Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಳು ಬಿದ್ದ ಯಾದಗಿರಿಯ ಉದ್ಯಾನವನಗಳು; ಜನರ ಹಿಡಿ ಶಾಪ

ಪಿಲ್ಟರ್ ಬೆಡ್ ಬಳಿಯಿರುವ ಗಾರ್ಡ್​ನಲ್ಲಿ ಸಾರ್ವಜನಿಕರು ಗಾರ್ಡನ್ ಜಾಗವನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಿಕೊಂಡಿದ್ದಾರೆ. ಇನ್ನು ಉಳಿದ ಗಾರ್ಡನ್ ಅಂತು ಕೇಳೋದು ಬೇಡ ಎನ್ನುವ ಸ್ಥಿತಿಗೆ ಬಂದಿದೆ. ಎಲ್ಲಿ ನೋಡಿದರು ಕಸದಿಂದ ತುಂಬಿದೆ.

ಪಾಳು ಬಿದ್ದ ಯಾದಗಿರಿಯ ಉದ್ಯಾನವನಗಳು; ಜನರ ಹಿಡಿ ಶಾಪ
ಪಾಳು ಬಿದ್ದ ಉದ್ಯಾನವನ
Follow us
sandhya thejappa
|

Updated on:Mar 22, 2021 | 5:08 PM

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಬಡಾವಣೆಗೊಂದು ಉದ್ಯಾನವನಗಳಿವೆ. ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಉದ್ಯಾನವನಗಳನ್ನು ಮಾಡಲಾಗಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಹೆಸರಿಗೆ ಮಾತ್ರ ಉದ್ಯಾನವನಗಳಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪಾಳು ಬಿದ್ದು ಹಾಳಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರದ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ 30 ಕ್ಕೂ ಅಧಿಕ ಉದ್ಯಾನವನಗಳನ್ನು ಮಾಡಲಾಗಿದೆ. ಬಹತೇಕ ಉದ್ಯಾನವನಗಳು ಉಪಯೋಗಕ್ಕೆ ಬಾರದೆ ಪಾಳು ಬಿದ್ದಿವೆ. ವಿಶೇಷವಾಗಿ ಯಾದಗಿರಿ ನಗರದ ನಜರತ್ ಕಾಲೋನಿ, ಹೊಸಹಳ್ಳಿ ಕ್ರಾಸ್, ಪಿಲ್ಟರ್ ಬೆಡ್, ಬಸವೇಶ್ವರ ನಗರ ಸೇರಿದಂತೆ ನಾನಾ ಬಡಾವಣೆಯಲ್ಲಿರುವ ಉದ್ಯಾನವನಗಳು ಉಪಯೋಗಕ್ಕೆ ಬಾರದಂತಾಗಿವೆ.  ಕಳೆದ ನಾಲ್ಕೈದು ವರ್ಷಗಳಿಂದ ಅಧಿಕಾರಿಗಳ ಗಾರ್ಡನ್​ಗಳು ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತು ಗಮನ ಹರಿಸದೆ ಇರುವುದು ಪ್ರಮುಖ ಕಾರಣವಾಗಿದೆ. ಬಸವೇಶ್ವರ ನಗರದಲ್ಲಿರುವ ಗಾರ್ಡನ್ ಕಳೆದ ನಾಲ್ಕೈದು ವರ್ಷಗಳಿಂದ ಮುಳ್ಳುಗಂಟೆ ಬೆಳೆದು ನಿಂತಿವೆ. ಅಧಿಕಾರಿಗಳು ಕನಿಷ್ಟ ಪಕ್ಷ ಮುಳ್ಳು ಗಂಟೆಯನ್ನು ತೆಗೆಸುವ ಕೆಲಸ ಕೂಡ ಮಾಡಿಲ್ಲ. ಗಾರ್ಡನ್ ತುಂಬ ಹುಲ್ಲು ಕಡ್ಡಿ ಕಸದಿಂದ ತುಂಬಿ ಹೋಗಿದೆ. ಆದರೆ ಇಲ್ಲಿವರೆಗೂ ಅಧಿಕಾರಿಗಳು ಗಮನ ಹರಿಸದೆ ಇರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಉದ್ಯಾನವನದ ಒಳಗೆ ಇತರೆ ಕಾಡು ಗಿಡಗಳು ಬೆಳೆದಿವೆ

ತುಕ್ಕು ಹಿಡಿದಿರುವ ಗೇಟ್

ಪಿಲ್ಟರ್ ಬೆಡ್ ಬಳಿಯಿರುವ ಗಾರ್ಡ್​ನಲ್ಲಿ ಸಾರ್ವಜನಿಕರು ಗಾರ್ಡನ್ ಜಾಗವನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಿಕೊಂಡಿದ್ದಾರೆ.  ಉಳಿದ ಗಾರ್ಡನ್ ಅಂತು ಕೇಳೋದು ಬೇಡ ಎನ್ನುವ ಸ್ಥಿತಿಗೆ ಬಂದಿದೆ. ಎಲ್ಲಿ ನೋಡಿದರು ಕಸದಿಂದ ತುಂಬಿದೆ.  ನಗರದಲ್ಲಿರುವ ಎಲ್ಲಾ ಗಾರ್ಡನ್​ಗಳಲ್ಲಿ ಮಕ್ಕಳಿಗೋಸ್ಕರ ಇರುವ ಆಟ ಪಿಟೋಪಕರಣಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಸಂಜೆ ಮತ್ತು ಬೆಳಗ್ಗೆ ಹಿರಿಯರು ವಾಕ್ ಮಾಡಬೇಕು ಎಂದರೂ ಸಹ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಗಾರ್ಡನ್ ತುಂಬ ಮುಳ್ಳುಗಳು ಬೆಳೆದಿದ್ದು, ಜಾನುವಾರುಗಳು ಮೇಯುವಂತ ಸ್ಥಳವಾಗಿದೆ. ನಗರದಲ್ಲಿರುವ ಉದ್ಯಾನವನಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪುಂಡ ಪೋಕರಿಗಳ ತಾಣವಾಗಿದಂತೂ ಸುಳ್ಳಲ್ಲ. ನಗರದ ಜನ ಉದ್ಯಾನವನಕ್ಕೆ ಹೋಗಬೇಕು ಎಂದರೆ ಒಂದೆ ಒಂದು ಗಾರ್ಡ್ ಸರಿಯಾದ ಸ್ಥಿತಿಯಲ್ಲಿ ಇಲ್ಲ.  ಈ ಬಗ್ಗೆ ನಗರಸಭೆ ಅಧ್ಯಕ್ಷರಿಗೆ ಕೇಳಿದರೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಆದಷ್ಟು ಬೇಗ ಗಾರ್ಡನ್​ಗಳು ಸಾರ್ವಜನಿಕರ ಉಪಯೋಗಕ್ಕೆ ಬರುವಂತ ಮಾಡಲಾಗುತ್ತದೆ ಎಂದಿದ್ದಾರೆ.

ಉಪಯೋಗಕ್ಕೆ ಬಾರದೇ ಪಾಳು ಬಿದ್ದಿರುವ ಮಕ್ಕಳ ಆಟ ಪಿಟೋಪಕರಣಗಳು

ಇದನ್ನೂ ಓದಿ

ನಟಿ ಉಮಾಶ್ರೀ ತಮ್ಮ ‘ಅನುಭವ’ದಿಂದ ಕಳೆದುಕೊಂಡಿದ್ದು ಏನು ಗೊತ್ತಾ!?

ಕರಾವಳಿಯತ್ತ ಪ್ರವಾಸಿಗರನ್ನು ಸೆಳೆಯುವುದಕ್ಕೆ ವಿನೂತನ ಪ್ರಯತ್ನ

Published On - 5:05 pm, Mon, 22 March 21

‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ