‘ಉಗುಳಿ’ ಉಪ್ಪು ಹಾಕಿಸ್ಕೊಂಡ, ಬಾಯ್ಬಿಡಿಸಿದಾಗ ಕಿಲ್ಲರ್ ಅಂತಾನೂ ​ಒಪ್ಕೊಂಡ!

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಾಲದಲ್ಲಿ ಉಗುಳುವುದು ಮಹಾ ಅಪರಾಧ ಅಲ್ವಾ! ಅಂಥಾದ್ರಲ್ಲಿ ಇಲ್ಲೊಬ್ಬ ಐನಾತಿ ಕ್ರಿಮಿನಲ್ ಏನ್ಮಾಡಿದ್ದಾನೆ ನೋಡಿ. ಹೋಟೆಲ್​ಗೆ ಹೋಗಿ ಊಟ ಕೇಳಿದ್ದಾನೆ. ಮಾಲೀಕರು ಕೊಡಲ್ಲ ಅಂದಿದ್ದಕ್ಕೆ ಹೋಟೆಲ್​ನಲ್ಲೇ ಉಗುಳಿದ್ದಾನೆ. ಇದರಿಂದ ಪಿತ್ತ ನೆತ್ತಿಗೇರಿಸ್ಕೊಂಡ ಹೋಟೆಲ್ ಮಾಲೀಕ ಸೀದಾ ಪೊಲೀಸರಿಗೆ ಬುಲಾವ್ ನೀಡಿದ್ದಾನೆ. ಆ ಮೇಲೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುವಾಗ ಮತ್ತೆ ಬಾಯ್ಬಿಟ್ಟ ಆ ಕ್ರಿಮಿನಲ್ ಹೇಳಿದ್ದು ತಾನೊಬ್ಬ ಸೀರಿಯಲ್ ಕಿಲ್ಲರ್ ಅಂತಾ! ತಡರಾತ್ರಿ ಕಂಠಪೂರ್ತಿ ಕುಡಿದು ಸಲೀಂ ಬಳ್ಳಾರಿ ನೇಕಾರ ನಗರದಲ್ಲಿರುವ ಹೋಟೆಲ್​ಗೆ […]

‘ಉಗುಳಿ’ ಉಪ್ಪು ಹಾಕಿಸ್ಕೊಂಡ, ಬಾಯ್ಬಿಡಿಸಿದಾಗ ಕಿಲ್ಲರ್ ಅಂತಾನೂ ​ಒಪ್ಕೊಂಡ!
ಸಾಧು ಶ್ರೀನಾಥ್​

Updated on: May 16, 2020 | 2:20 PM

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಾಲದಲ್ಲಿ ಉಗುಳುವುದು ಮಹಾ ಅಪರಾಧ ಅಲ್ವಾ! ಅಂಥಾದ್ರಲ್ಲಿ ಇಲ್ಲೊಬ್ಬ ಐನಾತಿ ಕ್ರಿಮಿನಲ್ ಏನ್ಮಾಡಿದ್ದಾನೆ ನೋಡಿ. ಹೋಟೆಲ್​ಗೆ ಹೋಗಿ ಊಟ ಕೇಳಿದ್ದಾನೆ. ಮಾಲೀಕರು ಕೊಡಲ್ಲ ಅಂದಿದ್ದಕ್ಕೆ ಹೋಟೆಲ್​ನಲ್ಲೇ ಉಗುಳಿದ್ದಾನೆ. ಇದರಿಂದ ಪಿತ್ತ ನೆತ್ತಿಗೇರಿಸ್ಕೊಂಡ ಹೋಟೆಲ್ ಮಾಲೀಕ ಸೀದಾ ಪೊಲೀಸರಿಗೆ ಬುಲಾವ್ ನೀಡಿದ್ದಾನೆ. ಆ ಮೇಲೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುವಾಗ ಮತ್ತೆ ಬಾಯ್ಬಿಟ್ಟ ಆ ಕ್ರಿಮಿನಲ್ ಹೇಳಿದ್ದು ತಾನೊಬ್ಬ ಸೀರಿಯಲ್ ಕಿಲ್ಲರ್ ಅಂತಾ!

ತಡರಾತ್ರಿ ಕಂಠಪೂರ್ತಿ ಕುಡಿದು ಸಲೀಂ ಬಳ್ಳಾರಿ ನೇಕಾರ ನಗರದಲ್ಲಿರುವ ಹೋಟೆಲ್​ಗೆ ತೆರಳಿದ್ದಾನೆ. ಲಾಕ್​ಡೌನ್ ಕಾರಣ ಊಟ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಹೋಟೆಲ್​ನಲ್ಲಿ ಉಗುಳಿದ್ದಾನೆ. ನಂತರ ಪೊಲೀಸರಿಗೆ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈತ ಕೊಲೆ ಕೇಸ್​ನ ಆರೋಪಿ ಸಲೀಂ ಬಳ್ಳಾರಿ ಎಂದು ಬಂಧಿಸಿ ಕಸಬಾಪೇಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಕುಖ್ಯಾತ ರೌಡಿ, ಕಲಬುರ್ಗಿಯಲ್ಲಿ ನಡೆದ ಕೊಲೆ‌ ಪ್ರಕರಣ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಮೇಲೆ ಹಲವು ಪ್ರಕರಣಗಳಿದ್ದು ಎಲ್ಲವನ್ನು ‌ಮರೆಮಾಚಿ ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ.

Published On - 1:16 pm, Sat, 16 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us