AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ. ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. […]

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ
Follow us
ಸಾಧು ಶ್ರೀನಾಥ್​
|

Updated on:Dec 16, 2019 | 11:40 AM

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ.

ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ವರ್ತಕ ಸೈಯದ್ ಮುದಾಸೀರ್​ಗೆ ದೂರವಾಣಿ ಕರೆ ಮಾಡಿದ್ದಾರಂತೆ.

ನಮ್ಮ ಬಳಿ ಲೋಡ್​ಗಟ್ಟಲೇ ಈರುಳ್ಳಿ ಸ್ಟಾಕ್ ಇದೆ. ಕಡಿಮೆ ರೇಟ್​​ಗೆ ಕೊಡ್ತೀವಿ ಅಡ್ವಾನ್ಸ್ ಹಣ ಖಾತೆಗೆ ಜಮೆ ಮಾಡಿ ಅಂತ ಪುಂಗಿದ್ದಾರೆ. ಇದನ್ನೇ ನಂಬಿದ ಸೈಯದ್ ಮದಾಸೀರ್ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಖಾತೆಗೆ 3 ಲಕ್ಷದ 80 ಸಾವಿರ ರೂಪಾಯಿ ಜಮೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣವೂ ಇಲ್ಲ, ಈರುಳ್ಳಿಯೂ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ.

ಇನ್ನು, ಈರುಳ್ಳಿ ರೇಟ್ ಗಗನಕ್ಕೇರ್ತಿರೋದನ್ನೇ ಟಾರ್ಗೆಟ್ ಮಾಡ್ತಿರೋ ಖದೀಮರು ಆನ್​​ಲೈನ್ ವಂಚನೆಗಿಳಿದಿರೋದು ವರ್ತಕರ ನಿದ್ದೆಗೆಡಿಸಿದೆ. ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಭೀತಿ ಕೂಡ ವರ್ತಕರಿಗೆ ಎದುರಾಗಿದೆ.

ಒಟ್ನಲ್ಲಿ ಈರುಳ್ಳಿ ಬೆಲೆ ಏರಿದ್ದೇ ಏರಿದ್ದು, ಜನರು ಅಡುಗೆ ಮಾಡೋ ಹಾಗಿಲ್ಲ, ವರ್ತಕರು ವ್ಯಾಪಾರ ಮಾಡೋದು ಕಷ್ಟವಾಗ್ತಿದೆ. ಎಲ್ರೂ ಈರುಳ್ಳಿ ರೇಟ್ ಯಾವಾಗ ಇಳೀಯುತ್ತಪ್ಪಾ ಅನ್ನೋ ಹೊತ್ತಲ್ಲೇ ವಂಚನೆ ಜಾಲ ಹೆಜ್ಜೆ ಇಟ್ಟಿದೆ.

Published On - 11:39 am, Mon, 16 December 19

ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ