿದ್ದಾರೆ! ನೈಜೀರಿಯ ಪ್ರಜೆಗಳು ಎಂಟಿಎಂ ಮಷಿನ್​ಗೆ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಮತ್ತೊಂದು ದಂಧೆಗೆ ಕೈಹಾಕಿರೋದು ಬೆಳಕಿಗೆ ಬಂದಿದೆ. ಕ್ಯಾಮರಾ ಸಹಾಯದಿಂದ ಪಾಸ್​ವರ್ಡ್ ​ಕದಿಯುತ್ತಿದ್ರು: ನ.13ರಂದು ನ್ಯೂ ಬಿಇಎಲ್ ಬಳಿಯ ಎಂಇಎಸ್ ರಸ್ತೆ ಸಮೀಪದ ಎಸ್​ಬಿಐ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿದ್ದಾರೆ. […]

ಎಲ್ಲೆ ಮೀರಿದ ನೈಜೀರಿಯ ಪ್ರಜೆಗಳ ಹಾವಳಿ, ATMಗೂ ಕೈಹಾಕಿದ್ದಾರೆ!
ಸಾಧು ಶ್ರೀನಾಥ್​

Updated on: Dec 03, 2019 | 1:32 PM

ಬೆಂಗಳೂರು: ನಗರದಲ್ಲಿ ನೈಜೀರಿಯ ಪ್ರಜೆಗಳ ಹಾವಳಿ ಮಿತಿಮೀರಿದೆ. ದೇಶ ಬಿಟ್ಟು ದೇಶಕ್ಕೆ ಬಂದಿರುವ ವಿದೇಶಿಗರಿಗೆ ಇಲ್ಲಿ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಡ್ರಗ್ಸ್​ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ. ಇದೂ ಸಾಲದು ಅಂತಾ ಖರ್ಚಿಗಾಗಿ ATMಗೂ ಕೈಹಾಕಿದ್ದಾರೆ! ನೈಜೀರಿಯ ಪ್ರಜೆಗಳು ಎಂಟಿಎಂ ಮಷಿನ್​ಗೆ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಮತ್ತೊಂದು ದಂಧೆಗೆ ಕೈಹಾಕಿರೋದು ಬೆಳಕಿಗೆ ಬಂದಿದೆ.

ಕ್ಯಾಮರಾ ಸಹಾಯದಿಂದ ಪಾಸ್​ವರ್ಡ್ ​ಕದಿಯುತ್ತಿದ್ರು:
ನ.13ರಂದು ನ್ಯೂ ಬಿಇಎಲ್ ಬಳಿಯ ಎಂಇಎಸ್ ರಸ್ತೆ ಸಮೀಪದ ಎಸ್​ಬಿಐ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿದ್ದಾರೆ. ATM ಡಾಟಾ ಮತ್ತು ಕ್ಯಾಮರಾ ಸಹಾಯದಿಂದ ಗ್ರಾಹಕರ ಪಾಸ್​ವರ್ಡ್​ ಕಳ್ಳತನ ಮಾಡುತ್ತಿದ್ರು. ಥಾಮಸ್ ಎಂಬುವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಜಾಲಹಳ್ಳಿ ಪೊಲೀಸರು ಸ್ಕಿಮ್ಮರ್ ಮತ್ತು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ. ನೈಜೀರಿಯನ್ ಪ್ರಜೆಗಳು ಸ್ಕಿಮ್ಮರ್ ಅಳವಡಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಭದ್ರತೆ ಲೋಪದ ಬಗ್ಗೆ ಬ್ಯಾಂಕ್​ ಸಿಬ್ಬಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us