13ನೇ ಆರೋಪಿ ನಾನೇ, ಸ್ವಇಚ್ಛೆಯಿಂದ ಸಿಸಿಬಿ ಕಚೇರಿಗೆ ಬಂದು ಶರಣಾದ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪ ಕೇಸ್​ಗೆ ಸಂಬಂಧಿಸಿ ತಾನು ಆರೋಪಿ ಎಂದು ತಾನಾಗೇ ಬಂದು ಸಿಸಿಬಿ ಮುಂದೆ ಅನಿರುದ್ಧ್ ಎಂಬ ವ್ಯಕ್ತಿ ಶರಣಾಗಿದ್ದಾನೆ. ತನಗೂ ಡ್ರಗ್ಸ್ ಜಾಲದ ನಂಟಿದೆ ಎಂದು ಅನಿರುದ್ಧ್ ಹೇಳಿಕೊಂಡಿದ್ದಾನೆ. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಚಹಾ ಮಾರಾಟ ಮಾಡುವ ಫ್ಲಾಸ್ಕ್ ಸಹಿತ ಬಂದ ಅನಿರುದ್ಧ್ ನಟಿ ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ನಾನು ಇದ್ದೆ. ಈ ಪ್ರಕರಣದಲ್ಲಿ ನಾನು 13ನೇ ಆರೋಪಿ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಅನಿರುದ್ಧ್ […]

13ನೇ ಆರೋಪಿ ನಾನೇ, ಸ್ವಇಚ್ಛೆಯಿಂದ ಸಿಸಿಬಿ ಕಚೇರಿಗೆ ಬಂದು ಶರಣಾದ
ಆಯೇಷಾ ಬಾನು

Updated on: Sep 06, 2020 | 9:50 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪ ಕೇಸ್​ಗೆ ಸಂಬಂಧಿಸಿ ತಾನು ಆರೋಪಿ ಎಂದು ತಾನಾಗೇ ಬಂದು ಸಿಸಿಬಿ ಮುಂದೆ ಅನಿರುದ್ಧ್ ಎಂಬ ವ್ಯಕ್ತಿ ಶರಣಾಗಿದ್ದಾನೆ. ತನಗೂ ಡ್ರಗ್ಸ್ ಜಾಲದ ನಂಟಿದೆ ಎಂದು ಅನಿರುದ್ಧ್ ಹೇಳಿಕೊಂಡಿದ್ದಾನೆ.

ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಚಹಾ ಮಾರಾಟ ಮಾಡುವ ಫ್ಲಾಸ್ಕ್ ಸಹಿತ ಬಂದ ಅನಿರುದ್ಧ್ ನಟಿ ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ನಾನು ಇದ್ದೆ. ಈ ಪ್ರಕರಣದಲ್ಲಿ ನಾನು 13ನೇ ಆರೋಪಿ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಅನಿರುದ್ಧ್ ಹೇಳಿಕೊಂಡಿದ್ದಾನೆ. ಸದ್ಯ ಈಗ ಅಧಿಕಾರಿಗಳು ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ.

Published On - 9:24 am, Sun, 6 September 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us