ಹಣ ನೀಡದಿದ್ದಕ್ಕೆ ಹೋಟೆಲ್ ಕ್ಯಾಷಿಯರ್ ಮೇಲೆ ಪೇದೆ ದರ್ಪ?

ಬೆಂಗಳೂರು: ಹಣ ನೀಡದಿದ್ದಕ್ಕೆ ಹೋಟೆಲ್ ಕ್ಯಾಷಿಯರ್ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ 8 ಗಂಟೆ ವೇಳೆಗೆ ಹೋಟೆಲ್‌ಗೆ ಬಂದು ಪೊಲೀಸ್ ಪೇದೆ ಹಣ ಕೇಳಿದ್ದಾರೆ. ಆಗ ಹಣ ನೀಡಲು ಹೋಟೆಲ್ ಕ್ಯಾಷಿಯರ್ ನಿರಾಕರಿಸಿದ್ದಾರೆ. ನಂತರ ರಾತ್ರಿ 11 ಗಂಟೆಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಹೋಟೆಲ್ ಬಳಿ ಬಂದು ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸಮಯ ಮುಗಿದಿದ್ದರೂ ಹೋಟೆಲ್ ಕ್ಲೋಸ್ ಮಾಡಿಲ್ಲ ಎಂದು ಪೇದೆ […]

ಹಣ ನೀಡದಿದ್ದಕ್ಕೆ ಹೋಟೆಲ್ ಕ್ಯಾಷಿಯರ್ ಮೇಲೆ ಪೇದೆ ದರ್ಪ?
ಸಾಧು ಶ್ರೀನಾಥ್​

Updated on: Feb 11, 2020 | 9:56 AM

ಬೆಂಗಳೂರು: ಹಣ ನೀಡದಿದ್ದಕ್ಕೆ ಹೋಟೆಲ್ ಕ್ಯಾಷಿಯರ್ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ 8 ಗಂಟೆ ವೇಳೆಗೆ ಹೋಟೆಲ್‌ಗೆ ಬಂದು ಪೊಲೀಸ್ ಪೇದೆ ಹಣ ಕೇಳಿದ್ದಾರೆ. ಆಗ ಹಣ ನೀಡಲು ಹೋಟೆಲ್ ಕ್ಯಾಷಿಯರ್ ನಿರಾಕರಿಸಿದ್ದಾರೆ.

ನಂತರ ರಾತ್ರಿ 11 ಗಂಟೆಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಹೋಟೆಲ್ ಬಳಿ ಬಂದು ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸಮಯ ಮುಗಿದಿದ್ದರೂ ಹೋಟೆಲ್ ಕ್ಲೋಸ್ ಮಾಡಿಲ್ಲ ಎಂದು ಪೇದೆ ಕ್ಯಾತೆ ತೆಗೆದಿದ್ದಾರೆ. ಹೋಟೆಲ್ ಮುಚ್ಚುವುದಾಗಿ ಹೇಳಿದ್ರೂ ಸಾರ್ವಜನಿಕವಾಗಿ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿ ಪೊಲೀಸ್ ಪೇದೆ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.





Published On - 9:28 am, Tue, 11 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us