ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandran’s new look

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು […]

ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandrans new look
ಅರುಣ್​ ಕುಮಾರ್​ ಬೆಳ್ಳಿ

Updated on: Nov 09, 2020 | 9:17 PM

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ.

ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು ನಿರ್ವಹಿಸುತ್ತಿರುವ ಪಾತ್ರದ ಹೆಸರು ಗುಣಭದ್ರ ಎಂದು ಗೊತ್ತಾಗಿದೆ. ಬಿಳಿ ಪಂಚೆ, ತಲೆ ಮೇಲೆ ಮುಂಡಾಸು ಮತ್ತು ಮುಖದ ಮೇಲೆ ಗಿರಿಜಾ ಮೀಸೆ ಹೊತ್ತ ರವಿಚಂದ್ರನ್ ಅವರ ಇಮೇಜ್ ಅಭಿಮಾನಿಗಳ ಕುತೂಹಲ ಕೆರಳಿಸುವದರೊಂದಿಗೆ ವೈರಲ್ ಕೂಡ ಆಗಿಬಿಟ್ಟಿದೆ.

ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರವನ್ನು ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಖ್ಯಾತ ಬಾಲಿವುಡ್ ನಟ ಟಾಮ್ ಆಲ್ಟರ್ ಅವರ ಮಗ ಜೆಮೀ ಆಲ್ಟರ್, ಕನ್ನಡಇಂಗ್ಲಿಷ್ ನಿಘಂಟು ರಚಿಸಿದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ‘ಕೆಜಿಎಫ್’ ಚಿತ್ರಕ್ಕೆ ಸಂಗೀತ ನೀಡಿದ ರವಿ ಬಸ್ರೂರ್ ‘ಕನ್ನಡಿಗ’ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಲಿದ್ದಾರೆ.

ರವಿಚಂದ್ರನ್ ಖುದ್ದು ಈ ಸಿನಿಮಾದ ಬಗ್ಗೆ ಬಹಳ ರೋಮಾಂಚಿತರಾಗಿದ್ದು ಇದರಲ್ಲಿರುವಂಥ ಪಾತ್ರವನ್ನು ಹಿಂದೆಂದೂ ಮಾಡಿಲ್ಲವೆಂದು ಹೇಳಿದ್ದಾರೆ.

Published On - 9:16 pm, Mon, 9 November 20

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us