AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಟ್ರೈನಿಂಗ್‌ ಮುಗಿಸಿದ ಏರ್​ಮೆನ್‌ಗಳ ಚಿತ್ತ ದೇಶದ ಗಡಿ ಕಾಯುವತ್ತ!

ಬೆಳಗಾವಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣವಿದೆ. ಈ ನಡುವೆಯೇ ಹೊಸದಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ಏರ್​ಮೆನ್‌ಗಳು ಸೇರಿಕೊಳ್ಳುವ ಮೂಲಕ ಭಾರತೀಯ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ. ಹೌದು, ಇಂಡಿಯನ್ ಏರ್​ಫೋರ್ಸ್​ಗೆ ಆಯ್ಕೆಯಾಗಿರುವ 3325ಜನರಿಗೆ ಆರು ತಿಂಗಳ ಕಾಲ ಎಲ್ಲಾ ರೀತಿಯ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಶನಿವಾರ ನಡೆದ ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಪರೇಡ್‌ನಲ್ಲಿ ಒಟ್ಟು 3325 ತರಬೇತಿದಾರರು ತಮ್ಮ ತರಬೇತಿಯನ್ನ ಪೂರ್ಣಗೊಳಿಸಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಲು ಯೋಧರಾಗಿ ಸಜ್ಜಾಗಿದ್ದಾರೆ. ಏರ್‌ ಕಮಾಂಡರ್‌ […]

ಬೆಳಗಾವಿಯಲ್ಲಿ ಟ್ರೈನಿಂಗ್‌ ಮುಗಿಸಿದ ಏರ್​ಮೆನ್‌ಗಳ ಚಿತ್ತ ದೇಶದ ಗಡಿ ಕಾಯುವತ್ತ!
Guru
| Edited By: |

Updated on: Jun 20, 2020 | 7:01 PM

Share

ಬೆಳಗಾವಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣವಿದೆ. ಈ ನಡುವೆಯೇ ಹೊಸದಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ಏರ್​ಮೆನ್‌ಗಳು ಸೇರಿಕೊಳ್ಳುವ ಮೂಲಕ ಭಾರತೀಯ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.

ಹೌದು, ಇಂಡಿಯನ್ ಏರ್​ಫೋರ್ಸ್​ಗೆ ಆಯ್ಕೆಯಾಗಿರುವ 3325ಜನರಿಗೆ ಆರು ತಿಂಗಳ ಕಾಲ ಎಲ್ಲಾ ರೀತಿಯ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಶನಿವಾರ ನಡೆದ ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಪರೇಡ್‌ನಲ್ಲಿ ಒಟ್ಟು 3325 ತರಬೇತಿದಾರರು ತಮ್ಮ ತರಬೇತಿಯನ್ನ ಪೂರ್ಣಗೊಳಿಸಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಲು ಯೋಧರಾಗಿ ಸಜ್ಜಾಗಿದ್ದಾರೆ.

ಏರ್‌ ಕಮಾಂಡರ್‌ ಆರ್.ರವಿಶಂಕರ್‌ರಿಂದ ಪಥ ಸಂಚಲನ ವೀಕ್ಷಣೆ ಭಾರತೀಯ ವಾಯುಸೇನೆ ವತಿಯಿಂದ ಹೊಸದಾಗಿ ಆಯ್ಕೆಯಾಗಿದ್ದ ಈ ಏರ್​ಮನ್‌ಗಳಿಗೆ ನೀಡುತ್ತಿದ್ದ ತರಬೇತಿ ಇದೀಗ ಸಂಪೂರ್ಣವಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ 3325 ಏರ್ ಮೆನ್​ಗಳು ತರಬೇತಿ ಮುಗಿಸಿ ಹೊರ ಬಂದಿದ್ದಾರೆ. ಶನಿವಾರ ನಡೆದ ಪಾಸಿಂಗ್ ಪರೇಡ್‌ನಲ್ಲಿ ಈ ಎಲ್ಲಾ ಯೋಧರು ತಮಗೆ ನೀಡಿದ್ದ ತರಬೇತಿಯನ್ನ ಪ್ರದರ್ಶನ ಮಾಡಿದರು.

ಏರ್ ಕಮಾಂಡರ್ ಆರ್ ರವಿಶಂಕರ್ ಪಾಸಿಂಗ್ ಪರೇಡ್‌ನ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಪಥಸಂಚಲನ ವೀಕ್ಷಣೆ ಮಾಡಿದರಲ್ಲದೇ, ತರಬೇತಿ ವೇಳೆ ಅತ್ಯುತ್ತಮ ಪರ್‌ಫಾರ್ಮನ್ಸ್‌ ತೋರಿರುವ ನಾಲ್ಕು ಜನರಿಗೆ ಬಹುಮಾನ ವಿತರಿಸಿ ಗೌರವಿಸಿದರು.

ಕೊರೊನಾ ಬಗ್ಗೆ ಜಾಗೃತಿ ಏರ್ ಕಮಾಂಡರ್ ಆರ್.ರವಿಶಂಕರ್ ಮಾತನಾಡಿ, ಕೊರೊನಾದಂಥ ಸಂಕಷ್ಟದ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಯಾವ ರೀತಿ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕರ್ತವ್ಯದ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿಹೇಳಿದರು. ಜತೆಗೆ ಕೊರೊನಾ ಬರುವ ಮೊದಲಿನ ಸಂದರ್ಭ ಮತ್ತು ಈಗ ಭಾರತೀಯ ವಾಯುಸೇನೆಯಲ್ಲಿ ಹೇಗೆಲ್ಲಾ ಬದಲಾವಣೆಯಾಗಿದೆ, ಯಾವ ರೀತಿಯಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು.

ಪಾಸಿಂಗ್‌ ಪರೇಡ್‌ ವೀಕ್ಷಿಸಿದ ಕುಟುಂಬಸ್ಥರು ಇನ್ನು ಪಾಸಿಂಗ್ ಪರೇಡ್‌ ವೀಕ್ಷಿಸಲು ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಗಮಿಸಿ ಖುಷಿ ಪಟ್ಟರು. ಇನ್ನೊಂದು ವಾರದಲ್ಲಿ ಭಾರತ ಮಾತೆಯ ಸೇವೆಗೆ ಸೇರಲಿರುವ ಪ್ರಶಿಕ್ಷಣಾರ್ಥಿಗಳು ಅಚ್ಚುಕಟ್ಟಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಣೆ ಮಾಡುತ್ತೇವೆ. ಭಾರತಾಂಬೆ ರಕ್ಷಣೆಗೆ ತಮ್ಮ ಪ್ರಾಣವನ್ನೂ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. -ಸಹದೇವ ಮಾನೆ.