ಸಚಿವರು, ಶಾಸಕರ ಸಂಬಳಕ್ಕೆ ಕೊರೊನಾ ಕಲ್ಲು ಹಾಕ್ತು, ಶೇ.30 ರಷ್ಟು ಕಟ್!

ಬೆಂಗಳೂರು: ಗಲ್ಲಿ ಗಲ್ಲಿಗೂ ನುಗ್ಗಿ ಮಹಾಮಾರಿ ಕೊರೊನಾ ಕಂಪನ ಸೃಷ್ಟಿಸಿದೆ. ಜೀವ ಮತ್ತು ಜೀವನ ಈ ಎರಡಕ್ಕೂ ಕೊರೊನಾ ಕುತ್ತು ತಂದಿದೆ. ರಾಜ್ಯದಲ್ಲಿ ಇನ್ನಿಲ್ಲದ ಆರ್ಥಿಕ ಹೊಡೆತ ತಿಂದಾಗಿದೆ. ಈ ಮಧ್ಯೆ ಶಾಸಕರು ಹಾಗೂ ಸಚಿವರ ಸಂಬಳಕ್ಕೂ ಕೊರೊನಾ ಕಲ್ಲು ಹಾಕಿದೆ. ಹೌದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ವೇತನ ಕಡಿತಕ್ಕೆ ಒಪ್ಪಿಗೆ ನೀಡಲಾಗಿದೆ. ಶೇ.30ರಷ್ಟು ವೇತನ ಕಡಿತಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವರು, ಶಾಸಕರ ಸಂಬಳಕ್ಕೆ ಕೊರೊನಾ ಕಲ್ಲು ಹಾಕ್ತು, ಶೇ.30 ರಷ್ಟು ಕಟ್!
Edited By:

Updated on: Jun 25, 2020 | 1:50 PM

ಬೆಂಗಳೂರು: ಗಲ್ಲಿ ಗಲ್ಲಿಗೂ ನುಗ್ಗಿ ಮಹಾಮಾರಿ ಕೊರೊನಾ ಕಂಪನ ಸೃಷ್ಟಿಸಿದೆ. ಜೀವ ಮತ್ತು ಜೀವನ ಈ ಎರಡಕ್ಕೂ ಕೊರೊನಾ ಕುತ್ತು ತಂದಿದೆ. ರಾಜ್ಯದಲ್ಲಿ ಇನ್ನಿಲ್ಲದ ಆರ್ಥಿಕ ಹೊಡೆತ ತಿಂದಾಗಿದೆ. ಈ ಮಧ್ಯೆ ಶಾಸಕರು ಹಾಗೂ ಸಚಿವರ ಸಂಬಳಕ್ಕೂ ಕೊರೊನಾ ಕಲ್ಲು ಹಾಕಿದೆ.

ಹೌದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ವೇತನ ಕಡಿತಕ್ಕೆ ಒಪ್ಪಿಗೆ ನೀಡಲಾಗಿದೆ. ಶೇ.30ರಷ್ಟು ವೇತನ ಕಡಿತಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

Published On - 1:45 pm, Thu, 25 June 20