ಸಾಮಾಜಿಕ ಅಂತರ ಕಾಪಾಡಲು ಬಂದಿದೆ Mobile Diesel Bunk

ಲಾಕ್ಡೌನ್ ಎಫಕ್ಟ್ ನಿಂದ ಸಾಮಾಜಿಕ ಅಂತರ ಪಾಲಿಸುವುದು ಎಲ್ಲರ ಆದ್ಯತೆಯಾಗಿದೆ. ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ಜನರು ಒಟ್ಟಿಗೆ ಸೇರುವುದೇ ನಿಷಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವಾಗಲೂ ರಷ್ ಆಗಿರುವ ಪೆಟ್ರೋಲ್ ಬಂಕ್ ಗಳಲ್ಲಿನ ಪರಿಸ್ಥಿತಿ ಹೇಗೆ? ಇದಕ್ಕಾಗಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆ ತಂದಿದ್ದು, ಅದು ಲಾಕ್ಡೌನ್ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿದೆ. ಮೊಬೈಲ್ ಡೀಸೆಲ್ ಬಂಕರ್ ನಿಂದ ಸಾಮಾಜಿಕ ಅಂತರಕ್ಕೆ ಒತ್ತು..! ಲಾಕ್ ಡೌನ್ ನಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹಾಗಾಗಿ ಕರಾವಳಿಯ ಪೆಟ್ರೋಲ್ […]

ಸಾಮಾಜಿಕ ಅಂತರ ಕಾಪಾಡಲು ಬಂದಿದೆ Mobile Diesel Bunk
ಸಾಧು ಶ್ರೀನಾಥ್​

Updated on: May 22, 2020 | 6:21 PM

ಲಾಕ್ಡೌನ್ ಎಫಕ್ಟ್ ನಿಂದ ಸಾಮಾಜಿಕ ಅಂತರ ಪಾಲಿಸುವುದು ಎಲ್ಲರ ಆದ್ಯತೆಯಾಗಿದೆ. ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ಜನರು ಒಟ್ಟಿಗೆ ಸೇರುವುದೇ ನಿಷಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವಾಗಲೂ ರಷ್ ಆಗಿರುವ ಪೆಟ್ರೋಲ್ ಬಂಕ್ ಗಳಲ್ಲಿನ ಪರಿಸ್ಥಿತಿ ಹೇಗೆ? ಇದಕ್ಕಾಗಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆ ತಂದಿದ್ದು, ಅದು ಲಾಕ್ಡೌನ್ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿದೆ.

ಮೊಬೈಲ್ ಡೀಸೆಲ್ ಬಂಕರ್ ನಿಂದ ಸಾಮಾಜಿಕ ಅಂತರಕ್ಕೆ ಒತ್ತು..!
ಲಾಕ್ ಡೌನ್ ನಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹಾಗಾಗಿ ಕರಾವಳಿಯ ಪೆಟ್ರೋಲ್ ಬಂಕ್ ಗಳಲ್ಲಿ ರಷ್ ಕಡಿಮೆ ಮಾಡಲಾಗುತ್ತಿದೆ. ಮಂಗಳೂರು ಹೊರವಲಯದ ಕೋಟೆಕಾರು ಎಂಬಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಮಾಲೀಕ ಅಣ್ಣಪ್ಪ ನಾಯಕ್ ಅವರು ಮೊಬೈಲ್ ಬಂಕರ್ ಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಿಪಿಸಿಎಲ್ ಗೆ ಅರ್ಜಿ ಹಾಕಿದ್ರು.

ಭಾರತ ಸರ್ಕಾರದ ಈ ಯೋಜನೆಯ ಪ್ರಕಾರ ಮೊಬೈಲ್ ಬಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಡಿಸೇಲ್ ಬೇಕಾದವರಿಗೆ ಡೋರ್ ಡೆಲಿವರಿಯನ್ನು ಅದೇ ದರದಲ್ಲಿ ನೀಡುವುದಾಗಿದೆ. ಕಳೆದ ತಿಂಗಳು ಇದಕ್ಕೆ ಸ್ಯಾಂಕ್ಷನ್ ಸಿಕ್ಕಿದೆ. ಲಾಕ್ ಡೌನ್ ಸಂದರ್ಭಕ್ಕೆ ಇದು ಹೇಳಿ ಮಾಡಿಸಿದಂತಿದ್ದು, ಸದ್ಬಳಕೆಯಾಗುತ್ತಿದೆ. ಮಂಗಳೂರಿನಲ್ಲಿ ಹಲವು ಆಸ್ಪತ್ರೆಗಳಿವೆ. ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಿವೆ. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿವೆ. ಇಲ್ಲೆಲ್ಲಾ ಅತೀ ಹೆಚ್ಚು ಡಿಸೆಲ್ ಬಳಸಲಾಗುತ್ತೆ.

ಮೊಬೈಲ್ ಬಂಕ್ ವಾಹನದಲ್ಲಿ ಹಲವಾರು ವಿಶೇಷಗಳಿವೆ. ಬಂಕ್ ನಲ್ಲಿ ಇರುವಂತಹ ಮಷಿನ್ ಈ ವಾಹನದಲ್ಲಿಯೂ ಇದೆ. ಬಂಕ್ ನಲ್ಲಿ ಇರುವ ದರವೇ ಮೊಬೈಲ್ ಬಂಕರ್ ನಲ್ಲೂ ಕೂಡ ಇದ್ದು ಎಕ್ಸ್ಟ್ರಾ ತೆಗೆದುಕೊಳ್ಳುವುದಿಲ್ಲ. ಸದ್ಯ ದೊಡ್ಡ ಮಟ್ಟದಲ್ಲಿ ಡಿಸೆಲ್ ಅವಶ್ಯಕತೆ ಇದ್ದವರು ಆಪ್ ಮೂಲಕ ಬುಕ್ ಮಾಡಿ ಡಿಸೆಲ್ ನ್ನು ತಮ್ಮ ಮನೆ ಬಳಿಗೆ ತರಿಸಿಕೊಳ್ಳುತ್ತಿದ್ದಾರೆ. ಈ ಮೊಬೈಲ್ ಬಂಕರ್ ಗೆ ಜನರಿಂದ ಕೂಡ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಕೇಂದ್ರ ಸರ್ಕಾರದ ಈ ಒಂದು ಯೋಜನೆ ಲಾಕ್ ಡೌನ್ ವೇಳೆ ಸೋಶಿಯಲ್ ಡಿಸ್ಟೆನ್ಸ್ ಕಾಪಾಡಲು ನೆರವಾಗಿದೆ ಎನ್ನುತ್ತಾರೆ ಬಂಕ್ ಮಾಲೀಕ ಅಣ್ಣಪ್ಪ ನಾಯಕ್.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us