ಅನಗತ್ಯ ವೆಚ್ಚಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಬ್ರೇಕ್​!

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದವು. ಆದ್ರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯಕ್ಕೆ ಬಿಡಿಗಾಸು ನೆರೆ ಪರಿಹಾರ ನೀಡಿಲ್ಲ. ಆದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಆದಷ್ಟು ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸದಿರಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಕುರಿತು ಸಚಿವರಿಗೂ ಅನಗತ್ಯ ವೆಚ್ಚ ಮಾಡದಂತೆ ಸಿಎಂ ಬಿಎಸ್​ವೈ ಸೂಚಿಸಿದ್ದಾರೆ. ಹೆಲಿಕಾಪ್ಟರ್ ಹಾಗೂ ವಿಮಾನ ಬಳಸುವ ಬದಲು ಆದಷ್ಟು ರಸ್ತೆ ಪ್ರಯಾಣ ಮಾಡಲು ಬಿಎಸ್​ವೈ ಮುಂದಾಗಿದ್ದು, […]

ಅನಗತ್ಯ ವೆಚ್ಚಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಬ್ರೇಕ್​!
Former Chief Minister B S Yeddyurappa arrives for inauguration of drinking water project at Honnudike in Tumkur district on Thursday. –KPN

Updated on: Sep 27, 2019 | 1:56 PM

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದವು. ಆದ್ರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯಕ್ಕೆ ಬಿಡಿಗಾಸು ನೆರೆ ಪರಿಹಾರ ನೀಡಿಲ್ಲ. ಆದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಆದಷ್ಟು ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸದಿರಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಕುರಿತು ಸಚಿವರಿಗೂ ಅನಗತ್ಯ ವೆಚ್ಚ ಮಾಡದಂತೆ ಸಿಎಂ ಬಿಎಸ್​ವೈ ಸೂಚಿಸಿದ್ದಾರೆ. ಹೆಲಿಕಾಪ್ಟರ್ ಹಾಗೂ ವಿಮಾನ ಬಳಸುವ ಬದಲು ಆದಷ್ಟು ರಸ್ತೆ ಪ್ರಯಾಣ ಮಾಡಲು ಬಿಎಸ್​ವೈ ಮುಂದಾಗಿದ್ದು, ದೂರದ ಪ್ರಯಾಣಕ್ಕೆ ಮಾತ್ರ ವಿಮಾನ ಬಳಕೆಗೆ ಸಿಎಂ ಬಿಎಸ್​ವೈ ನಿರ್ಧರಿಸಿದ್ದಾರೆ.

Published On - 12:45 pm, Fri, 27 September 19