Budget

Budget

ಬಜೆಟ್ ಎಂದರೆ ಆಯವ್ಯಯ ಪತ್ರ. ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. ಯೂನಿಯನ್ ಬಜೆಟ್ ಅಥವಾ ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರ ರೂಪಿಸುವ ಬಜೆಟ್. ಇದು ಒಂದು ಹಣಕಾಸು ವರ್ಷದ ಹಣಕಾಸು ಲೆಕ್ಕಾಚಾರವಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ಖರ್ಚುಗಳ ಒಂದು ಲೆಕ್ಕಪುಸ್ತಕವೇ ಬಜೆಟ್. ಇಡೀ ಒಂದು ವರ್ಷದಲ್ಲಿ ಸರ್ಕಾರದಿಂದ ಯಾವುದೆಲ್ಲಾ ಮತ್ತು ಎಷ್ಟೆಲ್ಲಾ ಆದಾಯ ಬರಬಹುದು. ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ ಮಾಡಬೇಕು ಎಂದು ನಮೂದಿಸಲಾಗುತ್ತದೆ. ಒಂದು ಹಣಕಾಸು ವರ್ಷ ಎಂದರೆ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗಿನ ಅವಧಿ. ಬಜೆಟ್ ಅನ್ನು ರೆವೆನ್ಯೂ ಬಜೆಟ್ ಮತ್ತು ಕ್ಯಾಪಿಟಲ್ ಬಜೆಟ್ ಎಂದು ವರ್ಗೀಕರಿಸಲಾಗುತ್ತದೆ. ರೆವೆನ್ಯೂ ಬಜೆಟ್​ನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯಗಳು, ಮತ್ತು ಆ ಆದಾಯ ಹಣವನ್ನು ಹೇಗೆಲ್ಲಾ ವಿನಿಯೋಗಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ. ಕ್ಯಾಪಿಟಲ್ ಬಜೆಟ್​ನಲ್ಲಿ ಸರ್ಕಾರ ಸಾರ್ವಜನಿಕ ಸಾಲಗಳಿಂದ ಪಡೆಯಬಹುದಾದ ಹಣದ ವಿವರ ಹಾಗೂ ಆ ಹಣ ಎಲ್ಲೆಲ್ಲಿ ಬಳಕೆ ಆಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.

ಇನ್ನೂ ಹೆಚ್ಚು ಓದಿ

ಸಿದ್ದರಾಮಯ್ಯ 16ನೇ ಬಜೆಟ್​​ಗೆ ಕೌಂಟ್ ಡೌನ್​: ರಾಜ್ಯದ ಇತಿಹಾಸದಲ್ಲೇ ಮೊದಲ ಬಿಗ್​ ಬಜೆಟ್

Karnataka Budget 2025: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2025ನೇ ಸಾಲಿನ ಬಜೆಟ್​ ಮಂಡನೆಯಾಗಿದ್ದು, ಇದೀಗ ಕರ್ನಾಟಕ ಸರ್ಕಾರ ರಾಜ್ಯ ಬಜೆಟ್​ ಮಂಡನೆಗೆ ಸಿದ್ಧತೆಗಳು ನಡೆದಿವೆ. ಹೌದು ಸಿದ್ದರಾಮಯ್ಯ ಸರ್ಕಾರದ 2025-26ನೇ ಸಾಲಿನ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ದಿನಾಂಕ ಸಮೀಪಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಇಲಾಖಾವಾರು ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದಾರೆ. ಆದಾಯ ಕ್ರೂಢೀಕರಣದ ಕುರಿತಾಗಿ ಮಾಹಿತಿ‌ ಸಂಗ್ರಹಿಸಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್​ ಮಂಡಿಸಲು ಸಿದ್ದರಾಮಯ್ಯ ಸಕಲ ತಯಾರಿ ನಡೆಸಿದ್ದಾರೆ.

ನಿಮ್ಮ ಬಿಟ್​ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು

Budget 2025 and crypto assets: ವರ್ಚುವಲ್ ಡಿಜಿಟಲ್ ಅಸೆಟ್​ಗಳ ಯಾವುದೇ ಖರೀದಿ ಮತ್ತು ಮಾರಾಟ ಮಾಡಿದರೆ ಆ ವಹಿವಾಟು ಸರ್ಕಾರದ ಗಮನಕ್ಕೆ ಹೋಗಲಿದೆ. ಬಜೆಟ್​ನಲ್ಲಿ ಕಾನೂನು ತಿದ್ದುಪಡಿಯ ಪ್ರಸ್ತಾಪ ಮಾಡಲಾಗಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದ್ದು 2026ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಬಹುದು. ಕ್ರಿಪ್ಟೋ ಟೆಕ್ನಾಲಜಿ ಬಳಸುವ ಯಾವುದೇ ಆಸ್ತಿಯಾದರೂ ಅದು ವರ್ಚುವಲ್ ಡಿಜಿಟಲ್ ಅಸೆಟ್ ಆಗಿ ಪರಿಗಣಿತವಾಗುತ್ತದೆ.

Income Tax: 75,000 ರೂಗೆ ಟ್ಯಾಕ್ಸ್ ಡಿಡಕ್ಷನ್; 13.70 ಲಕ್ಷ ರೂವರೆಗೂ ತೆರಿಗೆ ಇಲ್ಲ; ಯಾರಿಗಿದೆ ಈ ಅವಕಾಶ? ಇಲ್ಲಿದೆ ಡೀಟೇಲ್ಸ್

Income tax and standard deduction: ವರ್ಷಕ್ಕೆ 12 ಲಕ್ಷ ರೂ ಆದಾಯಕ್ಕೆ ತೆರಿಗೆ ಇರಲ್ಲ ಎಂದು ಫೆ. 1ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸಂಬಳದ ಆದಾಯ ಹೊಂದಿರುವವರಿಗೆ ಇನ್ನೂ ಹೆಚ್ಚುವರಿ ಟ್ಯಾಕ್ಸ್ ಲಾಭಗಳು ಸಿಗುತ್ತವೆ. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತದೆ. ಜೊತೆಗೆ, ಎನ್​ಪಿಎಸ್ ಅಕೌಂಟ್ ಹೊಂದಿದ್ದರೆ ಕಂಪನಿಯ ಕೊಡುಗೆಯ ಹಣಕ್ಕೂ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಒಟ್ಟಾರೆ 13.70 ಲಕ್ಷ ರೂ ಸಂಬಳ ಪಡೆಯುತ್ತಿರುವವರಿಗೆ ತೆರಿಗೆ ಬಾಧ್ಯತೆಯೇ ಇರುವುದಿಲ್ಲ.

ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ

Income tax and Marginal relief: 12 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ಟ್ಯಾಕ್ಸ್ ಕಟ್ಟಬೇಕಿಲ್ಲ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಂದರೆ, ಈ ಮೊತ್ತಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಇದರಿಂದ ಶೂನ್ಯ ತೆರಿಗೆ ಬಾಧ್ಯತೆ ಇರುತ್ತದೆ. ಅಕಸ್ಮಾತ್, ನಿಮ್ಮ ಆದಾಯವು 12 ಲಕ್ಷ ರೂಗಿಂತ ಹೆಚ್ಚಿದ್ದಲ್ಲಿ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಎನ್ನುವ ಸೌಲಭ್ಯವನ್ನು ಬಳಸಬಹುದು.

ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಗಿದೆಯಾ? ಬೇರೆ ಪ್ರಮುಖ ದೇಶಗಳಲ್ಲಿ ಎಷ್ಟಿದೆ ಆದಾಯ ತೆರಿಗೆ? ಇಲ್ಲಿದೆ ಡೀಟೇಲ್ಸ್

Income tax comparison: ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಅತಿಯಾಯಿತು. ಕಡಿಮೆ ಮಾಡಬೇಕು ಎನ್ನುವ ಕೂಗು ಸಾಕಷ್ಟು ಕೇಳಿಬರುತ್ತದೆ. ಈ ಬಜೆಟ್​ನಲ್ಲಿ ಈ ಕೂಗಿಗೆ ಒಂದಷ್ಟು ಸ್ಪಂದನೆ ಕೂಡ ಸಿಕ್ಕಿದೆ. ಇದೇ ವೇಳೆ, ಬೇರೆ ದೇಶಗಳಲ್ಲಿ ಆದಾಯ ತೆರಿಗೆ ಎಷ್ಟಿದೆ, ಭಾರತಕ್ಕೆ ಹೋಲಿಸಿದರೆ ಹೇಗಿದೆ ಎನ್ನುವ ಕುತೂಹಲ ಇರಬಹುದು. ಪ್ರಮುಖ ಆರ್ಥಿಕತೆಗಳಿರುವ ಜಿ20 ಗುಂಪಿನ ದೇಶಗಳಲ್ಲಿ ಹೆಚ್ಚಿನವರು ಭಾರತದಕ್ಕಿಂತ ಹೆಚ್ಚು ತೆರಿಗೆ ಹೊಂದಿವೆ.

ಬಜೆಟ್ ದಿನ ಕೈಕೊಟ್ಟ ವಿದೇಶೀ ಹೂಡಿಕೆದಾರರು; ಕೈ ಹಿಡಿದ ದೇಶೀ ಹೂಡಿಕೆದಾರರು

Stock market on Budget day: ಮುಂಗಡಪತ್ರ ಮಂಡನೆಯಾದ ಶನಿವಾರ ಷೇರು ಮಾರುಕಟ್ಟೆ ಪ್ರತಿಕ್ರಿಯೆ ಮಿಶ್ರವಾಗಿತ್ತು. ಹೆಚ್ಚಿನ ಏರುಪೇರು ಇಲ್ಲದೆ ಮಾರುಕಟ್ಟೆ ಅಂತ್ಯವಾಯಿತು. ಈ ಮಧ್ಯೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಖರೀದಿಗಿಂತ ಷೇರು ಮಾರಾಟವೇ ಹೆಚ್ಚಾಗಿತ್ತು. ದೇಶೀಯ ಹೂಡಿಕೆದಾರರು ಹೆಚ್ಚಿನ ಮೊತ್ತದ ಷೇರುಗಳನ್ನು ಬಿಕರಿ ಮಾಡಿದರೂ, ಅದಕ್ಕಿಂತ ಹೆಚ್ಚು ಖರೀದಿ ಮಾಡಿರುವುದು ದತ್ತಾಂಶದಿಂದ ತಿಳಿದುಬರುತ್ತದೆ.

ನೆಹರೂ ಕಾಲದಲ್ಲಿ ನೀವು 12 ಲಕ್ಷ ರೂ ಗಳಿಸುತ್ತಿದ್ದರೆ… ಕಾಂಗ್ರೆಸ್ ಪಕ್ಷವನ್ನು ಛೇಡಿಸಿದ ಪ್ರಧಾನಿ ಮೋದಿ

Narendra Modi speaks on Union Budget: ಫೆಬ್ರುವರಿ 1ರಂದು ಮಂಡನೆಯಾದ ಬಜೆಟ್ ಅನ್ನು ಮಧ್ಯಮವರ್ಗದವರಿಗೆ ಸಿಕ್ಕ ಅತ್ಯಂತ ಸ್ನೇಹಮಯಿ ಬಜೆಟ್ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಬಜೆಟ್​ನಲ್ಲಿ 12 ಲಕ್ಷ ರೂವರೆಗಿನ ವಾರ್ಷಿಕ ಆದಾಯದವರಿಗೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಿರುವ ಕ್ರಮವನ್ನು ಸ್ವಾಗತಿಸಿದ್ದಾರೆ. 12 ಲಕ್ಷ ರೂ ಆದಾಯಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಎಷ್ಟೆಷ್ಟು ತೆರಿಗೆ ಕಟ್ಟಬೇಕಿತ್ತು ಎಂದು ತುಲನೆ ಮಾಡಿದ್ದಾರೆ.

ಬಜೆಟ್ ಎಫೆಕ್ಟ್, ಆಮದು ಸುಂಕ ಕಡಿತ; ಚಿನ್ನಾಭರಣ, ಇತರೆ ಒಡವೆಗಳ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ, ಫೆಬ್ರುವರಿ 2: ಕೇಂದ್ರ ಬಜೆಟ್​ನಲ್ಲಿ ಆಭರಣ ಭಾಗಗಳ ಆಮದು ಮೇಲಿನ ಸುಂಕವನ್ನು ಶೇ. 25ರಿಂದ ಶೇ. 20ಕ್ಕೆ ಇಳಿಸಲಾಗಿದೆ. ಪ್ಲಾಟಿನಂ ಫೈಂಡಿಂಗ್​​ಗಳ ಮೇಲಿನ ಆಮದು ಸುಂಕವನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದ ಒಟ್ಟಾರೆ ಆಭರಣಗಳ ಬೆಲೆ ಇಳಿಕೆಗೆ ದಾರಿಯಾಗಲಿದೆ. ಬಜೆಟ್​ನಲ್ಲಿ ತೆಗೆದುಕೊಂಡಿರುವ ಈ ಕ್ರಮವನ್ನು ಆಭರಣ ಉದ್ಯಮದವರು ಸ್ವಾಗತಿಸಿದ್ದಾರೆ.

ಬಜೆಟ್​ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ

Prof. K.V. Subramanian explains consumption multiplier effect on economy: ಬಜೆಟ್​ನಲ್ಲಿ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ. 12 ಲಕ್ಷ ರೂ ವಾರ್ಷಿಕ ಆದಾಯ ಇರುವವರು ತೆರಿಗೆಯನ್ನೇ ಕಟ್ಟಬೇಕಿಲ್ಲ. ಈ ಕ್ರಮದಿಂದ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ. ಇದರಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ ಆರ್ಥಿಕ ತಜ್ಞರಾದ ಪ್ರೊಫೆಸರ್ ಕೃಷ್ಣಮೂರ್ತಿ ವಿ ಸುಬ್ರಮಣಿಯನ್.

Union Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ: ಪ್ರಲ್ಹಾದ ಜೋಶಿ, ಸಚಿವ

Union Budget 2025: ಎಂಎಸ್​ಎಂಇ ಗಳ ಕ್ರೆಡಿಟ್ ವ್ಯಾಪ್ತಿಯನ್ನು ಹೆಚ್ಚು ಮಾಡಿರುವುದು ಅವುಗಳ ಸ್ಕೋಪ್ ಹೆಚ್ಚಿಸಲಿದೆ ಎಂದ ಸಚಿವ ಪ್ರಲ್ಹಾದ್ ಜೋಶಿ, ಸ್ಟಾರ್ಟ್​​​ ಅಪ್ ಕಂಪನಿಗಳಿಗೆ ಫಂಡ್ ಆಫ್ ಫಂಡ್ಸ್ ಅಂತ ₹ 10,000 ಕೋಟಿಯನ್ನು ತೆಗೆದಿರಿಸಿರುವುದು ಯುವಕರಿಗೆ ಹೆಚ್ಚು ಪ್ರಯೋಜನವಾಗಲಿದೆ, ಮತ್ತು ಫುಡ್ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುವವರಿಗೆ ಆರೋಗ್ಯ ವಿಮೆಯ ಸವಲತ್ತು ವಿಸ್ತರಿಸಿರುವುದು ಅಭಿನಂದನೀಯ ಎಂದರು.

ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ