Hiccups: ಯಾವ ಕಾರಣಕ್ಕೆ ಬಿಕ್ಕಳಿಕೆ ಬರುತ್ತಿದೆ? ಅದನ್ನು ತಡೆಯಲು ಇದನ್ನು ಪಾಲಿಸಿ!

ಬಿಕ್ಕಳಿಕೆ ಸಂಭವಿಸಿದಾಗ, ಅದೇ ಸಮಯದಲ್ಲಿ ಯಾರಾದರೂ ನಿಮಗೆ ಆಶ್ಚರ್ಯಕರವಾದದ್ದನ್ನು ಹೇಳಿದರೆ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ, ಥಟ್ಟಂತಾ ಗಮನವನ್ನು ಬೇರೆಡೆಗೆ ತಿರುಗಿಸಿದರೂ ಬಿಕ್ಕಳಿಕೆ ನಿಲ್ಲುತ್ತದೆ.

Hiccups: ಯಾವ ಕಾರಣಕ್ಕೆ ಬಿಕ್ಕಳಿಕೆ ಬರುತ್ತಿದೆ? ಅದನ್ನು ತಡೆಯಲು ಇದನ್ನು ಪಾಲಿಸಿ!
ಯಾವ ಕಾರಣಕ್ಕೆ ಬಿಕ್ಕಳಿಕೆ ಬರುತ್ತಿದೆ?
ಸಾಧು ಶ್ರೀನಾಥ್​

Updated on: May 16, 2023 | 12:39 PM

ಬಿಕ್ಕಳಿಕೆ ಬಂದಾಗ ಯಾರಾದರೂ ನಮ್ಮ ಬಗ್ಗೆ ಯೋಚಿಸುತ್ತಾರೆ ಎಂದು ಮನೆಯ ಹಿರಿಯರು ಹೇಳುವುದನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಬಿಕ್ಕಳಿಕೆ ಮತ್ತು ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ನೆನಪಿಸಿಕೊಳದ್ಳುತ್ತಾರೆ ಎನ್ನುವುದಕ್ಕೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ. ವಾಸ್ತವವಾಗಿ, ಹವಾಮಾನದಲ್ಲಿ ಹಠಾತ್ ಬದಲಾವಣೆ, ಬಿಸಿಯಾದ ನಂತರ ತಣ್ಣನೆಯದನ್ನು ತಿನ್ನುವುದು, ಸಿಗರೇಟ್ ಸೇದುವುದು, ಅತಿಯಾದ ಚಿಂತೆ ಕೂಡ ಬಿಕ್ಕಳಿಕೆಗೆ ಕಾರಣವಾಗಬಹುದು. ಬಿಕ್ಕಳಿಕೆ ಬರಲು ಪ್ರಾರಂಭಿಸಿದಾಗ, ಅದು ಕೂಡ ಸ್ವಲ್ಪ ಸಮಯದವರೆಗೆ ತೊಂದರೆಗೊಳಗಾಗಬಹುದು.

ಬಿಕ್ಕಳಿಕೆ – ಎಂದರೆ, ಬಿಕ್ಕಿ ಬಿಕ್ಕಿ ಅಳುವಾಗ ಉಸಿರನ್ನು ಹಿಡಿಯುವುದು ಎಂದು ಲ್ಯಾಟಿನ್‍ ಭಾಷೆಯಲ್ಲಿ ಅರ್ಥ ಕೊಡುತ್ತದೆ. ಬಿಕ್ಕಳಿಕೆಯು (ಹಿಕಪ್ಸ್) ವಪೆಯ ಸ್ನಾಯುಗಳು ಒಮ್ಮೆಗೆ ಸಂಕುಚಿತಗೊಳ್ಳುವುದರಿಂದ ಉಂಟಾಗುವ ಪ್ರಕ್ರಿಯೆ. ಅದೇ ಸಮಯದಲ್ಲಿ ಧ್ವನಿನಾಳದ ಮುಚ್ಚಳವೂ (ಎಪಿಗ್ಲಾಟಿಸ್) ಮುಚ್ಚಿಹೋಗುವುದರಿಂದ ‘ಹಿಕ್’ ಎಂಬ ಶಬ್ದ ಉಂಟಾಗುವುದೇ ಬಿಕ್ಕಳಿಕೆ.

ನಿಮಗೆ ಬಿಕ್ಕಳಿಕೆ ಇದ್ದರೆ ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು ಎಂಬುದು ಸಾಮಾನ್ಯ ಸಲಹೆ. ಅಥವಾ ನೀರು ಕುಡಿಯಿರಿ, ಕಿವಿ ಉಜ್ಜಿರಿ ಬಿಕ್ಕಳಿಕೆ ನಿಲ್ಲುತ್ತದೆ ಎಂದೂ ಕೆಲವರು ಉಚಿತ ಸಲಹೆ ನಿಡುತ್ತಾರೆ. ಒಂದು ಸಂಶೋಧನೆಯ ಪ್ರಕಾರ, ಗರ್ಭಾಶಯದಲ್ಲಿರುವ ಎರಡು ತಿಂಗಳ ಭ್ರೂಣವು ಅದರ ಉಸಿರಾಟದ ವ್ಯವಸ್ಥೆಯ ಆರಂಭದಿಂದಲೂ ಬಿಕ್ಕಳಿಸುತ್ತದೆ ಎಂದು ಅಲ್ಟ್ರಾಸೌಂಡ್ ವರದಿಯಿಂದ ತಿಳಿದುಬರುತ್ತದೆ.

ಬಿಕ್ಕಳಿಕೆಯನ್ನು ಸೆಕೆಂಡುಗಳಲ್ಲಿ ನಿಲ್ಲಿಸುವ ಕೆಲವು ಸರಳ ಸಲಹೆಗಳನ್ನು ಕಲಿಯೋಣ. ಒಂದು ಲೋಟ ತಣ್ಣೀರು ಕುಡಿಯಿರಿ

ಬಿಕ್ಕಳಿಕೆ ಪ್ರಾರಂಭವಾದ ತಕ್ಷಣ ತಣ್ಣೀರು ಕುಡಿಯುವುದರಿಂದ ಅದು ನಿಲ್ಲುತ್ತದೆ ಎನ್ನಬಹುದು. ಕೆಲವರು ನೀರು ಕುಡಿಯುವಾಗ ಮೂಗು ಮುಚ್ಚಿಕೊಳ್ಳುವಂತೆ ಹೇಳುತ್ತಾರೆ! ಅದೇ ಸಮಯದಲ್ಲಿ, ಏಕಾಗ್ರಚಿತ್ತದಿಂದ ಗ್ಲಾಸನ್ನು ತಿರುಗಿಸುವ ಮೂಲಕ ಇನ್ನೊಂದು ತುದಿಯಿಂದ ನೀರನ್ನು ಕುಡಿಯುವುದು ಉತ್ತಮ.

ಕೆಲವು ಕ್ಷಣಗಳ ಕಾಲ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ: ಬಿಕ್ಕಳಿಕೆ ಬಂದಾಗ ಕೆಲವು ಕ್ಷಣ ಉಸಿರು ಬಿಗಿ ಹಿಡಿದುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಇದು ತುಂಬಾ ಹಳೆಯ ವಿಧಾನವಾಗಿದ್ದು, ಬಿಕ್ಕಳಿಕೆಯನ್ನು ನಿಲ್ಲಿಸಲು ಸಹ ಸಹಾಯ ಮಾಡುತ್ತದೆ.

ಒಂದು ಟೀ ಚಮಚ ಜೇನುತುಪ್ಪ: ಬಿಕ್ಕಳಿಕೆಗೆ ಒಂದು ಚಮಚ ಜೇನುತುಪ್ಪ ಒಳ್ಳೆಯದು ಎಂದು ಒಂದು ಸಿದ್ಧಾಂತ ಹೇಳುತ್ತದೆ. ಜೇನುತುಪ್ಪದ ಹಠಾತ್ ಮಾಧುರ್ಯವು ನರಗಳನ್ನು ಸಮತೋಲನಗೊಳಿಸುತ್ತದೆ.

ಬಾಯಿಗೆ ಬೆರಳುಗಳನ್ನು ಸೇರಿಸಿ: ಈ ವಿಧಾನವನ್ನು ನೀವು ಇಷ್ಟಪಡದಿರಬಹುದು ಆದರೆ ಬಹಳ ಎಚ್ಚರಿಕೆಯಿಂದ ನಿಮ್ಮ ಬೆರಳನ್ನು ನಿಮ್ಮ ಬಾಯಿಯಲ್ಲಿ ಹಾಕಿದರೆ ಬಿಕ್ಕಳಿಕೆ ನಿಲ್ಲುತ್ತದೆ.

ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಗೆ ತನ್ನಿ: ಬಿಕ್ಕಳಿಕೆ ಸಂಭವಿಸಿದ ತಕ್ಷಣ, ದಿಢೀರನೆ ಎದ್ದು ಕುಳಿತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆ ವರೆಗೆ ತನ್ನಿ. ಇದು ಶ್ವಾಸಕೋಶವನ್ನು ಕುಗ್ಗಿಸುವ ಮೂಲಕ ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ.

ಕುತ್ತಿಗೆಯ ಮೇಲೆ ಐಸ್ ಚೀಲವನ್ನು ಇರಿಸಿ: ಐಸ್ ಪ್ಯಾಕ್ ಅಥವಾ ತಣ್ಣೀರಿನಲ್ಲಿ ನೆನೆಸಿದ ಬಟ್ಟೆಯನ್ನು ಕುತ್ತಿಗೆಯ ಮೇಲೆ ಇಡುವುದು ಸಹ ಬಿಕ್ಕಳಿಸಿದಾಗ ಸಹಾಯ ಮಾಡುತ್ತದೆ.

ಹಠಾತ್ ವ್ಯಾಕುಲತೆ: ಬಿಕ್ಕಳಿಕೆ ಸಂಭವಿಸಿದಾಗ, ಅದೇ ಸಮಯದಲ್ಲಿ ಯಾರಾದರೂ ನಿಮಗೆ ಆಶ್ಚರ್ಯಕರವಾದದ್ದನ್ನು ಹೇಳಿದರೆ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ, ಥಟ್ಟಂತಾ ಗಮನವನ್ನು ಬೇರೆಡೆಗೆ ತಿರುಗಿಸಿದರೂ ಬಿಕ್ಕಳಿಕೆ ನಿಲ್ಲುತ್ತದೆ.

ಪ್ಲಾಸ್ಟಿಕ್ ಚೀಲದಲ್ಲಿ ಉಸಿರಾಡಿ: ಪೇಪರ್ ಬ್ಯಾಗ್ ನಲ್ಲಿ ಹತ್ತು ಬಾರಿ ಉಸಿರು ಎಳೆದು ಬಿಟ್ಟರೂ ಬಿಕ್ಕಳಿಕೆ ನಿಲ್ಲುತ್ತದೆ. ಇದು ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಅನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ಬಿಕ್ಕಳಿಕೆಯೂ ನಿಲ್ಲುತ್ತದೆ.

ಚೂಯಿಂಗ್ ಗಮ್​​: ಮದ್ಯಪಾನದಿಂದ ಬಿಕ್ಕಳಿಕೆ ಬಂದರೆ ನಿಂಬೆಹಣ್ಣನ್ನು ಜಗಿಯುವುದರಿಂದಲೂ ಬಿಕ್ಕಳಿಕೆ ನಿಲ್ಲುತ್ತದೆ. ನಿಂಬೆಯ ಕಾಲುಭಾಗವನ್ನು ಕತ್ತರಿಸಿ ಬಾಯಿಗೆ ಹಾಕಿಕೊಳ್ಳಿ. ಬಿಕ್ಕಳಿಕೆಯಿಂದ ತಕ್ಷಣದ ಪರಿಹಾರ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us