ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು

ಗದಗ: ಬೆಳಗ್ಗೆದ್ದು ಶಿಸ್ತಾಗಿ ರೆಡಿಯಾಗಿ ಆಫೀಸ್​ಗೆ ಹೋದ್ರೆ ಸಂಜೆ ಮನೆಗೆ ಬಂದು ಮತ್ತೆ ಕೆಲ್ಸ, ಊಟ ಅನ್ನೋದ್ರಲ್ಲೇ ದಿನ ಕಳ್ದೋಗ್ತಿತ್ತು. ಬಟ್ ಎಲ್ರೂ ಸೇರ್ಕೊಂಡು ತಮ್ಮ ಮಸ್ತಿಗೆ ಅಂತ್ಲೇ ಟೈಂ ಮಾಡ್ಕೊಂಡು ಪ್ರೋಗ್ರಾಂ ಫಿಕ್ಸ್ ಮಾಡಿದ್ರು. ಅಷ್ಟೇ. ಅವ್ರ ಖುಷಿ ಯಾಕೆ ಕೇಳ್ತೀರಾ. ಹಗ್ಗಜಗ್ಗಾಟದಾಟ: ಇನ್ನೂ ಎಳೀ ಐಸಾ. ಜೋರಾಗ್ ಎಳೀ ಐಸಾ ಅಂತಾ ಹಗ್ಗಜಗ್ಗಾಟ.. ನದಿ ದಡ ಅಂತಾ ಜಂಪಿಂಗ್ ಆಟ.. ಕೈ ಕೈ ಹಿಡಿದು ಹಸು, ಹುಲಿ ಓಟ.. ಗುರಿ ಇಟ್ಟು ಹೊಡೆಯೋ ಚಿನ್ನಿದಾಂಡು […]

ಪರಸ್ಪರ ಕೈ ಕೈ ಹಿಡಿದು ಹಸು, ಹುಲಿ ಓಟ, ಗದಗ್​ನಲ್ಲಿ ದೇಸೀ ಕ್ರೀಡೆ ಗಮ್ಮತ್ತು
ಸಾಧು ಶ್ರೀನಾಥ್​

Updated on: Jan 20, 2020 | 2:12 PM

ಗದಗ: ಬೆಳಗ್ಗೆದ್ದು ಶಿಸ್ತಾಗಿ ರೆಡಿಯಾಗಿ ಆಫೀಸ್​ಗೆ ಹೋದ್ರೆ ಸಂಜೆ ಮನೆಗೆ ಬಂದು ಮತ್ತೆ ಕೆಲ್ಸ, ಊಟ ಅನ್ನೋದ್ರಲ್ಲೇ ದಿನ ಕಳ್ದೋಗ್ತಿತ್ತು. ಬಟ್ ಎಲ್ರೂ ಸೇರ್ಕೊಂಡು ತಮ್ಮ ಮಸ್ತಿಗೆ ಅಂತ್ಲೇ ಟೈಂ ಮಾಡ್ಕೊಂಡು ಪ್ರೋಗ್ರಾಂ ಫಿಕ್ಸ್ ಮಾಡಿದ್ರು. ಅಷ್ಟೇ. ಅವ್ರ ಖುಷಿ ಯಾಕೆ ಕೇಳ್ತೀರಾ.

ಹಗ್ಗಜಗ್ಗಾಟದಾಟ:
ಇನ್ನೂ ಎಳೀ ಐಸಾ. ಜೋರಾಗ್ ಎಳೀ ಐಸಾ ಅಂತಾ ಹಗ್ಗಜಗ್ಗಾಟ.. ನದಿ ದಡ ಅಂತಾ ಜಂಪಿಂಗ್ ಆಟ.. ಕೈ ಕೈ ಹಿಡಿದು ಹಸು, ಹುಲಿ ಓಟ.. ಗುರಿ ಇಟ್ಟು ಹೊಡೆಯೋ ಚಿನ್ನಿದಾಂಡು ಸಾಹಸ.. ಅಬ್ಬಬ್ಬಾ.. ಇವ್ರ ಸ್ಪೋರ್ಟ್ಸ್ ಕ್ರೇಜ್ ಏನು.. ಕುಣಿದು ಕುಪ್ಪಳಿಸೋದೇನು.

ಹೊಡಿ ಒಂಬತ್ ಅಂತಾ ಬಿಂದಾಸ್ ಆಗಿ ಮಸ್ತಿ ಏನೋ ಮಾಡಿದ್ರು.. ಇಷ್ಟೆಲ್ಲಾ ಆಟ ಆಡಿದ್ರು ಅಂದ್ರೆ ಹೊಟ್ಟೆ ಚುರ್ ಅನ್ದೇ ಇರುತ್ತಾ.. ಸೋ ಅಂಥವ್ರಿಗಾಗೇ ರೆಡಿಯಾಗಿತ್ತು ನೋಡಿ ವೆರೈಟಿ ವೆರೈಟಿ ಖಾದ್ಯ.. ಹೋಳಿಗೆ, ಪಾಯ್ಸ, ಸ್ವೀಟ್, ಪಲ್ಯ, ಖಡಕ್ ರೊಟ್ಟಿ.. ಅಬ್ಬಬ್ಬಾ.. ಒಂದಾ ಎರಡಾ.. ಪ್ಲೇಟ್​ಗೆ ಹಾಕಿಸ್ಕೊಂಡು ಕುಂತ್ರು ಅಂದ್ರೆ ಭರ್ಜರಿ ಬ್ಯಾಟಿಂಗ್ ಮಾಡೋದೇ.

ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಟಿ ಮಂದಿಗೆ ಹಳ್ಳಿ ಸೊಗಡನ್ನು ಪರಿಚಯಿಸ್ಬೇಕು ಅಂತಾ ದೇಸೀ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಯುವಕ, ಯುವತಿಯರು, ಮಹಿಳೆಯರು, ಪುರುಷರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಸಾಂಪ್ರದಾಯಿಕ ಕ್ರೀಡೆಗಳನ್ನ ಆಡಿಸಿ ಹಳ್ಳಿ ಆಟಗಳ ಮಹತ್ವದ ಬಗ್ಗೆ ತಿಳಿದುಕೊಂಡ್ರು.

ಇನ್ನು ಕಾರ್ಯಕ್ರಮದಲ್ಲಿ ಚಿನ್ನಿದಾಂಡು, ಲಗೋರಿ, ಕುಂಟೆ ಬಿಲ್ಲೆ, ಹಗ್ಗಜಗ್ಗಾಟ, ಹಸು ಹುಲಿ ಆಟ ಹೀಗೆ ಅನೇಕ ಆಟಗಳನ್ನ ಆಡಿಸಲಾಯ್ತು. ಜತೆಗೆ ಉತ್ತರ ಕರ್ನಾಟಕ ಸ್ಟೈಲ್​ ಊಟವನ್ನು ಕೂಡಾ ನೀರೂರಿಸಿತ್ತು. ರೊಟ್ಟಿ, ಬದನೆಕಾಯಿ ಪಲ್ಯೆ, ಹಿಟ್ಟಿನ ಪಲ್ಯೆ, ಕೆಂಪು ಚಟ್ನಿ, ಶೇಂಗಾ ಚಟ್ನಿ, ರೊಟ್ಟಿ, ಎಳ್ಳು ಹೋಳಿಗೆ ಹೀಗೆ ಅನೇಕ ಬಗೆಯ ಖಾದ್ಯ ಎಲ್ಲರ ಬಾಯಿ ತಣಿಸಿತ್ತು.

ದಿನ ಕಳೆದಂತೆ ಮರೆಯಾಗ್ತಿರೋ ಹಳ್ಳಿ ಆಟಗಳ ಆಡಿ ಖುಷಿ ಪಡೋ ಚಾನ್ಸ್ ಗದಗ ಮಂದಿಗೆ ಸಿಕ್ಕಿತ್ತು. ಸೋ ಇಂಥಾ ಅವಕಾಶವನ್ನ ಮಿಸ್ ಮಾಡ್ಕೊಳ್ದೇ ಎಲ್ರೂ ಎಂಜಾಯ್ ಮಾಡಿ ಸ್ಪೆಷಲ್ ಊಟ ಸವಿದ್ರು.

Published On - 2:06 pm, Mon, 20 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us