ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್​: ಯುವಕನ ದ್ವಿಚಕ್ರ ವಾಹನ ​ವಶಕ್ಕೆ

Updated By: ಪ್ರಸನ್ನ ಹೆಗಡೆ

Updated on: Oct 31, 2025 | 12:16 PM

ರಸ್ತೆಯಲ್ಲಿ ಕಸೆ ಎಸೆದಿದ್ದ ಕಾರಣ ದಂಡ ಕಟ್ಟು ಎಂದು ನಗರಸಭೆ ಸಿಬ್ಬಂದಿ ಹೇಳಿದರೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಆವಾಜ್​ ಹಾಕಿದ ಯುವಕನ ಬೈಕ್​ನ ವಶಪಡಿಸಿಕೊಳ್ಳಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ನಗರದ ಕಂದವಾರ ರಸ್ತೆಯಲ್ಲಿ ಈ ಪ್ರಸಂಗ ನಡೆದಿದೆ.

ಚಿಕ್ಕಬಳ್ಳಾಪುರ, ಅಕ್ಟೋಬರ್​ 31: ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ಕಸದ ರಾಶಿ ಸುರಿಯಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ರಸ್ತೆಗೆ ತಂದು ಕಸ (Garbage )ಸುರಿದ ಯುವಕನ ಬೈಕ್ ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ದಂಡ ಕಟ್ಟದ ಯುವಕನ ಬೈಕ್​ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರ ರಸ್ತೆಯಲ್ಲಿ ನಡೆದಿದೆ. ಬೈಕ್​ನಲ್ಲಿ ಕಸದ ಕವರ್ ತಂದು ರಸ್ತೆಗೆ ಯುವಕ ಸುರಿಯುತ್ತಿದ್ದ ವೇಳೆ ಆ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಕಸ ಹಾಕಿದ್ದಕ್ಕೆ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಯುವಕನ ಆವಾಜ್ ಹಾಕಿದ್ದಾನೆ. ಹೀಗಾಗಿ ಆತನ ಬೈಕ್ ಸೀಜ್​ ಮಾಡಿ ಪಾಠ ಕಲಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

 

Published on: Oct 31, 2025 12:10 PM