AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ. ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. […]

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ
ಸಾಧು ಶ್ರೀನಾಥ್​
|

Updated on:Dec 16, 2019 | 11:40 AM

Share

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ.

ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ವರ್ತಕ ಸೈಯದ್ ಮುದಾಸೀರ್​ಗೆ ದೂರವಾಣಿ ಕರೆ ಮಾಡಿದ್ದಾರಂತೆ.

ನಮ್ಮ ಬಳಿ ಲೋಡ್​ಗಟ್ಟಲೇ ಈರುಳ್ಳಿ ಸ್ಟಾಕ್ ಇದೆ. ಕಡಿಮೆ ರೇಟ್​​ಗೆ ಕೊಡ್ತೀವಿ ಅಡ್ವಾನ್ಸ್ ಹಣ ಖಾತೆಗೆ ಜಮೆ ಮಾಡಿ ಅಂತ ಪುಂಗಿದ್ದಾರೆ. ಇದನ್ನೇ ನಂಬಿದ ಸೈಯದ್ ಮದಾಸೀರ್ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಖಾತೆಗೆ 3 ಲಕ್ಷದ 80 ಸಾವಿರ ರೂಪಾಯಿ ಜಮೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣವೂ ಇಲ್ಲ, ಈರುಳ್ಳಿಯೂ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ.

ಇನ್ನು, ಈರುಳ್ಳಿ ರೇಟ್ ಗಗನಕ್ಕೇರ್ತಿರೋದನ್ನೇ ಟಾರ್ಗೆಟ್ ಮಾಡ್ತಿರೋ ಖದೀಮರು ಆನ್​​ಲೈನ್ ವಂಚನೆಗಿಳಿದಿರೋದು ವರ್ತಕರ ನಿದ್ದೆಗೆಡಿಸಿದೆ. ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಭೀತಿ ಕೂಡ ವರ್ತಕರಿಗೆ ಎದುರಾಗಿದೆ.

ಒಟ್ನಲ್ಲಿ ಈರುಳ್ಳಿ ಬೆಲೆ ಏರಿದ್ದೇ ಏರಿದ್ದು, ಜನರು ಅಡುಗೆ ಮಾಡೋ ಹಾಗಿಲ್ಲ, ವರ್ತಕರು ವ್ಯಾಪಾರ ಮಾಡೋದು ಕಷ್ಟವಾಗ್ತಿದೆ. ಎಲ್ರೂ ಈರುಳ್ಳಿ ರೇಟ್ ಯಾವಾಗ ಇಳೀಯುತ್ತಪ್ಪಾ ಅನ್ನೋ ಹೊತ್ತಲ್ಲೇ ವಂಚನೆ ಜಾಲ ಹೆಜ್ಜೆ ಇಟ್ಟಿದೆ.

Published On - 11:39 am, Mon, 16 December 19

ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ