‘JDS ಅಭ್ಯರ್ಥಿ ಅಂಬಾರಿ ಆನೆ ತರಹ, ದಸರಾ ಮುಗಿದ ಮೇಲೆ ಕಾಡಿಗೆ ಬಿಟ್ಟುಬಿಡ್ತಾರೆ’

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ ಎಂದು ಯಶವಂತಪುರ ಕ್ಷೇತ್ರದ ಕಗ್ಗಲಿಪುರದಲ್ಲಿ ಅನರ್ಹ ಶಾಸಕ ಮುನಿರತ್ನ ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆಗೆ ಹೋಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ, ವರ್ಷಕ್ಕೊಮ್ಮೆ ದಸರಾ ಅಂಬಾರಿ ಆನೆ ಹೇಗೆ ಬರುತ್ತೋ ಹಾಗೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಅಭ್ಯರ್ಥಿ ಬರುತ್ತಾರೆ. ಜವರಾಯಿಗೌಡ ಅವರನ್ನು ಐದು ವರ್ಷಕ್ಕೊಮ್ಮೆ ಕರೆದುಕೊಂಡು ಬರ್ತಾರೆ. ಚಿಹ್ನೆ ಕೊಡೋದು, ರೌಂಡ್ ಹೊಡೆಸೋದು, ಮತ್ತೆ ಕಾಡಿಗೆ‌ ಬಿಡೋದು ಮಾಡ್ತಾರೆ. […]

‘JDS ಅಭ್ಯರ್ಥಿ ಅಂಬಾರಿ ಆನೆ ತರಹ, ದಸರಾ ಮುಗಿದ ಮೇಲೆ ಕಾಡಿಗೆ ಬಿಟ್ಟುಬಿಡ್ತಾರೆ
ಸಾಧು ಶ್ರೀನಾಥ್​

Updated on: Nov 22, 2019 | 2:09 PM

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ ಎಂದು ಯಶವಂತಪುರ ಕ್ಷೇತ್ರದ ಕಗ್ಗಲಿಪುರದಲ್ಲಿ ಅನರ್ಹ ಶಾಸಕ ಮುನಿರತ್ನ ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆಗೆ ಹೋಲಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ, ವರ್ಷಕ್ಕೊಮ್ಮೆ ದಸರಾ ಅಂಬಾರಿ ಆನೆ ಹೇಗೆ ಬರುತ್ತೋ ಹಾಗೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಅಭ್ಯರ್ಥಿ ಬರುತ್ತಾರೆ. ಜವರಾಯಿಗೌಡ ಅವರನ್ನು ಐದು ವರ್ಷಕ್ಕೊಮ್ಮೆ ಕರೆದುಕೊಂಡು ಬರ್ತಾರೆ. ಚಿಹ್ನೆ ಕೊಡೋದು, ರೌಂಡ್ ಹೊಡೆಸೋದು, ಮತ್ತೆ ಕಾಡಿಗೆ‌ ಬಿಡೋದು ಮಾಡ್ತಾರೆ.

ಸೋಮಶೇಖರ್ 5 ವರ್ಷದಲ್ಲಿ 25 ವರ್ಷದಷ್ಟು ಕೆಲ್ಸ:
ಮೆರವಣಿಗೆ ಮಾಡಿದವರಿಗೆಲ್ಲಾ ಜನ ಮತ ಹಾಕಲ್ಲ. ಆದರೆ ಎಸ್.ಟಿ.‌ ಸೋಮಶೇಖರ್ 5 ವರ್ಷದಲ್ಲಿ 25 ವರ್ಷಗಳಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆ, ಶಾಸಕರೂ ಆಗಿ ಸಚಿವರಾಗುತ್ತಾರೆ ಎಂದು ಹೇಳಿದರು.

Published On - 1:26 pm, Fri, 22 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us