ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಶುರು: ಎಷ್ಟಿದೆ ಟೋಲ್ ದರ?

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಹೊಸಕೋಟೆ ಮತ್ತು ಕೋಲಾರ ನಡುವಿನ ಭಾಗದಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ. ಈ ಹೆದ್ದಾರಿಯ ಕಾಮಗಾರಿ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡು ಮಾರ್ಚ್​​ನಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ಇದೀಗ ಟೋಲ್ ಸಂಗ್ರಹ ಆರಂಭವಾಗಿದ್ದು, ಯಾವ ವಾಹನಕ್ಕೆ ಎಷ್ಟು ದರ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಶುರು: ಎಷ್ಟಿದೆ ಟೋಲ್ ದರ?
ಸಾಂದರ್ಭಿಕ ಚಿತ್ರ

Updated on: Sep 08, 2025 | 2:57 PM

ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇಯ (Bengaluru–Chennai Expressway) ಹೊಸಕೋಟೆ ಮತ್ತು ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಡುವಿನ 71 ಕಿಮೀ ಮಾರ್ಗವನ್ನು ಬಳಸಲು ಈಗ ಟೋಲ್ (Toll Collection) ಪಾವತಿಸಬೇಕಿದೆ. ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದೆ. ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಭಾಗದಲ್ಲಿ ಮಾರ್ಚ್‌ನಲ್ಲಿ ಲೋಕಾರ್ಪನೆಗೊಂಡಿದೆ. ಒಟ್ಟು 15,188 ಕೋಟಿ ರೂ. ವೆಚ್ಚದ 262 ಕಿ.ಮೀ ಉದ್ದದ ಈ ಈ ಎಕ್ಸ್​ಪ್ರೆಸ್​ ವೇಯ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರ ಮಾರ್ಚ್​​ನಿಂದಲೇ ಆಎಂಭವಾಗಿದೆ.

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇ ಟೋಲ್ ದರ ಎಷ್ಟು?

ಹೆಡಿಗೆನಬೆಲೆ (ಹೊಸಕೋಟೆ ಬಳಿ), ಸುಂದರಪಾಳ್ಯ (ಕೆಜಿಎಫ್ ಬಳಿ) ಏಕಮುಖ ಪ್ರಯಾಣಕ್ಕೆ 185 ರೂ. ಮತ್ತು ರೌಂಡ್ ಟ್ರಿಪ್​ಗೆ 275 ರೂ. ನಿಗದಿಯಾಗಿದೆ. ಸುಂದರಪಾಳ್ಯದಿಂದ ಹೆಡಿಗೆನಬೆಲೆಗೆ ಏಕಮುಖ ಪ್ರಯಾಣಕ್ಕೆ 190 ರೂ. ಮತ್ತು ರೌಂಡ್ ಟ್ರಿಪ್​ಗೆ 280 ರೂ. ಇದೆ.

ಲಘು ಸರಕು ವಾಹನಗಳು, ಮಿನಿ ಬಸ್‌ಗಳು, ಬಸ್‌ಗಳು ಮತ್ತು ಟ್ರಕ್‌ಗಳಂತಹ ಇತರ ವಾಹನಗಳು ಮಾರ್ಗ ಮತ್ತು ಟ್ರಿಪ್ ಸಂಖ್ಯೆಯನ್ನು ಅವಲಂಬಿಸಿ 295 ರಿಂದ 955 ರವರೆಗೆ ಹೆಚ್ಚಿನ ದರಗಳನ್ನು ಪಾವತಿಸಬೇಕಾಗುತ್ತದೆ .

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇಯ ಕರ್ನಾಟಕ ವಿಭಾಗದಲ್ಲಿ ನಾಲ್ಕು ಟೋಲ್ ಪ್ಲಾಜಾಗಳಿವೆ. ಹೆಡಿಗೆನಬೆಲೆ, ಅಗ್ರಹಾರ, ಕೃಷ್ಣರಾಜಪುರ, ಸುಂದರಪಾಳ್ಯಗಳಲ್ಲಿ ಟೋಲ್ ಪ್ಲಾಜಾಗಳಿವೆ.

ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ (3,000 ರೂ.) ಖರೀದಿಸಿದವರು ಪ್ರತಿ ಟ್ರಿಪ್‌ಗೆ ಪಾವತಿ ಮಾಡದೆ ಈ ಮಾರ್ಗವನ್ನು ಬಳಸಬಹುದು ಎಂದು ಹೆದ್ದಾರಿ ಪ್ರಾಧಿಕಾರ ದೃಢಪಡಿಸಿದೆ. ಆಗಾಗ್ಗೆ ಪ್ರಯಾಣಿಸುವವರಿಗೆ, ಕಾರುಗಳಿಗೆ ಮಾಸಿಕ ಪಾಸ್‌ಗಳ ಬೆಲೆ 6,105 ರೂ. (50 ಏಕಮುಖ ಪ್ರವಾಸಗಳು) ಅಥವಾ ರೌಂಡ್ ಟ್ರಿಪ್‌ಗಳಿಗೆ 6,260 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಲೋಕಾರ್ಪಣೆ ಯಾವಾಗ? ಗಡ್ಕರಿ ಕೊಟ್ಟರು ಮಹತ್ವದ ಮಾಹಿತಿ

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಆರು ಗಂಟೆಗಳಿಂದ 3 ಗಂಟೆಗಳಿಗೆ ಇಳಿಕೆ ಮಾಡಲಿದೆ. ಇದರಿಂದಾಗಿ ಎನ್​ಎಚ್-44 ಮತ್ತು ಎನ್​ಎಚ್-48 ರ ದಟ್ಟಣೆ ಕಡಿಮೆಯಾಗಲಿದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗುವುದರಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾಮಗಾರಿ ಮುಂದುವರೆದಿದ್ದು, ಪೂರ್ಣ ಕಾರಿಡಾರ್ 2026 ರ ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ