ಗಜ ಗಾಂಭೀರ್ಯ ನಡೆಗೆ ಅಡ್ಡ ಬರ್ತೀಯಾ? ರಸ್ತೆಯಲ್ಲಿ ಕಾಡಾನೆಗಳ ಕಾದಾಟ

ಹಾಸನ: ಎರಡು ಕಾಡಾನೆಗಳು ಪರಸ್ಪರ ಮುಖಾಮುಖಿಯಾಗಿ ಕಾಳಗ ನಡೆಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿತೋಟದ ರಸ್ತೆಯಲ್ಲಿ ಮದಗಜಗಳು ಕಾದಾಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಫಿತೋಟದ ರಸ್ತೆಯಲ್ಲಿ ಎರಡು ಗುಂಪುಗಳ ಆನೆ ಹಿಂಡು ಸಡನ್ ಆಗಿ ಮುಖಾಮುಖಿಯಾಗಿವೆ. ಈ ನಡುವೆ ಗಜ ಗಾಂಭೀರ್ಯ ನಡೆಗೆ ಧಕ್ಕೆಯಾಗಿದೆ. ನನ್ನ ದಾರಿಗೆ ಅಡ್ಡ ಬಂದೆಯಾ? ಎಂದು ಎರಡು ಬಲಿಷ್ಠ ಆನೆಗಳು ಫೈಟಿಂಗ್ ಶುರು ಮಾಡಿವೆ. ನಂತರ ತಮಗೆ ತಾವೇ ಸಮಾಧಾನ […]

ಗಜ ಗಾಂಭೀರ್ಯ ನಡೆಗೆ ಅಡ್ಡ ಬರ್ತೀಯಾ? ರಸ್ತೆಯಲ್ಲಿ ಕಾಡಾನೆಗಳ ಕಾದಾಟ
ಸಾಧು ಶ್ರೀನಾಥ್​

Updated on: Apr 20, 2020 | 1:42 PM

ಹಾಸನ: ಎರಡು ಕಾಡಾನೆಗಳು ಪರಸ್ಪರ ಮುಖಾಮುಖಿಯಾಗಿ ಕಾಳಗ ನಡೆಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿತೋಟದ ರಸ್ತೆಯಲ್ಲಿ ಮದಗಜಗಳು ಕಾದಾಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಫಿತೋಟದ ರಸ್ತೆಯಲ್ಲಿ ಎರಡು ಗುಂಪುಗಳ ಆನೆ ಹಿಂಡು ಸಡನ್ ಆಗಿ ಮುಖಾಮುಖಿಯಾಗಿವೆ. ಈ ನಡುವೆ ಗಜ ಗಾಂಭೀರ್ಯ ನಡೆಗೆ ಧಕ್ಕೆಯಾಗಿದೆ. ನನ್ನ ದಾರಿಗೆ ಅಡ್ಡ ಬಂದೆಯಾ? ಎಂದು ಎರಡು ಬಲಿಷ್ಠ ಆನೆಗಳು ಫೈಟಿಂಗ್ ಶುರು ಮಾಡಿವೆ. ನಂತರ ತಮಗೆ ತಾವೇ ಸಮಾಧಾನ ಮಾಡಿಕೊಂಡು ಮಂದೆ ಸಾಗಿವೆ.  ಕಾದಾಟದ ವೇಳೆ ತೋಟ ಹಾಳಾಗಿದ್ದು, ಕೊಂಚ ಬೆಳೆ ನಾಶವಾಗಿದೆ. ಆನೆಗಳ ಕಾದಾಟದ ವಿಡಿಯೋ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಆನೆ ಜಗಳ ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಸಿತ್ತು.

Published On - 1:12 pm, Mon, 20 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us