2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನು ಹೊರ ಹಾಕಿದ ಪಾಪಿ ಪತಿ

ಬೆಳಗಾವಿ: 2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನ ಪಾಪಿ ತಂದೆ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ ಎಂಬಾತ 2ನೇ ಹೆಂಡತಿಗಾಗಿ ತನ್ನ ಮೊದಲ ಹೆಂಡತಿ ಸಮೀನಾ ಕೊಲ್ಲಾಪುರೆ ಹಾಗೂ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ. ಕಳೆದ ರಾತ್ರಿಯಿಂದಲೂ ತಾಯಿ ಮಕ್ಕಳು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಗಂಡನ ಮನೆ ಬಿಟ್ಟು ಬೇರೆ ಎಲ್ಲಿ ಹೋಗಲಿ ಎಂದು ದಿಕ್ಕು ತೋಚದೆ ಮನೆ ಬಾಗಿಲಲ್ಲೆ ಮೊದಲನೇ […]

2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನು ಹೊರ ಹಾಕಿದ ಪಾಪಿ ಪತಿ
ಸಾಧು ಶ್ರೀನಾಥ್​

Updated on: Dec 11, 2019 | 11:43 AM

ಬೆಳಗಾವಿ: 2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನ ಪಾಪಿ ತಂದೆ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ ಎಂಬಾತ 2ನೇ ಹೆಂಡತಿಗಾಗಿ ತನ್ನ ಮೊದಲ ಹೆಂಡತಿ ಸಮೀನಾ ಕೊಲ್ಲಾಪುರೆ ಹಾಗೂ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ.

ಕಳೆದ ರಾತ್ರಿಯಿಂದಲೂ ತಾಯಿ ಮಕ್ಕಳು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಗಂಡನ ಮನೆ ಬಿಟ್ಟು ಬೇರೆ ಎಲ್ಲಿ ಹೋಗಲಿ ಎಂದು ದಿಕ್ಕು ತೋಚದೆ ಮನೆ ಬಾಗಿಲಲ್ಲೆ ಮೊದಲನೇ ಹೆಂಡತಿ ಕಾಯುತ್ತಿದ್ದಾಳೆ. ಪೊಲೀಸರು ಬಂದು ಬಾಗಿಲು ತೆರೆ ಎಂದರು ಪಾಪಿ ಪತಿ ಬಾಗಿಲು ತೆರೆಯುತ್ತಿಲ್ಲ. ಅಲ್ಲದೆ ಗಂಡನ ವಿರುದ್ಧ ದೂರು ನೀಡಿದರು ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us