HD Kumaraswamy: ಮೂರು ವರ್ಷದಿಂದ ದೇಣಿಗೆ ನೆಪದಲ್ಲಿ ದೋಚಿದ್ದು ಸಾಲೋದಿಲ್ವ – ಬಿಜೆಪಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

| Updated By: ಆಯೇಷಾ ಬಾನು

Updated on: Feb 01, 2022 | 11:41 AM

ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ಪಕ್ಷ ಸಂಘಟನೆ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡ್ತಿದ್ದಾರೆ. ಶೇಕಡಾ 40ರಷ್ಟು ಕಮಿಷನ್ ಪಡೆಯುತ್ತಿರೋದು ಇನ್ನೂ ಸಾಕಾಗ್ತಿಲ್ವ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ಪಕ್ಷ ಸಂಘಟನೆ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡ್ತಿದ್ದಾರೆ. ಶೇಕಡಾ 40ರಷ್ಟು ಕಮಿಷನ್ ಪಡೆಯುತ್ತಿರೋದು ಇನ್ನೂ ಸಾಕಾಗ್ತಿಲ್ವ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿಯಿಂದ ಇಷ್ಟು ವರ್ಷ ಹಣ ಹೊಡೆದಿರುವುದು ಸಾಲುವುದಿಲ್ಲ. ಮೂರು ವರ್ಷಗಳಿಂದ ಲೂಟಿ ಹೊಡೆದಿದ್ದಾರೆ. 40% ಅಂತ ಗುತ್ತಿಗೆದಾರರೆ ಪ್ರಧಾನಿಗೆ ದೂರು ಕೊಟ್ಟಿದ್ದಾರೆ. ಬಿಜೆಪಿಯವರು ಉಪಚುನಾವಣೆಯನ್ನ ಹೇಗೆ ಮಾಡಿದ್ರು ಅಂತ ಜನರಿಗೆ ಗೊತ್ತಿದೆ. ಅವರು ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆ ನಡೆಸಿದ್ರಾ? ದೇಣಿಗೆ ಸಂಗ್ರಹ ಎಂಬುದು ಬಿಜೆಪಿಯವರ ಹೊಸ ನಾಟಕ ಎಂದು ಮಂಡ್ಯದ ಕೌಡ್ಲೆಯಲ್ಲಿ ಮಾಜಿ‌ ಸಿಎಂ ಕುಮಾರಸ್ವಾಮಿ ವ್ಯಂಗವಾಡಿದ್ದಾರೆ.

Published On - 11:40 am, Tue, 1 February 22

Follow us on