AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ. ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. […]

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ
ಸಾಧು ಶ್ರೀನಾಥ್​
|

Updated on:Dec 16, 2019 | 11:40 AM

Share

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ.

ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ವರ್ತಕ ಸೈಯದ್ ಮುದಾಸೀರ್​ಗೆ ದೂರವಾಣಿ ಕರೆ ಮಾಡಿದ್ದಾರಂತೆ.

ನಮ್ಮ ಬಳಿ ಲೋಡ್​ಗಟ್ಟಲೇ ಈರುಳ್ಳಿ ಸ್ಟಾಕ್ ಇದೆ. ಕಡಿಮೆ ರೇಟ್​​ಗೆ ಕೊಡ್ತೀವಿ ಅಡ್ವಾನ್ಸ್ ಹಣ ಖಾತೆಗೆ ಜಮೆ ಮಾಡಿ ಅಂತ ಪುಂಗಿದ್ದಾರೆ. ಇದನ್ನೇ ನಂಬಿದ ಸೈಯದ್ ಮದಾಸೀರ್ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಖಾತೆಗೆ 3 ಲಕ್ಷದ 80 ಸಾವಿರ ರೂಪಾಯಿ ಜಮೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣವೂ ಇಲ್ಲ, ಈರುಳ್ಳಿಯೂ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ.

ಇನ್ನು, ಈರುಳ್ಳಿ ರೇಟ್ ಗಗನಕ್ಕೇರ್ತಿರೋದನ್ನೇ ಟಾರ್ಗೆಟ್ ಮಾಡ್ತಿರೋ ಖದೀಮರು ಆನ್​​ಲೈನ್ ವಂಚನೆಗಿಳಿದಿರೋದು ವರ್ತಕರ ನಿದ್ದೆಗೆಡಿಸಿದೆ. ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಭೀತಿ ಕೂಡ ವರ್ತಕರಿಗೆ ಎದುರಾಗಿದೆ.

ಒಟ್ನಲ್ಲಿ ಈರುಳ್ಳಿ ಬೆಲೆ ಏರಿದ್ದೇ ಏರಿದ್ದು, ಜನರು ಅಡುಗೆ ಮಾಡೋ ಹಾಗಿಲ್ಲ, ವರ್ತಕರು ವ್ಯಾಪಾರ ಮಾಡೋದು ಕಷ್ಟವಾಗ್ತಿದೆ. ಎಲ್ರೂ ಈರುಳ್ಳಿ ರೇಟ್ ಯಾವಾಗ ಇಳೀಯುತ್ತಪ್ಪಾ ಅನ್ನೋ ಹೊತ್ತಲ್ಲೇ ವಂಚನೆ ಜಾಲ ಹೆಜ್ಜೆ ಇಟ್ಟಿದೆ.

Published On - 11:39 am, Mon, 16 December 19

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್