ಟ್ಯಾನರಿ ರಸ್ತೆ ಖಾಲಿ ಖಾಲಿ, 5 ಕಡೆ ಪೊಲೀಸರಿಂದ ಚೆಕಿಂಗ್ ಪಾಯಿಂಟ್

[lazy-load-videos-and-sticky-control id=”TJ-BPocYy9w”] ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಉದ್ರಿಕ್ತರು ಪೊಲೀಸ್ ಠಾಣೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಯನ್ನು ಬೆಂಕಿ ಹಚ್ಚಿ ಧ್ವಂಸ ಮಾಡಿರುವುದರಿಂದ ಈ ಏರಿಯಾಗಳಲ್ಲಿ 144 ಸೆಕ್ಷನ್ ಜಾರಿ ಆಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಟ್ಯಾನರಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಇದ್ದಾಗಲೂ ಸಹ, ಈ ರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗುತ್ತಿದ್ದರು. ಆದರೆ ಈಗ ವ್ಯವಹಾರಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅಂಗಡಿ-ಮುಂಗಟ್ಟುಗಳು […]

ಟ್ಯಾನರಿ ರಸ್ತೆ ಖಾಲಿ ಖಾಲಿ, 5 ಕಡೆ ಪೊಲೀಸರಿಂದ  ಚೆಕಿಂಗ್ ಪಾಯಿಂಟ್
ಸಾಧು ಶ್ರೀನಾಥ್​

Updated on: Aug 12, 2020 | 12:34 PM

[lazy-load-videos-and-sticky-control id=”TJ-BPocYy9w”]

ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಉದ್ರಿಕ್ತರು ಪೊಲೀಸ್ ಠಾಣೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಯನ್ನು ಬೆಂಕಿ ಹಚ್ಚಿ ಧ್ವಂಸ ಮಾಡಿರುವುದರಿಂದ ಈ ಏರಿಯಾಗಳಲ್ಲಿ 144 ಸೆಕ್ಷನ್ ಜಾರಿ ಆಗಿದೆ.

ಹೀಗಾಗಿ ಇದೇ ಮೊದಲ ಬಾರಿಗೆ ಟ್ಯಾನರಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಇದ್ದಾಗಲೂ ಸಹ, ಈ ರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗುತ್ತಿದ್ದರು. ಆದರೆ ಈಗ ವ್ಯವಹಾರಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಅಂಗಡಿ-ಮುಂಗಟ್ಟುಗಳು ಬಂದ್ ಆಗಿರುವುದರಿಂದ ಟ್ಯಾನರಿ ರಸ್ತೆ ಬಿಕೋ ಎನ್ನುತ್ತಿದೆ. ಹಾಗೂ ಟ್ಯಾನರಿ ರಸ್ತೆಯೊಂದರಲ್ಲೇ ಐದು ಕಡೆಗಳಲ್ಲಿ ಪೊಲೀಸರು ಚೆಕಿಂಗ್ ಪಾಯಿಂಟ್ ಇಟ್ಟಿದ್ದು, ಒಟ್ಟಾರೆಯಾಗಿ 32 ಪಾಯಿಂಟ್ ಗಳಲ್ಲಿ ಪೊಲೀಸರು ಕಠಿಣ ಬಂದೋಬಸ್ತ್ ಮಾಡಿದ್ದಾರೆ. ಜೊತೆಗೆ ಅನಗತ್ಯವಾಗಿ ರಸ್ತೆಗಿಳಿಯುತ್ತಿರುವ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

Published On - 10:13 am, Wed, 12 August 20

Loading...
Unable to load recommendations.
Follow Us