Udupi Election 2023 Winner: ಉಡುಪಿಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಯಶ್​ಪಾಲ್

ಈ ಬಾರಿ ಯಶ್​ಪಾಲ್​​ ಸುವರ್ಣ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಇದೀಗ ಯಶ್​ಪಾಲ್ ಗೆಲುವು ಸಾಧಿಸಿದ್ದಾರೆ. ಉಡುಪಿಗೆ ಇವರು ಹೊಸ ಮುಖವಾದರೂ, ಸಂಘಟನೆಯಲ್ಲಿ ಹೆಚ್ಚು ಶ್ರಮಿಸಿದವರು.

Udupi Election 2023 Winner: ಉಡುಪಿಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಯಶ್​ಪಾಲ್
ಯಶ್​ಪಾಲ್

Updated on: May 13, 2023 | 6:22 PM

ಉಡುಪಿ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ (Udupi Assembly Constituency) ಈ ಬಾರಿ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಭಾರೀ ಫೈಟ್​ ನೀಡಿದೆ, ಹೌದು 2018ರಲ್ಲಿ ರಘುಪತಿ ಭಟ್​​ ಗೆದ್ದು ಶಾಸಕರಾಗಿದ್ದರು, ಆದರೆ ಈ ಬಾರಿ ಅವರಿಗೆ ಟಿಕೇಟ್​ ನೀಡಲ್ಲ, ಹಿಜಾಬ್​​ ವಿಚಾರ ದೇಶದ್ಯಾಂತ ಚರ್ಚೆಯಾಗಲು ಉಡುಪಿಯೇ ಕಾರಣ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಈ ಬಾರಿ ರಘುಪತಿ ಭಟ್​​ಗೆ ಬಿಜೆಪಿ ಟಿಕೇಟ್​ ನೀಡಿಲ್ಲ, ಅದಕ್ಕೆ ಈ ಬಾರಿ ಯಶ್​ಪಾಲ್​​ ಸುವರ್ಣ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಇದೀಗ ಯಶ್​ಪಾಲ್ ಗೆಲುವು ಸಾಧಿಸಿದ್ದಾರೆ. ಉಡುಪಿಗೆ ಇವರು ಹೊಸ ಮುಖವಾದರೂ, ಸಂಘಟನೆಯಲ್ಲಿ ಹೆಚ್ಚು ಶ್ರಮಿಸಿದವರು. ಮೋಗವೀರ ಸಮುದಾಯದಲ್ಲಿ ಇವರು ಗುರುತಿಸಿಕೊಂಡಿದ್ದು, ಉಡುಪಿಯಲ್ಲಿ ಮೋಗವೀರ ಸಮುದಾಯದ ಜನರು ಹೆಚ್ಚಿದ್ದಾರೆ, ಇದರ ಜತೆಗೆ ಅವರು ರಾಜಕೀಯವಾಗಿ ಹೆಚ್ಚು ಸಾಧನೆ ಮಾಡಿದ್ದಾರೆ. ಇದೀಗ ಯಶ್​ ಪಾಲ್​​​ ಗೆಲುವು ಸಾಧಿಸಿದ್ದಾರೆ.

ಇನ್ನೂ ಯಶ್​ಪಾಲ್​​ ಸುವರ್ಣ ಅವರಿಗೆ ಕಾಂಗ್ರೆಸ್​​ ಅಭ್ಯರ್ಥಿ ಪ್ರಸಾದ್​​ ರಾಜ್​​ ಕಾಂಚನ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಅವರು ಈ ಬಾರಿ ಸೋತಿದ್ದಾರೆ. ಪ್ರಸಾದ್​​ ರಾಜ್​​ ಕಾಂಚನ್ ಒಬ್ಬ ಉದ್ಯಮಿಯು ಹೌದು. ಇನ್ನೂ ಜೆಡಿಎಸ್​​ ಪಕ್ಷದಿಂದ ದಕ್ಷತ್​​ ಆರ್​ ಶೆಟ್ಟಿ ಸೋತಿದ್ದರೆ ಎಎಪಿಯಿಂದ ಪ್ರಕಾಶ್​​​ ಪೂಜಾರಿ ಕೂಡ ಸೋಲು ಅನುಭವಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sat, 13 May 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us