ಸಿಲಿಕಾನ್ ಸಿಟಿ ಕಸದ ಸಮಸ್ಯೆ ಅಂತ್ಯಕ್ಕೆ ಮೋದಿ ಟೀಂ ಎಂಟ್ರಿ!

ಬೆಂಗಳೂರು: ಕಸದ ಸಮಸ್ಯೆಕ್ಕೆ ಅಂತ್ಯ ಹಾಡಲು ನಗರಕ್ಕೆ ಇದೀಗ ನರೇಂದ್ರ ಮೋದಿ ಟೀಮ್ ಎಂಟ್ರಿಯಾಗಿದೆ. ಕೋಟಿ‌ ಕೋಟಿ ಖರ್ಚು ಮಾಡಿದ್ರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಟೀಂ ಬಿಬಿಎಂಪಿಗೆ ಸಾಥ್ ನೀಡಲಿದೆ. ವಾರಸಿ ಬ್ರದರ್ಸ್​ಗೆ ಬೆಂಗಳೂರಿನ ಹೊಣೆ:  ಬೆಂಗಳೂರನ್ನ ಕಸ ಮುಕ್ತ ಮಾಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ತಂಡದ 43 ಸದಸ್ಯರು ಆಗಮಿಸಿದ್ದು, ಈಗಾಗಲೇ ಹಲವು ರೂಪರೇಷೆಗಳನ್ನ ಸಿದ್ಧಪಡಿಸಿದ್ದಾರೆ. ಈ ಪೈಕಿ ಸಹೋದರರಾದ ಅಸದ್ ವಾರಸಿ ಮತ್ತು ಜಾವೇದ್ ವಾರಸಿಗೆ […]

ಸಿಲಿಕಾನ್ ಸಿಟಿ ಕಸದ ಸಮಸ್ಯೆ ಅಂತ್ಯಕ್ಕೆ ಮೋದಿ ಟೀಂ ಎಂಟ್ರಿ!
ಸಾಧು ಶ್ರೀನಾಥ್​

Updated on: Nov 29, 2019 | 10:42 AM

ಬೆಂಗಳೂರು: ಕಸದ ಸಮಸ್ಯೆಕ್ಕೆ ಅಂತ್ಯ ಹಾಡಲು ನಗರಕ್ಕೆ ಇದೀಗ ನರೇಂದ್ರ ಮೋದಿ ಟೀಮ್ ಎಂಟ್ರಿಯಾಗಿದೆ. ಕೋಟಿ‌ ಕೋಟಿ ಖರ್ಚು ಮಾಡಿದ್ರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಟೀಂ ಬಿಬಿಎಂಪಿಗೆ ಸಾಥ್ ನೀಡಲಿದೆ.

ವಾರಸಿ ಬ್ರದರ್ಸ್​ಗೆ ಬೆಂಗಳೂರಿನ ಹೊಣೆ: 
ಬೆಂಗಳೂರನ್ನ ಕಸ ಮುಕ್ತ ಮಾಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ತಂಡದ 43 ಸದಸ್ಯರು ಆಗಮಿಸಿದ್ದು, ಈಗಾಗಲೇ ಹಲವು ರೂಪರೇಷೆಗಳನ್ನ ಸಿದ್ಧಪಡಿಸಿದ್ದಾರೆ. ಈ ಪೈಕಿ ಸಹೋದರರಾದ ಅಸದ್ ವಾರಸಿ ಮತ್ತು ಜಾವೇದ್ ವಾರಸಿಗೆ ಬೆಂಗಳೂರಿನ ಹೊಣೆ ನೀಡಲಾಗಿದೆ.

ಈ ವಾರಸಿ ಬ್ರದರ್ಸ್ ಕನ್ಸಲ್ಟನ್ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದೋರ್ ನಗರಗಳನ್ನ ಕಸ ಮುಕ್ತ ಮಾಡಿ, ಮಾದರಿ‌ ನಗರ ಮಾಡಿರುವ ಹೆಗ್ಗಳಿಕೆ ವಾರಸಿ ಬ್ರದರ್ಸ್​ಗಿದೆ. ಇಂದೋರ್ ಕಸದ ಸಮಸ್ಯೆಯಿಂದ ನರಳಾಡುತ್ತಿದ್ದಾಗ, ಕೇಂದ್ರ ಸರ್ಕಾರ ವಾರಸಿ ಬ್ರದರ್ಸ್​ ಅನ್ನು ನಿಯೋಜನೆಗೊಳಿಸಿತ್ತು.

ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್:
ಇದೀಗ ಬೆಂಗಳೂರಿನಲ್ಲಿ ಆಪರೇಷನ್ ಗಾರ್ಬೆಜ್ ಶುರುಮಾಡಲಿರುವ ವಾರಸಿ ಬ್ರದರ್ಸ್‌, 8 ತಿಂಗಳಲ್ಲಿ ‌ಬೆಂಗಳೂರನ್ನ ಕಸ ಮುಕ್ತಮಾಡುವ ಗುರಿ ಹೊಂದಿದ್ದಾರೆ. ಈಗಾಗಲೇ ಬೆಂಗಳೂರಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿರುವ ವಾರಸಿ ಟೀಮ್, ಜನವರಿ ತಿಂಗಳಲ್ಲಿ ಅಧಿಕೃತವಾಗಿ ಕೆಲಸ ಪ್ರಾರಂಭಿಸುವ ಸಾಧ್ಯತೆಯಿದೆ.

Published On - 7:37 am, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us