ನೀರಿನ ಮಧ್ಯೆ ಒನಕೆ ಇರಿಸಿ ಗ್ರಹಣ ಪರೀಕ್ಷಿಸಿದ ಹಳ್ಳಿ ಜನ

ಬಳ್ಳಾರಿ: ಕಂಕಣ ಸೂರ್ಯ ಗ್ರಹಣ ಸಂದರ್ಭದಲ್ಲಿ ನೀರಿನ ಮಧ್ಯೆ ಒನಕೆ ನಿಲ್ಲಿಸಿ ಪ್ರಯೋಗ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಎರಕಲ್ಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಹಳೆಯ ಸಂಪ್ರದಾಯ ಪಾಲನೆ ಮಾಡಿ ಗ್ರಾಹಣ ಹಿಡಿಯುವ ಪ್ರಯೋಗ ಮಾಡಿದ್ದಾರೆ. ಬಗಲಿ ಶಾಂತಮ್ಮ ಎನ್ನುವವರ ಮನೆಯಲ್ಲಿ ಈ ಪ್ರಯೋಗ ನಡೆದಿದ್ದು, ಹಳ್ಳಿಯ ಜನರೆಲ್ಲ ಇದಕ್ಕೆ ಸಾಕ್ಷಿಯಾಗಿದ್ದಾರೆ. ಗ್ರಹಣ ಸಂದರ್ಭದಲ್ಲಿ ಒನಕೆ ನೀರಿನ ಮಧ್ಯೆ ನಿಂತಿದ್ದಕ್ಕೆ ಜನರು ಅಚ್ಚರಿ ಪಟ್ಟರು. ಗ್ರಹಣ ಶುರುವಾದಾಗ ಪ್ರಾರಂಭವಾಗುವ ಈ ಪ್ರಯೋಗ ಗ್ರಹಣ ಬಿಟ್ಟ ಮೇಲೆ […]

ನೀರಿನ ಮಧ್ಯೆ ಒನಕೆ ಇರಿಸಿ ಗ್ರಹಣ ಪರೀಕ್ಷಿಸಿದ ಹಳ್ಳಿ ಜನ

Updated on: Dec 27, 2019 | 11:50 AM

ಬಳ್ಳಾರಿ: ಕಂಕಣ ಸೂರ್ಯ ಗ್ರಹಣ ಸಂದರ್ಭದಲ್ಲಿ ನೀರಿನ ಮಧ್ಯೆ ಒನಕೆ ನಿಲ್ಲಿಸಿ ಪ್ರಯೋಗ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಎರಕಲ್ಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಹಳೆಯ ಸಂಪ್ರದಾಯ ಪಾಲನೆ ಮಾಡಿ ಗ್ರಾಹಣ ಹಿಡಿಯುವ ಪ್ರಯೋಗ ಮಾಡಿದ್ದಾರೆ.

ಬಗಲಿ ಶಾಂತಮ್ಮ ಎನ್ನುವವರ ಮನೆಯಲ್ಲಿ ಈ ಪ್ರಯೋಗ ನಡೆದಿದ್ದು, ಹಳ್ಳಿಯ ಜನರೆಲ್ಲ ಇದಕ್ಕೆ ಸಾಕ್ಷಿಯಾಗಿದ್ದಾರೆ. ಗ್ರಹಣ ಸಂದರ್ಭದಲ್ಲಿ ಒನಕೆ ನೀರಿನ ಮಧ್ಯೆ ನಿಂತಿದ್ದಕ್ಕೆ ಜನರು ಅಚ್ಚರಿ ಪಟ್ಟರು. ಗ್ರಹಣ ಶುರುವಾದಾಗ ಪ್ರಾರಂಭವಾಗುವ ಈ ಪ್ರಯೋಗ ಗ್ರಹಣ ಬಿಟ್ಟ ಮೇಲೆ ನಿಲ್ಲುತ್ತದೆ.

ವಿಸ್ಮಯ ಎಂದರೆ ಗ್ರಹಣ ಸಂದರ್ಭದಲ್ಲಿ ಮಾತ್ರ ಒನಕೆ ನೀರಿನ ಮಧ್ಯೆ ನಿಲ್ಲುತ್ತದೆ ಉಳಿದ ಸಂದರ್ಭದಲ್ಲಿ ಒನಕೆ ನಿಲ್ಲುವುದಿಲ್ಲ. ನಿಂತ ಒನಕೆ ಗ್ರಹಣ ಮುಗಿದ ಬಳಿಕ ಬೀಳುತ್ತೆ. ಈ ಹಿಂದೆಯು ಗ್ರಹಣ ಸಂದರ್ಭದಲ್ಲಿ ಇದೇ ರೀತಿ ಪದ್ಧತಿ ಆಚರಿಸಲಾಗುತ್ತಿತ್ತು. ಅಲ್ಲದೆ ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪದ್ಧತಿ ನಂಬಿಕೆಯನ್ನು ಆಚರಿಸಲಾಗುತ್ತಿದೆ.

Published On - 11:09 am, Thu, 26 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us