ಕರ್ನಾಟಕ ಚುನಾವಣೆ 2023: ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು ಇವರೇ ನೋಡಿ

ಕರ್ನಾಟಕ ವಿಧಾನಸಭೆ ಚುನಾವಣೆ 2023 ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ ಪಕ್ಷಕ್ಕೆ 136 ಸ್ಥಾನ ಸಿಕ್ಕಿದೆ. ಈ ಪೈಕಿ 35 ಮಂದಿ ಮೊದಲ ಬಾರಿ ಆಯ್ಕೆಯಾದವರಾಗಿದ್ದಾರೆ.

ಕರ್ನಾಟಕ ಚುನಾವಣೆ 2023: ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು ಇವರೇ ನೋಡಿ
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು
Rakesh Nayak Manchi

Updated on: May 13, 2023 | 10:39 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ಫಲಿತಾಂಶ (Karnataka Assembly Election Result 2023) ಹೊರಬಿದ್ದಿದ್ದು, ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದೆ. ಹೀಗಾಗಿ ನಾಯಕರು ಸರ್ಕಾರ ರಚನೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇತ್ತ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದವು. ಆದರೆ ಬಿಜೆಪಿಯಲ್ಲಿ ಹೆಚ್ಚಿನ ಹೊಸ ಅಭ್ಯರ್ಥಿಗಳು ಸೋಲು ಅನುಭವಿಸಿದರೆ, ಕಾಂಗ್ರೆಸ್​ನಲ್ಲಿ ಕಣಕ್ಕಿಳಿಸಿದ 42 ಅಭ್ಯರ್ಥಿಗಳ ಪೈಕಿ 35 ಮಂದಿ ಗೆದ್ದಿದ್ದಾರೆ. ಹಾಗಿದ್ದರೆ ಕಾಂಗ್ರೆಸ್​ನಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು ಯಾರು? ಇಲ್ಲಿದೆ ನೋಡಿ ಮಾಹಿತಿ.

  • ಕುಡಚಿ- ಮಹೇಂದ್ರ ಕೆ.ತಮ್ಮಣ್ಣನವರ್
  • ಬೆಳಗಾವಿ ಉತ್ತರ- ಆಸಿಫ್ ಸೇಟ್
  • ಕಿತ್ತೂರು- ಬಾಬಾಸಾಹೇಬ ಪಾಟೀಲ
  • ಸೌಂದತ್ತಿ ಯಲ್ಲಮ್ಮ- ವಿಶ್ವಸ್ ವಸಂತವೈದ್ಯ
  • ಬಾದಾಮಿ- ಭೀಮಸೇನ್ ಬಿ ಚಿಮ್ಮಣ್ಣಕಟ್ಟಿ
  • ನಾಗಥಾನ್ SC- ವಿಠ್ಠಲ ಕಟಕದೊಂಡ
  • ಸಿಂದಗಿ- ಅಶೋಕ್ ಎಂ. ಮನಗೂಳಿ
  • ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
  • ಶಿರಸಿ- ಭೀಮಣ್ಣ ನಾಯ್ಕ
  • ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ
  • ಬಳ್ಳಾರಿ ನಗರ- ನಾರ ಭಾರತ ರೆಡ್ಡಿ
  • ಕೂಡ್ಲಿಗಿ ST- ಡಾ.ಶ್ರೀನಿವಾಸ್ ಎನ್.ಟಿ
  • ಚಿತ್ರದುರ್ಗ- ಎಸ್ಆರ್​ಎಲ್ ಕೆಸಿ ವೀರೇಂದ್ರ
  • ದಾವಣಗೆರೆ ಜಗಳೂರು ಎಸ್​ಟಿ- ಬಿ ದೇವೇಂದ್ರಪ್ಪ
  • ಮಾಯಕೊಂಡ- ಕೆ.ಎಸ್. ಬಸವರಾಜು
  • ಚನ್ನಗರಿ- ಬಸವರಾಜು ವಿ ಶಿವಗಂಗಾ
  • ಮುಡಿಗೆರೆ ಎಸ್​ಸಿ- ನಯನಾ ಜ್ಯೋತಿ ಝಾವರ್
  • ಚಿಕ್ಕಮಗಳೂರು- ಹೆಚ್.ಡಿ. ತಮ್ಮಯ್ಯ
  • ಕಡೂರು- ಆನಂದ್ ಕೆ ಎಸ್
  • ಪಾವಗಡ- ಎಚ್.ವಿ. ವೆಂಕಟೇಶ್
  • ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್ ಅಯ್ಯರ್
  • ಪುಲಕೇಶಿನಗರ- ಎ.ಸಿ.ಶ್ರೀನಿವಾಸ್
  • ದೇವನಹಳ್ಳಿ- ಕೆಎಚ್ ಮುನಿಯಪ್ಪ (ಮಾಜಿ ಸಂಸದ)
  • ನೆಲಮಂಗಲ- ಶ್ರೀನಿವಾಸ ಎನ್
  • ರಾಮನಗರ- ಇಕ್ಬಾಲ್ ಹುಸೇನ್ ಎಚ್.ಎ.
  • ಮದ್ದೂರು- ಕೆ.ಎಂ. ಉದಯ
  • ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಕಾಂಗ್ರೆಸ್ ಬೆಂಬಲಿ ರೈತ ನಾಯಕ)
  • ಮಂಡ್ಯ- ಪ್ರವಿಕುಮಾರ್
  • ಪುತ್ತೂರು- ಅಶೋಕ್ ಕುಮಾರ್ ರೈ
  • ಕೊಡಗು ಮಡಿಕೇರಿ- ಡಾ ಮಂತರ್ ಗೌಡ
  • ವಿರಾಯಪೇಟೆ- ಎ.ಎಸ್. ಪೊನ್ನಣ್ಣ
  • ಕೃಷ್ಣರಾಜನಗರ- ಡಿವಿ ಶಂಕರ್
  • ನಂಜನಗೂಡು- ದರ್ಶನ್ ದ್ರುವನಾರಾಯಣ
  • ಚಾಮರಾಜ- ಕೆ.ಹರೀಶ್ ಗೌಡ
  • ಗುಂಡ್ಲುಪೇಟೆ- ಎಚ್.ಎಂ. ಗಣೇಶ್ ಪ್ರಸಾದ್

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Sat, 13 May 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us