Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಮದುವೆ ಮೆರವಣಿಗೆಯಲ್ಲಿ ಚಾಕು ಇರಿತ, ಇಬ್ಬರು ಸಹೋದರರು ಸಾವು

ಮದುವೆ ಮೆರವಣಿಗೆಯಲ್ಲಿ ಮದುವೆ ಬಂದಿದ್ದ ಅತಿಥಿಗಳು ಇಬ್ಬರು ಸಹೋದರರಿಗೆ ಮದ್ಯ ಸೇವನೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸಹೋದರರು ಇದಕ್ಕೆ ಒಪ್ಪಿಲ್ಲ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆ ಹಂತಕ್ಕೆ ಹೋಗಿದೆ.

ಉತ್ತರ ಪ್ರದೇಶ: ಮದುವೆ ಮೆರವಣಿಗೆಯಲ್ಲಿ ಚಾಕು ಇರಿತ, ಇಬ್ಬರು ಸಹೋದರರು ಸಾವು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 29, 2023 | 12:34 PM

ಮದುವೆ ಮೆರವಣಿಯಲ್ಲಿ ಇಬ್ಬರು ಸಹೋದರರಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಉತ್ತರ ಪ್ರದೇಶದ (uttar pradesh) ಜೌನ್‌ಪುರ ಜಿಲ್ಲೆಯ ಖೇತಸರಾಯ್ ಪ್ರದೇಶದಲ್ಲಿ ನಡೆದಿದೆ. ಮರೆವಣಿಗೆ ವೇಳೆ ಜಗಳ ನಡೆದಿದ್ದು, ಈ ಸಮಯದಲ್ಲಿ 6 ಜನರ ಗುಂಪೊಂದು ಇಬ್ಬರು ಸಹೋದರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆ ವೇಳೆ ಈ ಘಟನೆ ನಡೆದಿದೆ. ಮದುವೆಯ ಮೆರವಣಿಗೆ ಖೇತಸರಾಯ್ ಪಟ್ಟಣಕ್ಕೆ ಆಗಮಿಸುತ್ತಿದಂತೆ ಭಾರೀ ಜನ ಸೇರಿದರು. ಮದುವೆಗೆ ಬಂದ ಅತಿಥಿಗಳು ಮದ್ಯಪಾನ ಮಾಡುವಂತೆ ಈ ಇಬ್ಬರು ಸಹೋದರ ಬಳಿ ಬಂದು ಒತ್ತಾಯ ಮಾಡಿದ್ದಾರೆ. ಈ ವೇಳೆ ಜಗಳ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಮಾಡಿ ಸೆಪ್ಟಿಕ್​ ಟ್ಯಾಂಕ್​ ಒಳಗೆ ಎಸೆದಿದ್ದ ಮಹಿಳೆಯ ಬಂಧನ

ಹತ್ಯೆಯಾದ ಇಬ್ಬರು ಸಹೋದರರನ್ನು ಅಜಯ್ ಪ್ರಜಾಪತಿ (23) ಮತ್ತು ಅವರ ಸಹೋದರ ಅಂಕಿತ್ (20) ಎಂದು ಗುರುತಿಸಲಾಗಿದೆ. ಇನ್ನು ಘಟನೆಯ ನಂತರ ಇಬ್ಬರು ಸಹೋದರರನ್ನು ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾದೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​​​ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:32 pm, Wed, 29 November 23