AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಅಸೆಂಬ್ಲಿ ಚುನಾವಣೆ: TDP ಗೆಲ್ಲುತ್ತೆ ಎಂದ ಪ್ರಶಾಂತ್ ಕಿಶೋರ್, ಭಗ್ಗನೆ ಕಿಡಿಕಾರಿದ ಜಗನ್ ಪಾರ್ಟಿ ನಾಯಕರು!

Andhra Pradesh Assembly Elections 2024: ಬಿಹಾರದ ಪ್ರಶಾಂತ್ ಕಿಶೋರ್ ಜನರನ್ನು ಯಾಮಾರಿಸಲು ಆಂಧ್ರಪ್ರದೇಶದ ರಾಜಕೀಯದ ಬಗ್ಗೆ ತಮ್ಮ ಅತ್ಯಾತ್ಮವಿಶ್ವಾದ ಭಾವನೆಯನ್ನು ಹೊರಹಾಕಿದ್ದಾರೆ ಅಷ್ಟೇ ಎಂದು ಹೇಳಿದರು. ಟಿಡಿಪಿ-ಜನಸೇನಾ ಮೈತ್ರಿಕೂಟ ಸೋಲುವುದು ಖಚಿತ. ಕಲ್ಯಾಣ ಯೋಜನೆಗಳು ಜಾರಿ ಮಾಡುತ್ತಿದರೆ ಸರಕಾರಗಳು ಮತ್ತೆ ಏಕೆ ಬರುವುದಿಲ್ಲ ಎಂಬುದನ್ನು ವಿವರಿಸಬೇಕು ಎಂದಿದ್ದಾರೆ.

ಆಂಧ್ರ ಅಸೆಂಬ್ಲಿ ಚುನಾವಣೆ: TDP ಗೆಲ್ಲುತ್ತೆ ಎಂದ ಪ್ರಶಾಂತ್ ಕಿಶೋರ್, ಭಗ್ಗನೆ ಕಿಡಿಕಾರಿದ ಜಗನ್ ಪಾರ್ಟಿ ನಾಯಕರು!
TDP ಗೆಲ್ಲತ್ತೆ ಎಂದ ಪ್ರಶಾಂತ್ ಕಿಶೋರ್, ಭಗ್ಗನೆ ಕಿಡಿಕಾರಿದ ಜಗನ್ ಪಾರ್ಟಿ
ಸಾಧು ಶ್ರೀನಾಥ್​
|

Updated on: Mar 04, 2024 | 2:13 PM

Share

ಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (ಪಿಕೆ) ಹೇಳಿಕೆಯಿಂದ ಆಂಧ್ರದ ರಾಜಕೀಯ ಮತ್ತೊಮ್ಮೆ ಬಿಸಿ ತಟ್ಟಿದೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ (AP Elections 2024) ಕುರಿತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ( Political Strategist Prashant Kishor) ಅವರ ಕಾಮೆಂಟ್‌ಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಪಾರ್ಟಿ (ಎಪಿ ವೈಸಿಪಿ YSRCP) ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸಚಿವ ಅಂಬಟಿ ರಾಂಬಾಬು ಟ್ವಿಟ್ಟರ್ ನಲ್ಲಿ ಪ್ರಶಾಂತ್ ಕಿಶೋರ್ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. 2019ರ ಚುನಾವಣೆಗೆ ಪೂರ್ವ ಸಮೀಕ್ಷೆ ನಡೆಸಿದ್ದ ಲಗಡಪತಿ ರಾಜಗೋಪಾಲ್ ರಾಜಕೀಯ ಸನ್ಯಾಸ ತೆಗೆದುಕೊಂಡಿದ್ದು, ಇದೀಗ ಪ್ರಶಾಂತ್ ಕಿಶೋರ್ ಕೂಡ ಅದಕ್ಕೆ ತಯಾರಾಗಿದ್ದಾರೆ ಎಂದು ಪ್ರತಿದಾಳಿ ನಡೆಸಿದರು. ಲಗಡಪತಿ ಸನ್ಯಾಸ ತೆಗೆದುಕೊಂಡ ಮೇಲೆ ಇನ್ನು ಪ್ರಶಾಂತ್ ಕಿಶೋರ್ ರೆಡಿ! ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಪ್ಲಾಟ್‌ಫಾರ್ಮ್ ವ್ಯಾಖ್ಯಾನಿಸಿದ್ದಾರೆ.

ಪ್ರಶಾಂತ್ ಕಿಶೋರ್ ಹೇಳಿಕೆಗೆ ವೈಸಿಪಿ ಸಂಸದ ವಿಜಯಸಾಯಿ ರೆಡ್ಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ತೀವ್ರತರ ಕಾಮೆಂಟ್‌ಗಳನ್ನು ಮಾಡಲಾಗಿದೆ. ಪ್ರಶಾಂತ್ ಕಿಶೋರ್ ಅವರ ಮಾತುಗಳನ್ನು ನಂಬಬೇಡಿ ಎಂದು ರಾಜ್ಯದ ಜನತೆಗೆ ಸೂಚಿಸಿದ್ದಾರೆ. ಚಂದ್ರಬಾಬು ಅವರೊಂದಿಗಿನ ನಾಲ್ಕು ಗಂಟೆಗಳ ಸಭೆಯ ನಂತರ ಪ್ರಶಾಂತ್ ಕಿಶೋರ್ ಅವರು ತರ್ಕವಿಲ್ಲದೆ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿಜಯಸಾಯಿ ರೆಡ್ಡಿ ವಾಗ್ದಾಳಿ ನಡೆಸಿದರು. ಪ್ರಶಾಂತ್ ಕಿಶೋರ್ ನಿರೀಕ್ಷೆಗಳು, ಅಂದಾಜುಗಳು ಇಂದಿನ ರಾಜಕೀಯದಲ್ಲಿ ತಪ್ಪುತ್ತಿವೆ, ವಾಸ್ತವಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದಾರೆ.

ಪಿಕೆ ಹೇಳಿಕೆಗೆ ಸಚಿವ ಅಮರನಾಥ್ ಸಖತ್ ಕೌಂಟರ್ ನೀಡಿದ್ದಾರೆ. ಬಿಹಾರದ ಪ್ರಶಾಂತ್ ಕಿಶೋರ್ ಜನರನ್ನು ಯಾಮಾರಿಸಲು ಆಂಧ್ರಪ್ರದೇಶದ ರಾಜಕೀಯದ ಬಗ್ಗೆ ತಮ್ಮ ಅತ್ಯಾತ್ಮವಿಶ್ವಾದ ಭಾವನೆಯನ್ನು ಹೊರಹಾಕಿದ್ದಾರೆ ಅಷ್ಟೇ ಎಂದು ಹೇಳಿದರು. ಟಿಡಿಪಿ-ಜನಸೇನಾ ಮೈತ್ರಿಕೂಟ ಸೋಲುವುದು ಖಚಿತ. ಕಲ್ಯಾಣ ಯೋಜನೆಗಳು ಜಾರಿ ಮಾಡುತ್ತಿದರೆ ಸರಕಾರಗಳು ಮತ್ತೆ ಏಕೆ ಬರುವುದಿಲ್ಲ ಎಂಬುದನ್ನು ವಿವರಿಸಬೇಕೆಂದರು. ಪ್ರಶಾಂತ್ ಕಿಶೋರ್ ಅವರು ಹೈದರಾಬಾದ್‌ನಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಅವರನ್ನು ಏಕೆ ರಹಸ್ಯವಾಗಿ ಭೇಟಿಯಾದರು ಎಂಬುದನ್ನು ಅಮರನಾಥ್ ತಿಳಿಯಲು ಬಯಸಿದ್ದಾರೆ. ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಅವರಂತೆ ಚಂದ್ರಬಾಬು ಕೂಡ ಆಂಧ್ರದಲ್ಲಿ ನಡೆಯದ ನಾಣ್ಯವಾಗಿದ್ದಾರೆ ಎಂದು ವ್ಯಾಖ್ಯಾನಿಸಿದರು.

ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಎಪಿ ಚುನಾವಣೆಯ ಕುರಿತು ಸಂವೇದನಾಶೀಲ ಕಾಮೆಂಟ್ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವೈಸಿಪಿ ಸರ್ಕಾರದ ಸೋಲು ಅನಿವಾರ್ಯ ಎಂದಿದ್ದಾರೆ. ಸಿಎಂ ವೈಎಸ್ ಜಗನ್ ಹೀನಾಯ ಸೋಲು ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಡಿಪಿ-ಜನಸೇನೆ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದೂ ಹೇಳಿದ್ದಾರೆ. ಜನತೆಯ ಹಣವನ್ನು ಇಷ್ಠಾನುಸಾರ ಪೋಲು ಮಾಡುತ್ತಿದ್ದಾರೆ. ಜನರ ಹಿತ ಕಾಯುತ್ತಿಲ್ಲ. ಹಾಗಾಗಿ ರಾಜಕೀಯವಾಗಿ ಸೋಲುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು. ಮೇಲಾಗಿ ಅರಮನೆಯಲ್ಲಿ ಕುಳಿತು ಗುಂಡಿ ಒತ್ತಿದರೆ ಮತಗಳು ಬರುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಎಚ್ಚರಿಸಿದರು. ಪಿಕೆ ಯ ಈ ಕಾಮೆಂಟ್‌ಗಳು ಎಪಿ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

2016ರಲ್ಲಿ ವೈಸಿಪಿ ಜತೆ ಒಪ್ಪಂದ ಮಾಡಿಕೊಂಡಿದ್ದ ಪಿ.ಕೆ, 2019ರ ಚುನಾವಣೆಯಲ್ಲಿ ಆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಪೂರ್ಣ ಪ್ರಮಾಣದ ರಾಜಕೀಯ ನಾಯಕರಾಗಲು ನಿರ್ಧರಿಸಿದರು. ಅವರು IPAC ನಿಂದ ಹೊರಬಂದು ಕೆಲವು ವರ್ಷಗಳ ಕಾಲ ಬಿಹಾರ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಚಂದ್ರಬಾಬು ಜತೆಗಿನ ಪ್ರಶಾಂತ್ ಕಿಶೋರ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಐಪಿಎಸಿ ಒಂದು ವರ್ಷದಿಂದ ವೈಸಿಪಿ ಜತೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಒಂದು ಕಾಲದಲ್ಲಿ ಪಿಕೆ ಸಹವರ್ತಿಯಾಗಿದ್ದ ರಿಷಿರಾಜ್ ಸಿಂಗ್ ಈಗ ವೈಸಿಪಿ ಪರ ಕೆಲಸ ಮಾಡುತ್ತಿದ್ದಾರೆ. ಆದರೆ, 2019ರ ಚುನಾವಣೆ ಬಳಿಕ ಅವರಿಂದ ದೂರ ಉಳಿದಿರುವ ಪ್ರಶಾಂತ್ ಕಿಶೋರ್, ಚುನಾವಣೆಗೂ ಮುನ್ನವೇ ಟಿಡಿಪಿ ಪರ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?