ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ: ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. […]

ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ
ಸಾಧು ಶ್ರೀನಾಥ್​

Updated on: Feb 04, 2020 | 5:44 PM

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು.

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ:
ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆನೆ ಓಡಿಸಲು ಕಾರ್ಯಾಚರಣೆ ಶುರು ಮಾಡಿದ್ರು. ಬಿದಿರೆಕೆರೆ, ಮಾಯಗೊಂಡನಹಳ್ಳಿ, ಸೊಪ್ಪಿನಹಳ್ಳಿ ಮಾರ್ಗವಾಗಿ ಬಂದು ಕೆರೆ ಸೇರಿದ್ದ ಈ ಆನೆಯನ್ನ ನೋಡೋಕೆ ಜನ ಕೂಡ ಸೇರಿದ್ರು. ಹೀಗಾಗಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ, ರಬ್ಬರ್ ಬುಲೆಟ್ ಹೊಡೆದು ಆನೆ ಕೆರೆಯಿಂದ ಹೊರ ಬರದಂತೆ ನೋಡಿಕೊಂಡ್ರು.

ಇನ್ನು ದಿನವಿಡೀ ಆನೆ ಹೊರಬರದಂತೆ ಕಾದ ಅಧಿಕಾರಿಗಳು ಸಂಜೆ ವೇಳೆಗೆ ಆನೆಯನ್ನ ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾದ್ರು. ಅದೇನೆ ಇರ್ಲಿ, ಸಾಕಿರೋ ಆನೆ ಕಂಡ್ರೆನೇ ಭಯ ಬೀಳೋ ಜನ ಕಾಡಾನೆ ಕಂಡ್ರೆ ಕೇಳ್ಬೇಕಾ. ಹೀಗಾಗಿ ಅಧಿಕಾರಿಗಳು ಆನೆಯನ್ನ ಕಾಡಿಗಟ್ಟಲು ಯಶಸ್ವಿಯಾಗಿದ್ರೂ ಆತಂಕ ಮಾತ್ರ ತಪ್ಪಿಲ್ಲ.







ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us