Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’

ಸಿದ್ದು ಸವದಿ ಚಾಂದಿನಿಯನ್ನು ರಕ್ಷಣೆ ಮಾಡಲು ಹೋಗಿದ್ದೆ ಅಂತಾರೆ. ಆದರೆ, ಆಕೆಗೆ ಮುಟ್ಟಬಾರದ ಜಾಗದಲ್ಲೂ ಕಿರುಕುಳ ನೀಡಿದ್ದಾರೆ. ಇವತ್ತು, ಆ ಮಾನಸಿಕ ಹಾಗೂ ದೈಹಿಕ ಹಿಂಸೆಯ ಪರಿಣಾಮವಾಗಿ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ಉಮಾಶ್ರೀ ಕಿಡಿಕಾರಿದರು.

‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’
ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ (ಎಡ); ಉಮಾಶ್ರೀ (ಬಲ)
Follow us
KUSHAL V
|

Updated on: Nov 30, 2020 | 7:05 PM

ಬೆಂಗಳೂರು: ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವರು ಇಂದು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಶಾಸಕ ಸಿದ್ದು ಸವದಿ ಇತರ ಪುರುಷರ ಜೊತೆ ಸೇರಿ ಮಾಡಿದ ಕೃತ್ಯ ಅಕ್ಷರಶಃ ದೌರ್ಜನ್ಯ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉಮಾಶ್ರೀ ನಾವು ಯಾವ ರಾಜ್ಯದಲ್ಲಿ ಇದ್ದೀವಿ? ಮಹಿಳೆಯನ್ನ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿರುವ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು ಅಪರಾಧ. ಸಿದ್ದು ಸವದಿ ಚಾಂದಿನಿಯನ್ನು ರಕ್ಷಣೆ ಮಾಡಲು ಹೋಗಿದ್ದೆ ಅಂತಾರೆ. ಆದರೆ, ಆಕೆಗೆ ಮುಟ್ಟಬಾರದ ಜಾಗದಲ್ಲೂ ಕಿರುಕುಳ ನೀಡಿದ್ದಾರೆ. ಇವತ್ತು, ಆ ಮಾನಸಿಕ ಹಾಗೂ ದೈಹಿಕ ಹಿಂಸೆಯ ಪರಿಣಾಮವಾಗಿ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ಉಮಾಶ್ರೀ ಕಿಡಿಕಾರಿದರು.

ಗರ್ಭಪಾತ ಆಗಿರೋದು ಕೊಲೆಗೆ ಸಮಾನ. ಆದರೆ, ಸರ್ಕಾರ ಮಾತ್ರ ಏನೂ ಮಾಡ್ತಿಲ್ಲ. ಸಿಎಂಗೆ ಕಿವಿ ಇಲ್ಲ, ಕಣ್ಣೂ ಇಲ್ಲ, ಬಾಯಿಯೂ ಇಲ್ಲ ಎಂಬುವಂತೆ ಇದ್ದಾರೆ. ಸರ್ಕಾರ ಅಪರಾಧಿಗಳನ್ನ ರಕ್ಷಣೆ ಮಾಡ್ತಾ ಇದೆ. ಸಿದ್ದು ಸವದಿಯನ್ನು ಬಿಜೆಪಿ ಪಕ್ಷದಿಂದ ಹೊರಗಿಡಬೇಕು. ಇಂತಹ ನೀಚ ಶಾಸಕರನ್ನ ಸರ್ಕಾರದಿಂದ ಹೊರಗಿಡಬೇಕು ಎಂದು ಉಮಾಶ್ರೀ ಹೇಳಿದರು.

ಜೊತೆಗೆ, ಮಹಿಳಾ ಅಭಿವೃದ್ದಿ ಮಂತ್ರಿಗಳು ಏನು ಮಾಡ್ತಾ ಇದ್ದಾರೆ? ಅವರು ಪ್ರಕರಣ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಅವರೇನು ಮಾಡ್ತಾ ಇದ್ದಾರೆ ಎಂದು ಉಮಾಶ್ರೀ ಪ್ರಶ್ನಿಸಿದರು.

ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್​ಗೆ ಗರ್ಭಪಾತ

ಗರ್ಭಪಾತವೇ ಸುಳ್ಳು! ಆಕೆಗೆ 6 ವರ್ಷಗಳ ಹಿಂದೆಯೇ ‘ಆಪರೇಷನ್’ ಆಗಿದೆ -ಶಾಸಕ ಸಿದ್ದು ಸವದಿ

ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ