
Budget
ಬಜೆಟ್ ಎಂದರೆ ಆಯವ್ಯಯ ಪತ್ರ. ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. ಯೂನಿಯನ್ ಬಜೆಟ್ ಅಥವಾ ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರ ರೂಪಿಸುವ ಬಜೆಟ್. ಇದು ಒಂದು ಹಣಕಾಸು ವರ್ಷದ ಹಣಕಾಸು ಲೆಕ್ಕಾಚಾರವಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚುಗಳ ಒಂದು ಲೆಕ್ಕಪುಸ್ತಕವೇ ಬಜೆಟ್. ಇಡೀ ಒಂದು ವರ್ಷದಲ್ಲಿ ಸರ್ಕಾರದಿಂದ ಯಾವುದೆಲ್ಲಾ ಮತ್ತು ಎಷ್ಟೆಲ್ಲಾ ಆದಾಯ ಬರಬಹುದು. ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ ಮಾಡಬೇಕು ಎಂದು ನಮೂದಿಸಲಾಗುತ್ತದೆ. ಒಂದು ಹಣಕಾಸು ವರ್ಷ ಎಂದರೆ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗಿನ ಅವಧಿ. ಬಜೆಟ್ ಅನ್ನು ರೆವೆನ್ಯೂ ಬಜೆಟ್ ಮತ್ತು ಕ್ಯಾಪಿಟಲ್ ಬಜೆಟ್ ಎಂದು ವರ್ಗೀಕರಿಸಲಾಗುತ್ತದೆ. ರೆವೆನ್ಯೂ ಬಜೆಟ್ನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯಗಳು, ಮತ್ತು ಆ ಆದಾಯ ಹಣವನ್ನು ಹೇಗೆಲ್ಲಾ ವಿನಿಯೋಗಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ. ಕ್ಯಾಪಿಟಲ್ ಬಜೆಟ್ನಲ್ಲಿ ಸರ್ಕಾರ ಸಾರ್ವಜನಿಕ ಸಾಲಗಳಿಂದ ಪಡೆಯಬಹುದಾದ ಹಣದ ವಿವರ ಹಾಗೂ ಆ ಹಣ ಎಲ್ಲೆಲ್ಲಿ ಬಳಕೆ ಆಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.
ಮುಸ್ಲಿಂ ಮೀಸಲಾತಿ ವಿಧೇಯಕ ಪಾಸು ಮಾಡಿಕೊಳ್ಳಲು ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ: ಯತ್ನಾಳ್
ಇವತ್ತು ಸದನದಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಾಗಿದೆ, ಚೀಟಿ ವಿಷಯದ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಬಸನಗೌಡ ಯತ್ನಾಳ್, ಸರಕಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರಿಯುತ್ತದೆ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ನಾಯಕ ಅಶೋಕ ಸಭೆಯೊಂದನ್ನು ಕರೆದಿದ್ದಾರೆ, ಅದರಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿ ಹೇಳಿದರು.
- Arun Belly
- Updated on: Mar 21, 2025
- 7:52 pm
Karnataka Budget session: ಸಭಾಧ್ಯಕ್ಷನ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಸ್ಪೀಕರ್ ಯುಟಿ ಖಾದರ್
ಸಭಾಧ್ಯಕ್ಷ ಖಾದರ್ ಸದಸ್ಯರನ್ನು ಸಸ್ಪೆಂಡ್ ಮಾಡುವ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿ ಶಾಸಕರು ತಮ್ಮ ವರ್ತನೆಯಿಂದ ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ, ಅವರ ವರ್ತನೆಯನ್ನು ಸದನ ಕ್ಷಮಿಸುವುದು ಸಾಧ್ಯವಿಲ್ಲ, ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ನಂತರ ಖಾದರ್ ಶಾಸಕರ ಹೆಸರುಗಳನ್ನು ಓದಿ ವಜಾ ಮಾಡಿರುವುದಾಗಿ ಘೋಷಿಸುತ್ತಾರೆ.
- Arun Belly
- Updated on: Mar 21, 2025
- 5:46 pm
Karnataka Budget Session; ನಂಬಿಕೆ, ವಿಶ್ವಾಸಗಳಿಗೆ ವಿಷಪ್ರಾಶನ ಮಾಡಿರುವಂಥ ಘಟನೆ ಹನಿ ಟ್ರ್ಯಾಪ್: ಸುನೀಲ ಕುಮಾರ
ಆಡಳಿತ ಪಕ್ಷದ ಸಚಿವರರೊಬ್ಬರ ಕೈವಾಡ ಹನಿಟ್ರ್ಯಾಪ್ ಪ್ರಕರಣದಲ್ಲಿ ಇದ್ದಿದ್ದೇಯಾದರೆ ಮುಖ್ಯಮಂತ್ರಿಯವರು ಸಚಿವನನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಬೇಕೆಂದು ಸುನೀಲ ಕುಮಾರ್ ಹೇಳಿದಾಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಆರೋಪಗಳನ್ನು ತಾನು ಮಾಡಿದ್ದಲ್ಲ, ಇಂಟಿಲೆನ್ಸ್ ವಿಭಾಗ ಮುಖ್ಯಮಂತ್ರಿಯವರ ಸುಪರ್ದಿಯಲ್ಲಿರುತ್ತದೆ, ಅವರು ಉತ್ತರ ಕೊಡಲಿ ಎಂದು ಸುನೀಲ ಹೇಳುತ್ತಾರೆ.
- Arun Belly
- Updated on: Mar 21, 2025
- 11:14 am
ಮದರಸಾಗಳಲ್ಲಿ ದೇಶ ವಿರೋಧಿ ಚಟುವಟಿಕೆ ಹೇಳಿಕೊಡಲಾಗುತ್ತದೆ ಅಂತ ಯತ್ನಾಳ್ ಹೇಳಿದಾಗ ಸದನದಲ್ಲಿ ಗಲಾಟೆ
ರಿಜ್ವಾನ್ ಅರ್ಷದ್ ಮಾತಾಡವಾಗ ಯತ್ನಾಳ್ರನ್ನು ದೇಶ ವಿರೋಧಿ, ದೇಶ ದ್ರೋಹಿ ಅಂತೆಲ್ಲ ಕರೆಯುತ್ತಾರೆ. ಯತ್ನಾಳ್ ಮಾತಾಡುವುದು ಕೇಳಿಸಲ್ಲ. ಎಂಬಿ ಪಾಟೀಲ್ ಮಾತಾಡುವುದು ಸಹ ಕೇಳಿಸಲ್ಲ, ಏತನ್ಮಧ್ಯೆ ಕಾಂಗ್ರೆಸ್ ಸದಸ್ಯರೊಬ್ಬರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮಾತುಗಳನ್ನಾಡಿರುವ ಯತ್ನಾಳ್ ಅವರನ್ನು ಸದನದಿಂದ ಸಸ್ಪೆಂಡ್ ಮಾಡಿ ಎಂದು ಹೇಳುತ್ತಾರೆ.
- Arun Belly
- Updated on: Mar 20, 2025
- 6:47 pm
Karnataka Budget Session; ಅತ್ಯಾಚಾರದ ಸುಳ್ಳು ಆರೋಪ ಹೊರೆಸಿ ನನ್ನ ಬದುಕನ್ನೇ ಹಾಳು ಮಾಡಲಾಯಿತು: ಮುನಿರತ್ನ
ನೀವು ಯಾರ ಮೇಲೆ ಆಪಾದನೆ ಮಾಡುತ್ತಿದ್ದೀರಿ, ಅದನ್ನಾದರೂ ಹೇಳಿ ಅಂತ ಬಾಲಕೃಷ್ಣ ಹೇಳುತ್ತಾರೆ. ಮುನಿರತ್ನ ಮುಂದೆ ಕೂತಿದ್ದ ಸುನೀಲ ಕುಮಾರ್ ಸುಮ್ಮನಿರಿ ಅಂತ ಸನ್ನೆ ಮಾಡಿದರೂ ಆರ್ ಆರ್ ನಗರ ಶಾಸಕ ಸುಮ್ಮನಾಗಲ್ಲ. ನೀವು ಹೇಳುತ್ತಿರುವ ಪ್ರಕರಣ ನ್ಯಾಯಾಲಯಲ್ಲಿದೆ, ಮಾತಾಡುವುದು ಸರಿಯಲ್ಲ ಎಂದು ಖಾದರ್ ಮತ್ತು ಬಾಲಕೃಷ್ಣ ಹೇಳುತ್ತಾರೆ.
- Arun Belly
- Updated on: Mar 20, 2025
- 5:58 pm
Karnataka Budget Session: ರಾಯರೆಡ್ಡಿ ಮತ್ತು ಯತ್ನಾಳ್ ಮಾತಿನ ಜಗಳದ ನಡುವೆ ಜೋಕ್ ಕಟ್ ಮಾಡಿ ಎಲ್ಲರನ್ನೂ ನಗಿಸಿದ ಸುರೇಶ್ ಕುಮಾರ್
ಒಂದು ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ, ಯತ್ನಾಳ್ ಹೃದಯ ದೊಡ್ಡದು, ವಿಶಾಲ ಹೃದಯದವರು ಅಂತ ಹೇಳಿದಾಗ ಬಿಜೆಪಿ ಶಾಸಕ ಹಾಗೇನೂ ಇಲ್ಲ, ನಾನು ಸಂಕುಚಿತ ಹೃದಯದವನು ಅಂತ ಒಪ್ಕೋತೀನಿ ಅನ್ನುತ್ತಾರೆ. ಆಮೇಲೆ ಯತ್ನಾಳ್ ನಾವಿಬ್ಬರೂ ಉತ್ತರ ಕರ್ನಾಟಕದವರು ಅವರ ಹೆಸರಲ್ಲೂ ಬಸವರಾಜ ಇದೆ ನನ್ನ ಹೆಸರಲ್ಲೂ ಬಸವಣ್ಣ ಇದ್ದಾನೆ ಅಂತ ಹೇಳಿ ವಾಗ್ವಾದ ಮುಗಿಸುತ್ತಾರೆ.
- Arun Belly
- Updated on: Mar 20, 2025
- 3:39 pm
Karnataka Budget Session; ಕಾಂಗ್ರೆಸ್ ಸರ್ಕಾರಕ್ಕೆ ಸಮಾನತೆ ಹೇಳಲಷ್ಟೇ ಬೇಕು, ಕಾರ್ಯರೂಪದಲ್ಲಿ ತರಲಲ್ಲ: ಧೀರಜ್ ಮುನಿರಾಜ್
ಧೀರಜ್ ಮುನಿರಾಜ್ ಮಾತಿನಿಂದ ಕೆರಳುವ ಹಿರಿಯ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ, ನೀನು ಮೊದಲ ಬರಿಗೆ ಶಾಸಕನಾಗಿ ಅಯ್ಕೆಯಾಗಿ ಅಸೆಂಬ್ಲಿಗೆ ಬಂದಿದ್ದೀಯ, ಇದು ಮೊದಲಿನಿಂದ ನಡೆದುಕೊಂಡಿರುವ ಪ್ರಕ್ರಿಯೆ, ಅಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ ಸಿಗೋದು ಹೊಸತೇನಲ್ಲ, ಮುಂಬರುವ ದಿನಗಳಲ್ಲಿ ನಿನಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.
- Arun Belly
- Updated on: Mar 19, 2025
- 4:23 pm
Karnataka Budget Session: ಯಾದಗಿರಿ ಜಿಲ್ಲೆ ಸಮಸ್ಯೆಗಳನ್ನು ಮಾರ್ಮಿಕವಾಗಿ ಸರ್ಕಾರದ ಗಮನಕ್ಕೆ ತಂದ ಶಾಸಕ ಶರಣಗೌಡ ಕಂದ್ಕೂರ್
ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಉಷ್ಣಾಂಶ 45-46 ಡಿಗ್ರೀ ಸೆಲ್ಸಿಯಸ್ ತಲುಪುತ್ತದೆ, ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ, ಈ ವರ್ಷ ಉಷ್ಣಾಂಶ ಮತ್ತಷ್ಟು ಹೆಚ್ಚಲಿದೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀರಿನ ಸಮಸ್ಯೆಯನ್ನು ವಿವರಿಸಿದ್ದೆ, ₹ 2,000 ಕೋಟಿ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಅವರು ಹೇಳುತ್ತಾರೆ, ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಹಣವಿಲ್ಲ, ಸರ್ಕಾರ ಎಲ್ಲ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶರಣಗೌಡ ಕಂದ್ಕೂರ್ ಹೇಳಿದರು.
- Arun Belly
- Updated on: Mar 19, 2025
- 2:27 pm
Karnataka Budget Session: ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಕೇಳುವ ಶೈಲಿಯಿಂದ ಇಂಪ್ರೆಸ್ ಆದ ಸ್ಪೀಕರ್ ಯುಟಿ ಖಾದರ್
ದರ್ಶನ್ ಪುಟ್ಟಣಯ್ಯ ಅವರ ಮಾತುಗಳಿಂದ ಸ್ಪೀಕರ್ ಯುಟಿ ಖಾದರ್ ಬಹಳ ಇಂಪ್ರೆಸ್ ಆಗುತ್ತಾರೆ. ಬೇರೆ ಸದಸ್ಯರು ಮಾತಾಡಲು ಎದ್ದುನಿಂತಾಗ ಖಾದರ್ ಅವರು ದರ್ಶನ್ ಅವರ ಮಾದರಿ ಅನುಸರಿಸುವಂತೆ ಹೇಳುತ್ತಾರೆ. ದರ್ಶನ್ ಪ್ರಶ್ನೆಗಳನ್ನು ಕೇಳಿದ ರೀತಿ ಮಾಧ್ಯಮದವರಿಗೂ ಸುಲಭವಾಗಿ ವರದಿ ಮಾಡಲು ಸಾಧ್ಯವಾಗುತ್ತದೆ ಎಂದು ಸ್ಪೀಕರ್ ಹೇಳುತ್ತಾರೆ.
- Arun Belly
- Updated on: Mar 19, 2025
- 11:26 am
ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯವಾಗದಿದ್ರೆ ರಾಜ್ಯ ರೆವಿನ್ಯೂ ಸರ್ಪ್ಲಸ್ ಒಳಗಡೆ ಬರಬಹುದು: ಶಿವಲಿಂಗೇಗೌಡ
ತಾನು ಮಾತಾಡುವಾಗ ಪದೇಪದೆ ಕೊಕ್ಕೆ ಹಾಕುತ್ತಿದ್ದ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಮೇಲೆ ಶಿವಲಿಂಗೇಗೌಡರು ಉಗ್ರರೂಪ ತಳೆದರು. ಮುನಿರಾಜ್ ಏನೋ ಹೇಳಲು ಪ್ರಯತ್ನಿಸಿದಾಗ ಗೌಡರು ಸಿಟ್ಟಿನಿಂದ ಸುಮ್ನೆ ಕೂತ್ಕೊಳ್ರೀ ನೀವು ಅಂತ ಹೇಳುತ್ತಾರೆ. ಅವರ ಸಿಟ್ಟು ಕಂಡು ಸಬಾಧ್ಯಕ್ಷ ಖಾದರ್ ಅವರಿಗೆ ನಗುವೋ ನಗು, ಅದು ಕಾಣದಂತೆ ಬಾಯಿಗೆ ಕೈ ಇಟ್ಟು ಮುನಿರಾಜ್ ಗೆ ನೀವು ಕೂತ್ಕೊಳ್ಳಿ ಅನ್ನುತ್ತಾರೆ!
- Arun Belly
- Updated on: Mar 18, 2025
- 5:58 pm