ಖಾಕಿ ವಿರುದ್ಧ ಕೊರೊನಾ ಅಟ್ಟಹಾಸ, ಮೂರು ಠಾಣೆಗಳು ಸೀಲ್​ಡೌನ್

ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗಳನ್ನ ಬೆನ್ನು ಬಿಡದೆ ಕಾಡ್ತಿದೆ. ಕೊರೊನಾ ವಿರುದ್ಧ ಹೋರಾಡಲು ನಿಂತವರ ಕೈಕಟ್ಟಿ ಹಾಕಿದೆ. ಹಾವೇರಿ ಜಿಲ್ಲೆಯ ಕುಮಾರಪಟ್ಟಣ, ಹಿರೇಕೆರೂರು, ಕಾಗಿನೆಲೆ ಮತ್ತು ಹಾವೇರಿ ಸಂಚಾರಿ ಠಾಣೆಗೆ ಹೆಮ್ಮಾರಿ ಕೊರೊನಾ ವಕ್ಕರಿಸಿದೆ. ಹಿರೇಕೆರೂರು ಪೊಲೀಸ್ ಠಾಣೆಯ ಐವರು ಕಾನ್ಸ್ಟೇಬಲ್​ಗಳು, ಹಾವೇರಿ ಸಂಚಾರಿ ಠಾಣೆಯ ಓರ್ವ ಕಾನ್ಸ್ಟೇಬಲ್, ಕಾಗಿನೆಲೆ ಪೊಲೀಸ್ ಠಾಣೆಯ ಓರ್ವ ಕಾನ್ಸ್ಟೇಬಲ್ ಹಾಗೂ ಕುಮಾರಪಟ್ಟಣ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕುಮಾರಪಟ್ಟಣ, ಹಿರೇಕೆರೂರು […]

ಖಾಕಿ ವಿರುದ್ಧ ಕೊರೊನಾ ಅಟ್ಟಹಾಸ, ಮೂರು ಠಾಣೆಗಳು ಸೀಲ್​ಡೌನ್
ಆಯೇಷಾ ಬಾನು Edited By:

Updated on: Jul 27, 2020 | 10:24 PM

ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗಳನ್ನ ಬೆನ್ನು ಬಿಡದೆ ಕಾಡ್ತಿದೆ. ಕೊರೊನಾ ವಿರುದ್ಧ ಹೋರಾಡಲು ನಿಂತವರ ಕೈಕಟ್ಟಿ ಹಾಕಿದೆ.

ಹಾವೇರಿ ಜಿಲ್ಲೆಯ ಕುಮಾರಪಟ್ಟಣ, ಹಿರೇಕೆರೂರು, ಕಾಗಿನೆಲೆ ಮತ್ತು ಹಾವೇರಿ ಸಂಚಾರಿ ಠಾಣೆಗೆ ಹೆಮ್ಮಾರಿ ಕೊರೊನಾ ವಕ್ಕರಿಸಿದೆ. ಹಿರೇಕೆರೂರು ಪೊಲೀಸ್ ಠಾಣೆಯ ಐವರು ಕಾನ್ಸ್ಟೇಬಲ್​ಗಳು, ಹಾವೇರಿ ಸಂಚಾರಿ ಠಾಣೆಯ ಓರ್ವ ಕಾನ್ಸ್ಟೇಬಲ್, ಕಾಗಿನೆಲೆ ಪೊಲೀಸ್ ಠಾಣೆಯ ಓರ್ವ ಕಾನ್ಸ್ಟೇಬಲ್ ಹಾಗೂ ಕುಮಾರಪಟ್ಟಣ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕುಮಾರಪಟ್ಟಣ, ಹಿರೇಕೆರೂರು ಮತ್ತು ಹಾವೇರಿ ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ.

Published On - 2:22 pm, Mon, 27 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us